ಕರ್ನಾಟಕ

karnataka

Horoscope Today: ಯಾರಿಗೆ 'ಶುಭ ಮಂಗಳ'ವಾರ.. ನೋಡಿ ನಿಮ್ಮ ರಾಶಿಫಲ

By

Published : Dec 28, 2021, 5:30 AM IST

ಇಂದಿನ ರಾಶಿ ಭವಿಷ್ಯ ಈ ಕೆಳಗಿನಂತಿದೆ..

Etv Bharatha daily horoscope
ಈಟಿವಿ ಭಾರತ ರಾಶಿ ಭವಿಷ್ಯ

ಮೇಷ : ನಿಮ್ಮ ಯಶಸ್ಸಿನ ರಹಸ್ಯಗಳನ್ನು ಹಂಚಿಕೊಳ್ಳುವುದು ಒಳ್ಳೆಯದು ಎಂದು ನೀವು ತಿಳಿಯುತ್ತೀರಿ. ನೀವು ಏನೆಲ್ಲ ನೀಡುತ್ತೀರೋ ಅದು ನಿಮಗೆ 9 ಪಟ್ಟು ಹೆಚ್ಚಾಗಿ ಹಿಂದಿರುಗುತ್ತದೆ. ಈಗ ನೀವು ಮುಕ್ತ ಹಾಗೂ ನೆರವು ನೀಡಬಲ್ಲವರಾಗಲು ಬಯಸುತ್ತೀರಿ. ನಿಮ್ಮ ದಾರಿಯಲ್ಲಿ ಹೆಚ್ಚಿನ ಗೌರವ ಲಭಿಸುವ ಸಾಧ್ಯತೆ ಇದೆ.

ವೃಷಭ : ಈ ದಿನ ವಿದ್ಯಾರ್ಥಿಗಳಿಗೆ ಕಷ್ಟಕರವಾಗಿರಲಿದೆ. ನಿಮ್ಮ ಮನಸ್ಸು ಇಂದು ಚಿಂತೆಯಿಂದ ಕೂಡಿರಲಿದೆ. ಉದರ ಸಂಬಂಧಿ ವ್ಯಾಧಿಗಳು ನಿಮ್ಮ ಚಿಂತೆಗೆ ಇನ್ನೊಂದು ಕಾರಣವಾಗಲಿದೆ. ಆದರೆ ಮಧ್ಯಾಹ್ನದ ಬಳಿಕ ಈ ವ್ಯಾಧಿಯಿಂದ ನೀವು ನೆಮ್ಮದಿ ಪಡೆಯುವಿರ. ಮಾನಸಿಕ ಒತ್ತಡಗಳಿಂದ ನೀವು ಮುಕ್ತಿ ಪಡೆಯುವಿರಿ. ನಿಮ್ಮ ಕಾರ್ಯಗಳು ಪ್ರಶಂಸೆಯನ್ನು ಗಳಿಸಲಿವೆ. ನಿಮ್ಮ ಹೆತ್ತವರಿಂದ ಶುಭಸುದ್ದಿ ಪಡೆಯುವ ಸಾಧ್ಯತೆ ಇದೆ.

ಮಿಥುನ: ಈ ದಿನ ನಿಮ್ಮ ಜೀವನದ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ನೀವು ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದೀರಿ. ಕೆಲಸದಲ್ಲಿ ನೀವು ಹಲವಾರು ಹೊಸ ಆಲೋಚನೆಗಳನ್ನು ಮಾಡುತ್ತೀರಾ. ಇದು ನಿಮ್ಮ ಇಚ್ಛಾಶಕ್ತಿಯೊಂದಿಗೆ ನಿಮ್ಮ ಕಂಪನಿಗೆ ಗೆಲ್ಲುವ ಸಂಯೋಜನೆ ನೀಡುತ್ತದೆ. ಸಂಜೆಯಲ್ಲಿ ನೀವು ಸೌಕರ್ಯಗಳು ಮತ್ತು ಮನರಂಜನೆಗೆ ಕೊಂಚ ಹಣ ಖರ್ಚು ಮಾಡಬೇಕಾಗಬಹುದು.

ಕರ್ಕಾಟಕ:ನೀವು ಇತರರಿಗೆ ಜೀವನದಲ್ಲಿ ಯಶಸ್ವಿಯಾಗುವುದು ಹೇಗೆಂದು ತೋರಿಸುತ್ತೀರಿ. ನಿಮ್ಮ ಮೇಲಧಿಕಾರಿಗಳೊಂದಿಗೆ ಸಂಘರ್ಷಕ್ಕೆ ಎಳಸುವುದರ ಬದಲಿಗೆ ನೀವು ಕೆಲಸದಲ್ಲಿ ಹೊಂದಿಕೊಳ್ಳುವ ಮತ್ತು ಸಹಕಾರ ನೀಡುವ ಸಾಧ್ಯತೆ ಇದೆ. ಸಂಜೆ ವೇಳೆಗೆ ನೀವು ಪರಿಚರೊಂದಿಗೆ ಬೆರೆಯುವ ಸಾಧ್ಯತೆಯಿದೆ. ನಿಮ್ಮ ಸಮಯವನ್ನು ಎಲ್ಲಾ ವ್ಯಾಪಾರ, ಕುಟುಂಬಕ್ಕೆ ಸಮಾನವಾಗಿ ಸಮಯ ಹಂಚಿಕೊಳ್ಳುವುದು ಸೂಕ್ತ.

ಸಿಂಹ : ಈ ದಿನ ಕಹಿಯಾಗಿ ಪ್ರಾರಂಭವಾಗುತ್ತದೆ. ನೀವು ಸಾಕಷ್ಟು ಸಂಗತಿಗಳನ್ನು ಸಾಧಿಸಲು ಬಯಸುತ್ತೀರಿ. ಆದಾಗ್ಯೂ ನೀವು ಬಯಸಿದ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಿಲ್ಲ. ದಿನದ ನಂತರವು ನಿಮ್ಮ ಎಲ್ಲಾ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಸೂಕ್ತವಾಗಿದ್ದು, ಪ್ರಗತಿ ಸಾಧಿಸಲು ನರವಾಗಲಿದೆ.

ಕನ್ಯಾ :ನೀವು ಕಷ್ಟಪಟ್ಟು ಕೆಲಸ ಮಾಡುವುದು ಸೂಕ್ತ. ಇದರಿಂದ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ನಿಮ್ಮ ಪ್ರಯತ್ನಗಳನ್ನು ಗುರುತಿಸುತ್ತಾರೆ. ಆದರೆ ಅದೇ ಪ್ರಮಾಣದಲ್ಲಿ ಮಾನ್ಯತೆ ಲಭಿಸುವುದಿಲ್ಲ. ನೀವು ಸಾಧ್ಯವಿರುವಷ್ಟು ಅತ್ಯುತ್ತಮ ಪ್ರಯತ್ನ ಮಾಡಿದ್ದೀರಿ ಎಂಬ ಸಮಾಧಾನದಲ್ಲಿ ನಿರಾಳವಾಗಬಹುದು.

ತುಲಾ : ನೀವು ಇಂದು ವ್ಯಾಪಾರದಲ್ಲಿ ಯಾವುದೇ ಹೊಸ ಉದ್ಯಮಗಳು, ಒಪ್ಪಂದಗಳು ಮತ್ತು ವ್ಯವಹಾರಗಳನ್ನು ತೆಗೆದುಕೊಳ್ಳುವುದರ ಕುರಿತು ಎಚ್ಚರಿಕೆ ವಹಿಸಬೇಕು. ನೀವು ನಿಮ್ಮ ಕಚೇರಿಯಲ್ಲಿ ಉನ್ನತಾಧಿಕಾರಿಗಳ ಕೋಪವನ್ನು ನೋಡುತ್ತೀರಾ, ಆದರೆ ಮಧ್ಯಾಹ್ನದ ನಂತರ ನಿಮ್ಮ ಕೆಲಸದ ಸಾಮರ್ಥ್ಯ ಮತ್ತು ಕೌಶಲ್ಯಗಳು ಅವರನ್ನು ಪ್ರಭಾವಿಸುತ್ತವೆ ಮತ್ತು ಅವರಿಗೆ ನಿಮ್ಮ ಬಗ್ಗೆ ಹಿಂದೆ ಇದ್ದ ಅನುಮಾನಗಳು ನಿವಾರಣೆಯಾಗುತ್ತವೆ. ನೀವು ಕೆಲಸದಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಇಂದು ನಿಮ್ಮ ಕುಟುಂಬದ ಜನರು ನೀವು ನಿರ್ಲಕ್ಷಿಸುತ್ತಿದ್ದೀರಿ ಎಂದು ಕೋಪಗೊಳ್ಳುತ್ತಾರೆ.

ವೃಶ್ಚಿಕ : ನಿಮ್ಮ ದೂರದೃಷ್ಟಿ ನಿಮ್ಮನ್ನು ಹಣಕಾಸು ಭದ್ರತೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ ನೀವು ದೀರ್ಘಾವಧಿ ಹೂಡಿಕೆಗಳನ್ನು ಮಾಡುವ ಮನಸ್ಥಿತಿಯಲ್ಲಿದ್ದೀರಿ. ಜನರು ನಿಮ್ಮನ್ನು ಜಾಣರೆಂದು ನೋಡುತ್ತಾರೆ ಮತ್ತು ನಿಮ್ಮಿಂದ ಹೆಚ್ಚಿನ ಮೌಲ್ಯಗಳನ್ನು ನಿರೀಕ್ಷೆ ಮಾಡುತ್ತಾರೆ.

ಧನು :ನೀವು ತೀವ್ರ ಸ್ಪರ್ಧೆಯಲ್ಲಿ ಸಿಲುಕಿಕೊಂಡಿದ್ದೀರಿ ಎಂದು ಭಾವಿಸುತ್ತೀರಿ ಮತ್ತು ನಿಮಗೆ ಇದು ಉಳಿಯಲು ಅತ್ಯಂತ ಅಗತ್ಯವಾಗುತ್ತದೆ. ಇದು ಸವಾಲಿನದಾದರೂ ಜೀವನದಲ್ಲಿ ನೀವು ಹೊಸ ಪ್ರಯತ್ನ ಕೈಗೊಳ್ಳಲು ಉತ್ಸುಕರಾಗಿರುತ್ತೀರಿ. ಸಂಜೆಯಲ್ಲಿ ಬಿಡುವು ತೆಗೆದುಕೊಳ್ಳಿ ಮತ್ತು ಕುಟುಂಬ ಹಾಗೂ ಮಿತ್ರರೊಂದಿಗೆ ಆನಂದಿಸಿರಿ.

ಮಕರ :ಇಂದು ನಿಮ್ಮ ಆದರ್ಶ ವ್ಯಕ್ತಿಯಿಂದ ಸಾಧನೆ ಮಾಡಲು ಸ್ಫೂರ್ತಿ ಪಡೆಯುತ್ತೀರಿ. ದಿನದ ನಂತರದ ಭಾಗದಲ್ಲಿ ನೀವು ಯಾರೊಂದಿಗೋ ವಾಗ್ಯುದ್ಧದಲ್ಲಿ ತೊಡಗುತ್ತೀರಿ. ಇದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಕೆಲ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ ಇದು ನಿಮ್ಮ ವೃತ್ತಿಭವಿಷ್ಯಕ್ಕೂ ಹಾನಿಯುಂಟು ಮಾಡಬಹುದು.

ಕುಂಭ : ನೀವು ಇಂದು ಶಾಂತಿದೂತರ ಪಾತ್ರ ವಹಿಸುತ್ತೀರಿ. ನೀವು ನಿಮ್ಮನ್ನೂ ಒಳಗೊಂಡು ಪ್ರತಿಯೊಬ್ಬರ ಸಮಸ್ಯೆಯನ್ನೂ ಔಚಿತ್ಯ ಪ್ರಜ್ಞೆ ಮತ್ತು ತಂತ್ರದಿಂದ ಪರಿಹರಿಸುವ ಸಾಮರಸ್ಯದ ಪರಿಸರವನ್ನು ಸೃಷ್ಟಿಸುತ್ತೀರಿ. ನಿಮ್ಮ ದಾರಿಯಲ್ಲಿ ಬರುವ ಉದ್ಯೋಗಾವಕಾಶಗಳನ್ನು ಅಪ್ಪಿಕೊಳ್ಳಿ. ನೀವು ನಿಮ್ಮ ಪ್ರಿಯತಮೆಯೊಂದಿಗೆ ಕೃಪೆಯ ಸಂಜೆ ಆನಂದಿಸುತ್ತೀರಿ.

ಮೀನ : ಇಂದು ಸಾಕಷ್ಟು ಯಶಸ್ಸ ಸಿಗುವ ಸಾಧ್ಯತೆ ಇದೆ. ನೀವು ಇಂದು ಹಾಕುವ ಕಠಿಣ ಪ್ರಯತ್ನಗಳು ನಿಮಗೆ ಹಲವು ಪುರಸ್ಕಾರಗಳು ಮತ್ತು ಪ್ರಶಂಸೆ ತಂದುಕೊಡುತ್ತವೆ.

ABOUT THE AUTHOR

...view details