ಕರ್ನಾಟಕ

karnataka

ETV Bharat / bharat

ಪಂಜಾಬ್​ನಲ್ಲಿ ಪ್ರತಿಭಟನೆ ವೇಳೆ ಟ್ರ್ಯಾಕ್ಟರ್​ನ ಟ್ರೇಲರ್​ ಹರಿದು ರೈತ ಸಾವು..! - ಸೆಕ್ಷನ್ 144 ಜಾರಿ

Farmer dies after being crushed by tractor trailer: ರೈತರು ಚಂಡೀಗಢದತ್ತ ಪಾದಯಾತ್ರೆ ಹೊರಟಾಗ ಪೊಲೀಸರು ಹಾಗೂ ಸಂಘಟನೆಗಳ ನಡುವೆ ಘರ್ಷಣೆ ನಡೆದು ಸಂಗ್ರೂರಿನ ಲಾಂಗೋವಾಲ್‌ನಲ್ಲಿ ರೈತರೊಬ್ಬರು ಮೃತಪಟ್ಟಿದ್ದರು. ಇದರಿಂದ ರಾಜ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Farmer dies after being crushed by tractor trailer
ಪ್ರತಿಭಟನೆ ವೇಳೆ ಟ್ರ್ಯಾಕ್ಟರ್​ನ ಟ್ರೇಲರ್​ ಹರಿದು ರೈತ ಸಾವು

By ETV Bharat Karnataka Team

Published : Aug 22, 2023, 7:47 AM IST

ಸಂಗ್ರೂರ್‌ (ಪಂಜಾಬ್):ಪಂಜಾಬ್‌ನ ಸಂಗ್ರೂರ್‌ನಲ್ಲಿ ಸೋಮವಾರ ನಡೆದ ಪ್ರತಿಭಟನೆಯ ವೇಳೆ ಟ್ರ್ಯಾಕ್ಟರ್​ನ ಟ್ರೇಲರ್​ ಹರಿದು ರೈತನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ರೈತನನ್ನು ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದೆ.

"ಟ್ರಾಕ್ಟರ್​ನ ಟ್ರಾಲಿಯು ವಯಸ್ಸಾದ ರೈತನ ಮೇಲೆ ಹರಿದಿದೆ, ಪ್ರೀತಮ್ ಸಿಂಗ್ ಅವರ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದವು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಅವರನ್ನು ಪಟಿಯಾಲಕ್ಕೆ ಕಳುಹಿಸುವಂತೆ ವೈದ್ಯರು ತಿಳಿಸಿದರು. ಅವರು ಪಟಿಯಾಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನಿಧನರಾದರು. ಇದು ತುಂಬಾ ದುರದೃಷ್ಟಕರವಾಗಿದೆ'' ಎಂದು ಸಂಗ್ರೂರ್ ಎಸ್‌ಎಸ್‌ಪಿ ಸುರೇಂದ್ರ ಲಂಬಾ ತಿಳಿಸಿದ್ದಾರೆ.

ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ- ಎಸ್ಪಿ:"ಪೊಲೀಸರು ಯಾವುದೇ ಲಾಠಿ ಚಾರ್ಜ್ ಮಾಡಲಿಲ್ಲ, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಚಲಿಸುವುದನ್ನು ಮುಂದುವರೆಸಿದರು" ಎಂದು ಸಂಗ್ರೂರ್ ಎಸ್‌ಎಸ್‌ಪಿ ಹೇಳಿದ್ದಾರೆ. ಈ ಘಟನೆಯ ವಿಡಿಯೋವನ್ನು ಸಂಗ್ರೂರ್ ಪೊಲೀಸರು ಮೊದಲು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ರೈತ ಟ್ರ್ಯಾಕ್ಟರ್‌ನ ಟೈರ್ ಅಡಿ ಬರುವುದನ್ನು ಕಾಣಬಹುದಾಗಿದೆ. ''ಪ್ರತಿಭಟನಾಕಾರರು ಟ್ರ್ಯಾಕ್ಟರ್ ಟ್ರಾಲಿಯನ್ನು ದುಡುಕಿ ಚಲಾಯಿಸಿದ್ದಾರೆ, ಇದರಿಂದ ಪೊಲೀಸ್ ಇನಸ್ಪೆಕ್ಟರ್‌ ತೀವ್ರವಾಗಿ ಗಾಯಗೊಂಡಿದ್ದಾರೆ, ಅವರು ತುಳಿತಕ್ಕೊಳಗಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮೃತರ ರೈತನಿಗೆ ನಮ್ಮಕಡೆಯಿಂದ ಸಂತಾಪವಿದೆ‘‘ ಎಂದು ಎಂದು ಸಂಗ್ರೂರ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪ್ರವಾಹ ಪೀಡಿತ ರೈತರಿಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ರೈತರು ಲಾಂಗೋವಾಲ್‌ನಲ್ಲಿ ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿರುವ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ , ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.

"ಮುಖ್ಯಮಂತ್ರಿಗಳ ತವರು ಜಿಲ್ಲೆ ಸಂಗ್ರೂರ್‌ನಲ್ಲಿ ಲಾಂಗೋವಾಲ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಪ್ರೀತಮ್ ಸಿಂಗ್ ಅವರನ್ನ ಹಗಲಿನ ವೇಳೆಯಲ್ಲಿಯೇ ಭೀಕರ ಹತ್ಯೆ ಮಾಡಲಾಗಿದೆ. ರಾಜ್ಯಾದ್ಯಂತ ವಿಶೇಷವಾಗಿ ರೈತರಲ್ಲಿ ಈ ಘಟನೆ ಆಘಾತವನ್ನುಂಟು ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭಗವಂತಮಾನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಅವರ ಆದೇಶದ ಮೇರೆಗೆ ಈ ಘಟನೆ ನಡೆದಿದೆ. ಇದನ್ನು ಕಾರ್ಯಗತಗೊಳಿಸಿದ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೂ ಪ್ರಕರಣ ದಾಖಲಿಸಬೇಕು" ಎಂದು ಸುಖಬೀರ್ ಸಿಂಗ್ ಬಾದಲ್ ಟ್ವೀಟ್​ನಲ್ಲಿ ಒತ್ತಾಯಿಸಿದ್ದಾರೆ.

ರೈತ ಮುಖಂಡರ ಬಂಧನ :ಸೋಮವಾರ ಬೆಳಗ್ಗೆಯಿಂದ ಚಂಡೀಗಢದಲ್ಲಿ 16 ರೈತ ಸಂಘಟನೆಗಳ ಸಮಾವೇಶವನ್ನು ತಡೆಯಲು ಪೊಲೀಸರು ರೈತ ಮುಖಂಡರನ್ನು ಬಂಧಿಸಲು ಆರಂಭಿಸಿದ್ದಾರೆ. ಪೊಲೀಸರ ಕ್ರಮದ ನಂತರ, ರೈತ ಸಂಘಟನೆಗಳು ಟೋಲ್ ಪ್ಲಾಜಾಗಳನ್ನು ಮುಚ್ಚಿಸಿವೆ ಮತ್ತು ಬಹುತೇಕ ಇಡೀ ಪಂಜಾಬ್‌ನಲ್ಲಿ ರಸ್ತೆಗಳನ್ನು ಬಂದ್​ ಆಗಿವೆ. ಇದಾದ ಬಳಿಕ ರೈತರು ಚಂಡೀಗಢದತ್ತ ಪಾದಯಾತ್ರೆ ಹೊರಟಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಸಂಘಟನೆಗಳು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದು ಸಂಗ್ರೂರಿನ ಲಾಂಗೋವಾಲ್‌ನಲ್ಲಿ ರೈತರೊಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಈಗಾಗಲೇ ನಗರದಲ್ಲಿ ಸೆಕ್ಷನ್-144 ಜಾರಿ ಮಾಡಲಾಗಿದೆ. ಹೀಗಾಗಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ನಗರದಲ್ಲಿ ಎಲ್ಲಿಯೂ ಸೇರುವಂತಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ರೈತರನ್ನು ತಡೆಯಲು ಅಲ್ಲಿನ ಜಿಲ್ಲಾಡಳಿತ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 4,200 ಪಡೆಗಳನ್ನು ನಿಯೋಜಿಸಿದೆ.

ಇದನ್ನೂ ಓದಿ:ಎಸ್ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮೇಲೆ ಶೂ ಎಸೆದ ಯುವಕನ ಬಂಧನ

ABOUT THE AUTHOR

...view details