ಕರ್ನಾಟಕ

karnataka

By

Published : Nov 18, 2021, 5:12 AM IST

ETV Bharat / bharat

ಇಂದಿನ ನಿಮ್ಮ ರಾಶಿ ಭವಿಷ್ಯ: ಯಾರಿಗುಂಟು ಧನಲಾಭ..?

ನಿಮ್ಮ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ಓದಿ..

Horoscope
Horoscope

ಮೇಷ: ಹಳೆಯ ಆತ್ಮೀಯ ನೆನಪುಗಳು ಇಂದು ನಿಮ್ಮ ಮನಸ್ಥಿತಿಯನ್ನು ನಿರ್ಧರಿಸುತ್ತವೆ. ಅವು ನೀವು ಕೆಲಸದೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂದು ತೋರುತ್ತವೆ. ಇತರರಿಗೆ ನಿಮ್ಮ ಒಳ್ಳೆಯತನ ಕಾಣುವಂತೆ ಮಾಡುತ್ತವೆ. ನೀವು ಹಣದೊಂದಿಗೆ ಜಾಗರೂಕತೆ ವಹಿಸುತ್ತೀರಿ ಮತ್ತು ಅದನ್ನು ಉಳಿಸುವ ಕುರಿತು ಪ್ರಯತ್ನಿಸುತ್ತೀರಿ.

ವೃಷಭ: ಇಂದು ನೀವು ಅತಿಯಾದ ಆಕ್ರಮಣಶೀಲತೆ, ಪ್ರಾಬಲ್ಯದಿಂದ ವರ್ತಿಸುತ್ತೀರಿ. ನಿಮ್ಮ ಆಕ್ರಮಣಶೀಲತೆಯನ್ನು ನಿಯಂತ್ರಿಸುವುದು ಅಗತ್ಯ. ಹೊಸ ಉದ್ಯಮಗಳು ಮತ್ತು ಜವಾಬ್ದಾರಿಗಳಿಗೆ ಇದು ಸೂಕ್ತವಾದ ದಿನವಲ್ಲ. ಆದ್ದರಿಂದ ಯಾವುದೇ ಹೊಸದನ್ನು ಪ್ರಯತ್ನಿಸದಿರಿ. ಸ್ನೇಹಪರವಾಗಿ ಮಾತನಾಡಿ.

ಮಿಥುನ:ನಿಮ್ಮ ಆಕ್ರಮಣಕಾರಿ ಸ್ವಭಾವದಿಂದ ನೀವು ಜನರೊಂದಿಗೆ ವಾದವಿವಾದದಲ್ಲಿ ಸಿಲುಕಿಕೊಳ್ಳುತ್ತೀರಿ. ಈ ಜನರು ನಿಮ್ಮ ಶತೃತ್ವದಿಂದಾಗಿ ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತಾರೆ. ಆದಾಗ್ಯೂ, ನೀವು ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೀರಿ. ಅವರು ನಿಮ್ಮ ಬೌದ್ಧಿಕ ಔನ್ನತ್ಯದಿಂದ ಕೈ ಚೆಲ್ಲಬೇಕಾಗುತ್ತದೆ. ಎಚ್ಚರದಿಂದಿರಿ.

ಕರ್ಕಾಟಕ:ನಿಮ್ಮ ದಾರಿಯಲ್ಲಿ ಹೊಸ ಜವಾಬ್ದಾರಿಗಳು ಬಂದಂತೆ, ನೀವು ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ ಮತ್ತು ಅದರಿಂದ ಸುಸ್ತಾದ ಭಾವನೆ ಹೊಂದುತ್ತೀರಿ. ನೀವು ಮುನ್ನಡೆದಂತೆ ಒತ್ತಡವೂ ಉಂಟಾಗುವ ಸಾಧ್ಯತೆ ಇದೆ.

ಸಿಂಹ ::ಇಂದು ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನಿಮ್ಮ ಅಹ‍ಂ ನಿಮ್ಮನ್ನು ತಡೆಯದಂತೆ ನೋಡಿಕೊಳ್ಳಿ. ಪ್ರಣಯರೀತಿ ತೊಡಗಿಕೊಳ್ಳಲು ಉತ್ತಮ ದಿನದಂತೆ ಕಾಣುತ್ತಿದೆ ಆದರೆ ನಿಮ್ಮ ಅಹಂ ಪಕ್ಕಕ್ಕೆ ಇರಿಸಿದ ನಂತರ ಮಾತ್ರ ಮುನ್ನಡೆಯಿರಿ.

ಕನ್ಯಾ:ಇಡೀ ದಿನ ಗೊತ್ತಿಲ್ಲದ ವಿಷಯಕ್ಕೆ ನಿಮ್ಮ ಮನಸ್ಸು ಭಯಗ್ರಸ್ತವಾಗಿರುತ್ತದೆ. ನಿಮ್ಮ ಮಿತ್ರರಲ್ಲಿ ಅತಿಯಾದ ಖರ್ಚು ಮಾಡುವ ಸನ್ನಿವೇಶಗಳಿಂದ ದೂರವಿರಿ. ಈ ದಿನ ನಿಮ್ಮಿಂದ ಕೊಂಚ ಜಾಗರೂಕತೆ ಅಗತ್ಯವಿದೆ.

ತುಲಾ:ರಿಯಲ್ ಎಸ್ಟೇಟ್​​ಗಳು ಮತ್ತು ವಿಮಾ ಪಾಲಿಸಿಗಳಲ್ಲಿ ಹೂಡಿಕೆಗಳು ನಿಮಗೆ ಹಣವನ್ನು ತಂದುಕೊಡಲಿವೆ. ನಿಮ್ಮ ಮಕ್ಕಳು ಹೊಸ ಎತ್ತರಗಳನ್ನು ತಲುಪಲಿದ್ದು ನೀವು ಹೆಮ್ಮೆಯಿಂದ ಬೀಗುತ್ತೀರಿ. ಕೆಲಸದ ವಿಷಯದಲ್ಲಿ, ವೇತನ ಹೆಚ್ಚಳ ನಿಮ್ಮ ದಾರಿಯಲ್ಲಿರುವುದನ್ನು ಗಮನಿಸಿ. ನಿಮ್ಮ ಪಿತ್ರಾರ್ಜಿತ ರೂಪದಲ್ಲಿ ಕೂಡಾ ಹಣಕಾಸಿನ ಅನುಕೂಲಗಳು ದೊರೆಯಬಹುದು.

ವೃಶ್ಚಿಕ:ನಿಮ್ಮ ಜೀವನದಲ್ಲಿ ಮತ್ತೊಂದು ಸಾಧಾರಣ ದಿನವಾಗಿದ್ದು, ಉತ್ಸಾಹ ಹುಟ್ಟಿಸುವ ಯಾವುದೂ ನಿಮಗಾಗಿ ಇಲ್ಲ. ಆದಾಗ್ಯೂ, ಉತ್ಸಾಹದಿಂದಿರಿ ಮತ್ತು ಜೀವನಕ್ಕೆ ಕೊಂಚ ಮಸಾಲೆ ತರಲು ಪ್ರಯತ್ನ ನಡೆಸುತ್ತಲೇ ಇರಿ. ಗ್ರಹಗಳು ತಮ್ಮ ಮನಸ್ಥಿತಿ ಎಂದು ಬದಲಾಯಿಸಿಕೊಳ್ಳುತ್ತವೆ ಹಾಗೂ ಉತ್ಸಾಹದ ಭವಿಷ್ಯ ರೂಪಿಸುತ್ತವೆ ಎಂದು ನಿಮಗೆ ಗೊತ್ತಿಲ್ಲ. ಭರವಸೆಯನ್ನು ಜೀವಂತವಾಗಿರಿಸಿ.

ಧನು:ಕಷ್ಟಪಡದೇ ಇದ್ದರೆ ಫಲ ದೊರೆಯುವುದಿಲ್ಲ. ಆದ್ದರಿಂದ, ನಿಮ್ಮ ಕೆಲಸದಲ್ಲಿ ನೀವು ಅಪಾರ ತಳಮಳ ಎದುರಿಸಿದರೆ ಮತ್ತು ಕಷ್ಟಪಟ್ಟರೆ, ಅದಕ್ಕೆ ಪ್ರತಿಫಲ ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಎಲ್ಲರೂ ಒಟ್ಟಿಗೆ ಸೇರಲು ಮತ್ತು ಬಂಧುಮಿತ್ರರೊಂದಿಗೆ ಸಂಜೆಯ ಸಂತೋಷ ಕೂಟ ನಡೆಸಲು ಇದು ಸಕಾಲ! ಒಟ್ಟಿನಲ್ಲಿ, ಸಾಕಷ್ಟು ವಿನೋದಮಯ ಚಟುವಟಿಕೆಗಳ ದಿನವಾಗಿದೆ.

ಮಕರ:ನಿಮ್ಮ ಕೈಗಳು ಅಪಾರ ಯೋಜನೆಗಳು ಮತ್ತು ಕೆಲಸಗಳಿಂದ ತುಂಬಿದೆ. ಅವುಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಪೂರ್ಣಗೊಳಿಸಿ ಮತ್ತು ಉಳಿದ ದಿನವನ್ನು ನಿಮ್ಮ ಮನಸ್ಸಿಗೆ ಉತ್ಸಾಹ ತುಂಬುವಲ್ಲಿ ಕಳೆಯಿರಿ. ಜೀವನದ ಎಲ್ಲ ವಲಯಗಳ ಜನರೊಂದಿಗೆ ಮಾತುಕತೆ ನಿಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ. ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ, ನಿಮಗೆ ಇಷ್ಟಬಂದಂತೆ ಕಾಲ ಕಳೆಯಲು ಮುಕ್ತರಾಗಿರುತ್ತೀರಿ.

ಕುಂಭ:ಇಂದು ನಿಮಗೆ ಪಾರ್ಟಿ ಮಾಡಲು ಕಾರಣ ಬೇಕಿಲ್ಲ, ಏಕೆಂದರೆ ಅದು ನಿಮಗೆ ತಾನಾಗಿಯೇ ಬರುತ್ತದೆ. ನಿಮ್ಮ ದಾರಿಯಲ್ಲಿ ಬರುವ ಯಾವುದೇ ಸುದ್ದಿಯಿಂದ, ಖಂಡಿತವಾಗಿಯೂ ನೀವು ಸಂಭ್ರಮಿಸಲು ಬಯಸುತ್ತೀರಿ. ನಿಮ್ಮ ದಿನ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಗುರಿಗಳನ್ನು ಪೂರೈಸುವಲ್ಲಿ ಒಂದು ಇಂಚು ಮುಂದಿದ್ದೀರಿ.

ಮೀನ:ನೀವು ವಿಶ್ವಾಸದ ಕೊರತೆ ಮತ್ತು ಗೊಂದಲದ ಭಾವನೆ ಹೊಂದಿದ್ದು ಅದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಫಲಿಸುತ್ತದೆ. ಇದು ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಿಮಗ ತೊಂದರೆಯನ್ನೂ ಉಂಟು ಮಾಡಬಹುದು. ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮುನ್ನಡೆಯಿರಿ. ಯಾವುದೇ ಬಗೆಯ ವಿವಾದದಲ್ಲಿ ಸಿಲುಕಿಕೊಳ್ಳುವುದು ಅಥವಾ ದೊಡ್ಡ ಯೋಜನೆಗಳನ್ನು ರೂಪಿಸುವುದನ್ನು ತಪ್ಪಿಸಿರಿ.

ABOUT THE AUTHOR

...view details