ಕರ್ನಾಟಕ

karnataka

ದ್ವಾದಶ ರಾಶಿಗಳ ಫಲಾಫಲ : ಈ ರಾಶಿಯವರು ಮನೆಯವರಿಗೆ ಹೆಚ್ಚು ಆದ್ಯತೆ ನೀಡಲಿದ್ದಾರೆ..

By

Published : Jul 31, 2022, 5:01 AM IST

ಇಂದಿನ ರಾಶಿ ಭವಿಷ್ಯ ಹೀಗಿದೆ..

Daily Horoscope
Daily Horoscope

ಮೇಷ : ನಿಮ್ಮ ಮಕ್ಕಳು ನಿಮ್ಮ ಆದ್ಯತೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ನೀವು ನಿಮ್ಮ ಕೆಲಸಕ್ಕೆ ಹಾಕುವ ಪ್ರಯತ್ನಗಳ ಪ್ರಮಾಣದಿಂದ ನೀವು ಎಲ್ಲ ಬಾಕಿ ಇರುವ ಕೆಲಸಗಳನ್ನೂ ಖಂಡಿತಾ ಪೂರೈಸುತ್ತೀರಿ. ನೀವು ಸಾರ್ವಜನಿಕ ವಲಯದಲ್ಲಿ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಅದೃಷ್ಟದ ದಿನವಾಗುತ್ತದೆ.

ವೃಷಭ : ಇಂದು ನಿಮ್ಮ ಸೃಜನಶೀಲ ಪ್ರವೃತ್ತಿ ನಿಮ್ಮ ಸ್ಪರ್ಧಾತ್ಮಕತೆಯ ಭಾಗಕ್ಕೆ ಪೂರಕವಾಗಿರುತ್ತದೆ. ನಿಮ್ಮ ದಕ್ಷತೆ ಗುರುತಿಸದೇ ಹೋಗುವುದಿಲ್ಲ ಮತ್ತು ನೀವು ನಿಮ್ಮ ಕಾರ್ಯವೈಖರಿಯಿಂದ ಪ್ರತಿಯೊಬ್ಬರನ್ನೂ ಆಶ್ಚರ್ಯಗೊಳಿಸುತ್ತೀರಿ. ನೀವು ಇಂದು ನಿಮ್ಮ ಸಹೋದ್ಯೋಗಿಗಳನ್ನು ಖಂಡಿತಾ ಪ್ರೇರೇಪಣೆ ಮತ್ತು ಪ್ರಭಾವಿತಗೊಳಿಸುತ್ತೀರಿ.

ಮಿಥುನ :ನೀವು ಇಂದು ಭಾವನೆಗಳ ಚಕ್ರಸುಳಿಯನ್ನು ಅನುಭವಿಸುವ ಸಾಧ್ಯತೆ ಇದ್ದು ನೀವು ನಿಮ್ಮ ಮೆದುಳಿಗೆ ಬದಲಾಗಿ ಹೃದಯಕ್ಕೆ ಆದ್ಯತೆ ನೀಡುತ್ತೀರಿ. ಇದು ಹಿಂದಕ್ಕೆ ಹೊಡೆಯುತ್ತದೆ, ಏಕೆಂದರೆ ನಿಮಗೆ ಯಾರಿಗೆ ಮನಸ್ಸಿನಲ್ಲಿ ಒಳ್ಳೆಯ ಉದ್ದೇಶವಿದೆ ಅಥವಾ ಯಾರಿಗೆ ಕೆಟ್ಟ ಉದ್ದೇಶವಿದೆ ಎಂದು ನಿಮಗೆ ತಿಳಿಯುವುದಿಲ್ಲ. ಆದರೆ ಇದು ಬಹಳ ಕಾಲ ಉಳಿಯುವುದಿಲ್ಲ, ಏಕೆಂದರೆ ಸಂಜೆ ನಿಮಗೆ ಶುಭಸುದ್ದಿ ತರಬಹುದು.

ಕರ್ಕಾಟಕ :ನೀವು ಭವಿಷ್ಯಕ್ಕಾಗಿ ಯೋಜಿಸುತ್ತಿರುವುದರಿಂದ ನಿಮ್ಮ ದಿನ ಸ್ಫೂರ್ತಿದಾಯಕ ರೀತಿಯಲ್ಲಿ ಪ್ರಾರಂಭವಾಗುತ್ತದೆ. ನೀವು ನಿಮ್ಮ ವಿವರವಾದ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೀರಿ. ಭವಿಷ್ಯವನ್ನು ಯೋಜಿಸುವುದರಿಂದ, ನೀವು ಇತರೆ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯ ಉಳಿಸುತ್ತೀರಿ. ನೀವು ಕೈಗೊಳ್ಳುವ ಪ್ರತಿ ಕೆಲಸವೂ ದಿನದ ಅಂತ್ಯಕ್ಕೆ ಉತ್ಸಾಹಕರ ಫಲಿತಾಂಶಗಳನ್ನು ನೀಡುತ್ತದೆ.

ಸಿಂಹ :ಹೊಸ ಉದ್ಯಮಗಳು ಮತ್ತು ಗುರಿಗಳು ನಿಮ್ಮ ಜೊತೆಯಲ್ಲಿರುವ ಸಾಧ್ಯತೆ ಇದೆ. ನೀವು ಏನೇ ಕೈಗೊಂಡರೂ ಅದನ್ನು ಸಮರ್ಥವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಬಾಂಧವ್ಯದಲ್ಲಿ ಕೊಂಚ ತೊಂದರೆ ಎದುರಿಸಿದರೂ ಸುಲಭವಾಗಿ ನಿಭಾಯಿಸಬಹುದಾದ ಮತ್ತು ಪರಿಹರಿಸಬಹುದಾದ ಯಾವುದೂ ಇಲ್ಲ.

ಕನ್ಯಾ : ಈ ದಿನ ನಿಮಗೆ ನಿಮ್ಮ ಕುಟುಂಬದ ವಿಷಯಗಳ ಮೌಲ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಮುಂದಿನ ವಿವಾದಗಳು ನಿಮ್ಮ ಅದ್ಭುತ ಸಂಧಾನ ಕೌಶಲ್ಯಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ ಮತ್ತು ಹಲವು ಪಾಠಗಳನ್ನು ಬೋಧಿಸುತ್ತದೆ.

ತುಲಾ :ಭೋಜನ ರಸಿಕತೆ ಇಂದು ನಿಮ್ಮಲ್ಲಿ ಎಚ್ಚರಗೊಳ್ಳುತ್ತದೆ. ನಿಮಗೆ ದೊರೆಯುವ ಪ್ರತಿ ರುಚಿಯನ್ನೂ ಆಸ್ವಾದಿಸಿ. ಕೆಲಸದ ವಿಷಯದಲ್ಲಿ ವಿವಿಧ ಆಯ್ಕೆಗಳಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಹಂತಕ್ಕೆ ಬರುತ್ತೀರಿ. ಆದರೆ ಚಿಂತಿಸಬೇಕಿಲ್ಲ. ದೇವರಿಗೆ ಕೃತಜ್ಞತೆ ಸಲ್ಲಿಸಿ ಮತ್ತು ದಾರಿ ಆಯ್ಕೆ ಮಾಡಿಕೊಳ್ಳುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ.

ವೃಶ್ಚಿಕ :ನೀವು ಇಂದು ಸಾಮಾಜಿಕ ಚಿಟ್ಟೆಯಾಗಿರುತ್ತೀರಿ. ಆದಾಗ್ಯೂ, ಗಾಸಿಪ್ ಗಳಿಗೆ ತಡೆಯೊಡ್ಡಿ ನಿಮ್ಮ ಸಾಮಾಜಿಕ ಗುಂಪುಗಳಲ್ಲಿ ಕರುಣೆ ಮತ್ತು ಸಂತೋಷ ಹರಡುತ್ತೀರಿ. ಜನರು ಇಂದು ಇದೇ ಕಾರಣಕ್ಕೆ ನಿಮ್ಮತ್ತ ನೋಡುತ್ತಾರೆ. ಏನನ್ನು ಬಿತ್ತುತ್ತೀರೋ ಅದನ್ನೇ ಬೆಳೆಯುತ್ತೀರಿ; ಆನಂದವನ್ನು ಹರಡಿ ಮತ್ತು ನೀವು ಖಂಡಿತಾ ಸಂತೋಷ ಸ್ವೀಕರಿಸುತ್ತೀರಿ.

ಧನು :ಕಛೇರಿಯಲ್ಲಿ ನಿಮ್ಮ ಇಚ್ಛಾಶಕ್ತಿ ಮತ್ತು ಬದ್ಧತೆ ಸಾಕಷ್ಟು ಕಾರ್ಯದೊತ್ತಡ ಆಕರ್ಷಿಸಬಹುದು. ನೀವು ವರ್ಕೊಹಾಲಿಕ್ ಆಗುವ ಸಾಧ್ಯತೆಗಳಿವೆ. ಸಂಜೆಯ ವೇಳೆಗೆ, ನೀವು ವಿಶ್ರಾಂತಿ ಕಂಡುಕೊಳ್ಳುತ್ತೀರಿ ಮತ್ತು ಉಳಿದ ದಿನವನ್ನು ಆನಂದಿಸುತ್ತೀರಿ.

ಮಕರ :ನೀವು ಕಾನೂನು ಸಂಘರ್ಷಕ್ಕೆ ಸಿಲುಕುತ್ತೀರಿ, ನೀವು ಸತತವಾಗಿ ರಕ್ಷಣೆಯಲ್ಲಿರಬೇಕು ಮತ್ತು ಯಾವ ಆಯ್ಕೆಯನ್ನೂ ಬಿಡಬಾರದು. ನೀವು ಹಣಕಾಸಿನ ನಷ್ಟಗಳನ್ನು ಹೊಂದಬಹುದು. ನೀವು ದಲ್ಲಾಳಿಯ ರೀತಿಯಲ್ಲಿದ್ದರೆ, ನೀವು ಮಹತ್ತರ ನಷ್ಟ ಅನುಭವಿಸಬಹುದು. ಅದನ್ನು ತಡೆಯಲು ಎಲ್ಲ ಸಮಯದಲ್ಲೂ ಜಾಗರೂಕರಾಗಿರಿ ಮತ್ತು ಲಭ್ಯವಿರುವ ಪ್ರತಿ ಅವಕಾಶವನ್ನೂ ಬಳಸಿಕೊಳ್ಳಿ.

ಕುಂಭ :ಇದು ಕುಟುಂಬದ ಸಮಯ, ಮತ್ತು ನಿಮ್ಮ ಪ್ರೀತಿಪಾತ್ರರು ಅತ್ಯಂತ ಸಂತೋಷಗೊಳ್ಳುತ್ತಾರೆ. ನೀವು ಅವರನ್ನು ಖುಷಿಯಿಂದ ಇರಿಸುತ್ತೀರಿ, ಅವರು ನಗುವಂತೆ ಮಾಡಲು ತಮಾಷೆಯ ಮುಖಗಳನ್ನೂ ಹೊರತೆಗೆಯುತ್ತೀರಿ. ನಿಮ್ಮ ಪ್ರೀತಿ ಮತ್ತು ಮಮತೆ ನಿಜಕ್ಕೂ ಪ್ರತಿಫಲ ನೀಡುತ್ತದೆ, ಮತ್ತು ನಿಮಗೆ ಒಂದಕ್ಕಿಂತ ಹಲವು ವಿಧಗಳಲ್ಲಿ ಹಿಂದಿರುಗುತ್ತದೆ. ನೀವು ಕುಟುಂಬಕ್ಕೆ ಮುಡಿಪಾಗಿರುವುದರಿಂದ ನಿಮ್ಮ ಬೆನ್ನು ತಟ್ಟಲೇಬೇಕು.

ಮೀನ :ನೀರಿನ ಮೇಲೆ ತೇಲುವುದಕ್ಕೆ ಈಜಾಡುವಷ್ಟೇ ಪ್ರಯತ್ನ ಅಗತ್ಯವಾಗುತ್ತದೆ. ಇದು ಗೊಂದಲ ಎನಿಸಬಹುದು, ನಿಮಗೆ ಅದರ ಅರ್ಥ ಎಂದರೆ ಸತತವಾಗಿ ಮುನ್ನಡೆಯಲು ನಿಮ್ಮನ್ನು ನೀವು ಮರು ಅನ್ವೇಷಿಸಿಕೊಳ್ಳಬೇಕು. ನಿಮ್ಮ ವೃತ್ತಿಯಲ್ಲಿ ನೀವು ಬೆಳಗಬೇಕಾದರೆ ಅದು ನಿಮ್ಮ ತೀವ್ರ ಆಕಾಂಕ್ಷೆಯೂ ಆಗಿರಬೇಕು.

ABOUT THE AUTHOR

...view details