ಕರ್ನಾಟಕ

karnataka

By

Published : Mar 27, 2022, 7:49 PM IST

ETV Bharat / bharat

ಟಿಕಾಯತ್​ಗೆ ಕೊಲೆ ಬೆದರಿಕೆ : ಪೊಲೀಸರ ಬಗ್ಗೆ ಬೇಸರ ಹೊರ ಹಾಕಿದ ರೈತ ಹೋರಾಟಗಾರ

ಪೊಲೀಸರು ಶೀಘ್ರವಾಗಿ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ಭವಿಷ್ಯದಲ್ಲಿ ನಾನು ಬೆದರಿಕೆ ಕರೆಗಳು ಬರುವ ಎಲ್ಲ ಸಂಖ್ಯೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತೇನೆ ಎಂದು ಎಚ್ಚರಿಸಿದರು..

ಟಿಕಾಯತ್​ಗೆ ಕೊಲೆ ಬೆದರಿಕೆ ಹಾಕಿದ ಅಪರಿಚಿತರು
ಟಿಕಾಯತ್​ಗೆ ಕೊಲೆ ಬೆದರಿಕೆ ಹಾಕಿದ ಅಪರಿಚಿತರು

ಮುಜಾಫರ್‌ನಗರ (ಉತ್ತರಪ್ರದೇಶ) :ರೈತ ಮುಖಂಡ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಸ್ವೀಕರಿದ್ದು, ಘಟನೆ ಸಂಬಂಧ ದೂರು ದಾಖಲು ಮಾಡಿದ್ದಾರೆ. ಬೆಳಗ್ಗೆ ದೂರವಾಣಿ ಮೂಲಕ ಅಪರಿಚಿತ ವ್ಯಕ್ತಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನಂತೆ. ಘಟನೆ ಸಂಬಂಧ ತ್ವರಿತ ಕ್ರಮಕೈಗೊಳ್ಳಬೇಕೆಂದು ಟಿಕಾಯತ್​ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ರೈತ ಚಳವಳಿಯ ನಂತರ ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ಅಪರಿಚಿತ ಸಂಖ್ಯೆಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಕೊಲೆ ಬೆದರಿಕೆಗಳಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಬೋಯಿಂಗ್ 737-800 ವಿಮಾನ ಪತನ : ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆ

ಈ ಹಿಂದೆಯೂ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಅವರು ಅಪರಿಚಿತ ಸಂಖ್ಯೆಗಳಿಂದ ಬಂದ ಕರೆಗಳನ್ನು ಪತ್ತೆ ಹಚ್ಚಲಿಲ್ಲ. ಹಾಗೆ ಆರೋಪಿಗಳನ್ನು ಬಂಧಿಸಲಿಲ್ಲ. ಪೊಲೀಸರು ಶೀಘ್ರವಾಗಿ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ಭವಿಷ್ಯದಲ್ಲಿ ನಾನು ಬೆದರಿಕೆ ಕರೆಗಳು ಬರುವ ಎಲ್ಲ ಸಂಖ್ಯೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತೇನೆ ಎಂದು ಎಚ್ಚರಿಸಿದರು.

For All Latest Updates

ABOUT THE AUTHOR

...view details