ಕರ್ನಾಟಕ

karnataka

By

Published : Jun 18, 2021, 7:50 PM IST

Updated : Jun 18, 2021, 7:55 PM IST

ETV Bharat / bharat

ಆಸ್ಪತ್ರೆ 4ನೇ ಮಹಡಿಯಿಂದ ಮಗನ ಎಸೆದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ಬಿಲ್ಡಿಂಗ್​ನ 4ನೇ ಮಹಡಿಯಿಂದ ಮಗನನ್ನ ಹೊರಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Gangasheel Hospital
Gangasheel Hospital

ಬರೇಲಿ(ಉತ್ತರ ಪ್ರದೇಶ):ಆಸ್ಪತ್ರೆಯ 4ನೇ ಮಹಡಿಯಿಂದ 9 ವರ್ಷದ ಮಗನ ಎಸೆದಿರುವ ಪಾಪಿ ತಂದೆಯೊಬ್ಬ ತಂದನಂತರ ತಾನು ಅಲ್ಲಿಂದ ಜಿಗಿದಿರುವ ಘಟನೆ ಬರೇಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿರುವ ಗಂಗಾಶೀಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದರ ಮಧ್ಯೆ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಕೂಡ ಕೆಲವೊಂದು ಗಂಭೀರ ಆರೋಪ ಕೇಳಿ ಬರಲು ಶುರುವಾಗಿವೆ.

ಬರೇಲಿಯ ಗಂಗಾಶೀಲಾ ಆಸ್ಪತ್ರೆ

ಜೂನ್​​ 15ರಂದು ಬರೇಲಿಯಲ್ಲಿರುವ ಆಸ್ಪತ್ರೆಗೆ 35 ವರ್ಷದ ದೀಪಕ್​ನನ್ನು ದಾಖಲು ಮಾಡಲಾಗಿತ್ತು. ಮದ್ಯಪಾನ ವ್ಯಸನಿಯಾಗಿದ್ದ ಕಾರಣ ಅದನ್ನ ಬಿಡಿಸುವ ಉದ್ದೇಶದಿಂದ ಹಾಗೂ ಮಾನಸಿಕ ಕಾಯಿಲೆಗೋಸ್ಕರ ಚಿಕಿತ್ಸೆ ನೀಡಲಾಗುತ್ತಿತ್ತು.ಇಂದು 9 ವರ್ಷದ ಮಗ ತನ್ನ ಚಿಕ್ಕಮ್ಮನೊಂದಿಗೆ ತಂದೆಯನ್ನ ನೋಡಲು ಆಗಮಿಸಿದ್ದ. ಈ ವೇಳೆ, ಇದ್ದಕ್ಕಿದ್ದಂತೆ ದೀಪಕ್​ ತನ್ನ ಮಗನನ್ನ ನಾಲ್ಕನೇ ಮಹಡಿಯ ಕಿಟಕಿಯಿಂದ ಹೊರಗೆ ಎಸೆದಿದ್ದಾನೆ. ಇದರ ಬೆನ್ನಲ್ಲೇ ತಾನೂ ಅಲ್ಲಿಂದ ಜಿಗಿದಿದ್ದಾನೆ.

ದೀಪಕ್​ ಪತ್ನಿ ಕಾಂಚನ್​ ತನ್ನ ಗಂಡನ ಕುಡಿತದಿಂದ ಅಸಮಾಧಾನಗೊಂಡಿದ್ದಳು. ಇದೇ ಕಾರಣಕ್ಕಾಗಿ ಕಳೆದ ಕೆಲ ತಿಂಗಳ ಹಿಂದೆ ತಾಯಿ ಮನೆಗೆ ಹೋಗಿ ಉಳಿದುಕೊಂಡಿದ್ದಳು. ಇದಾದ ಬಳಿಕ ದೀಪಕ್​ ಸಂಜಯ್​ ನಗರದಲ್ಲಿ ತಾಯಿ ಹಾಗೂ ಮಗನೊಂದಿಗೆ ವಾಸಿಸುತ್ತಿದ್ದನು. ಕುಡಿತದ ಚಟ ಬಿಡಿಸುವ ಉದ್ದೇಶದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಆತನನ್ನು ಡಿಸ್ಚಾರ್ಜ್​ ಸಹ ಮಾಡಬೇಕಾಗಿತ್ತು.ಇದನ್ನೂ ಓದಿ: ಮಾವನ ಬದಲು ಅಳಿಯ ಪೊಲೀಸ್​​... ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಈ ಮಧ್ಯೆ ಈ ದುರ್ಘಟನೆ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಪ್ರೇಮ್​ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೋಸ್ಕರ ರವಾನೆ ಮಾಡಿದ್ದಾರೆ.

Last Updated : Jun 18, 2021, 7:55 PM IST

ABOUT THE AUTHOR

...view details