ಕರ್ನಾಟಕ

karnataka

ಪಿಎಂ ಆವಾಸ್​ ಯೋಜನೆಯಲ್ಲಿ ವಂಚನೆ.. ಔರಂಗಾಬಾದ್‌ನಲ್ಲಿ ಇಡಿ ದಾಳಿ

By

Published : Mar 17, 2023, 7:34 PM IST

ಪಿಎಂ ಆವಾಸ್​ ಯೋಜನೆಯಲ್ಲಿ ನಡೆದಿರುವ ವಂಚನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಔರಂಗಾಬಾದ್​ನ ಮೂರು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ.

ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ

ಔರಂಗಾಬಾದ್ :ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ನಡೆದಿರುವ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನ ಮೂರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಶೋಧ ನಡೆಸಿತು. ಈ ಸಂಬಂಧ ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಪೊಲೀಸರಿಗೆ ದೂರು ನೀಡಿದ್ದು, ಮೂರು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಡೆಪ್ಯುಟಿ ಕಮಿಷನರ್ ಅಪರ್ಣಾ ಥೀಟೆ ಅವರು ಸಲ್ಲಿಸಿದ ದೂರಿನ ಪ್ರಕಾರ, ಸಮರ್ಥ್ ಕನ್ಸ್ಟ್ರಕ್ಷನ್, ಜಾಗ್ವಾರ್ ಗ್ಲೋಬಲ್ ಸರ್ವಿಸಸ್ ಮತ್ತು ಇಂಡೋ-ಎಲ್ ಗ್ಲೋಬಲ್ ಇನ್ಫ್ರಾಸ್ಟ್ರಕ್ಚರ್ ಒಂದೇ ಕಂಪ್ಯೂಟರ್‌ನಿಂದ ತಮ್ಮ ಇ-ಟೆಂಡರ್‌ಗಳನ್ನು ಸಲ್ಲಿಸಿವೆ. ಇದು ಮಹಾನಗರ ಪಾಲಿಕೆಯ ನಿಯಮಗಳು ಮತ್ತು ಷರತ್ತುಗಳಿಗೆ ವಿರುದ್ಧವಾಗಿದೆ. ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಸರಕಾರಕ್ಕೆ ವಂಚನೆ ಎಸಗಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ :ಸಿಕ್ಕಿಂನಲ್ಲಿ ಭಾರಿ ಹಿಮಪಾತ.. 15 ಕಿ.ಮೀಟ್ರಾಫಿಕ್‌ ಜಾಮ್‌, ಒಂದು ಸಾವಿರ ಪ್ರವಾಸಿಗರನ್ನ ರಕ್ಷಿಸಿದ ಸೇನೆ

PMJAY ಯೋಜನೆ ಪ್ರಾರಂಭಿಸಲು ನಾಲ್ಕು ಟೆಂಡರ್​ : ಕುತೂಹಲಕಾರಿ ಸಂಗತಿಯೆಂದರೆ, ಈ ಮೂರು ಕಂಪನಿಗಳ ಆರ್ಥಿಕ ಸಾಮರ್ಥ್ಯದ ಕೊರತೆಯಿಂದಾಗಿ ಮಹಾನಗರ ಪಾಲಿಕೆಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ಬರಲಿಲ್ಲ. ದೂರಿನ ಪ್ರಕಾರ, ನಾಲ್ಕು ಸ್ಥಳಗಳಲ್ಲಿ PMJAY ಯೋಜನೆಯನ್ನು ಪ್ರಾರಂಭಿಸಲು ನಾಲ್ಕು ಟೆಂಡರ್‌ಗಳನ್ನು ಕರೆಯಲಾಯಿತು. ಮೂರು ಕಂಪನಿಗಳು ಶಾಮೀಲಾಗಿ ಮೂರು ಟೆಂಡರ್‌ಗಳನ್ನು ಸಲ್ಲಿಸಿದ್ದರೆ, ಟೆಂಡರ್ ಸಲ್ಲಿಸಿದ ಮತ್ತೊಂದು ಕಂಪನಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಇದನ್ನೂ ಓದಿ :ಮದ್ಯ ನೀತಿ ಹಗರಣ: ಮತ್ತೆ ಐದು ದಿನಗಳ ಕಾಲ ಇಡಿ ವಶಕ್ಕೆ ಮನೀಶ್ ಸಿಸೋಡಿಯಾ

ಔರಂಗಾಬಾದ್‌ನಲ್ಲಿ ಪಿಎಂಜೆಎವೈ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರಗಳ ಬಗ್ಗೆ ಹಲವು ದೂರುಗಳು ಬಂದಿವೆ. ನಗರದಲ್ಲಿ ಏಳು ನಿವೇಶನಗಳಲ್ಲಿ 39,730 ಮನೆಗಳು ನಿರ್ಮಾಣವಾಗಬೇಕಿದ್ದರೆ, 7 ಸಾವಿರ ಮನೆಗಳು ಮಾತ್ರ ಪೂರ್ಣಗೊಂಡಿವೆ. ಯೋಜನೆಯಡಿ ಫಲಾನುಭವಿಗಳ ಸಂಖ್ಯೆಯನ್ನು 40,000 ಕ್ಕೆ ಹೆಚ್ಚಿಸಲು, ಅನೇಕ ಮನೆಗಳನ್ನು ಯೋಜಿಸಲಾಗಿದ್ದು, ನಗರದಲ್ಲಿ 86 ಹೆಕ್ಟೇರ್‌ನಲ್ಲಿ ಕಾಮಗಾರಿ ನಡೆಯುತ್ತಿದೆ.

ಇದನ್ನೂ ಓದಿ :ಮಗನಿಗೆ ಸುನ್ನತಿ ಮಾಡಿಸಿದ್ದಕ್ಕೆ ಸೊಸೆ, ಆಕೆ ತಾಯಿಯ ಬರ್ಬರ ಹತ್ಯೆ: ಪೊಲೀಸರ ಅತಿಥಿಯಾದ ಮೂವರು ಆರೋಪಿಗಳು..!

ವಸತಿ ಇಲಾಖೆ ಸಮಿತಿ ರಚಿಸಿ ವಿಚಾರಣೆ :ಯೋಜನೆ ಜಾರಿಯಲ್ಲಿ ಲೋಪವಾಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಸತಿ ಇಲಾಖೆ ಸಮಿತಿ ರಚಿಸಿ ವಿಚಾರಣೆ ನಡೆಸಿತ್ತು. ವರದಿಗಳ ಪ್ರಕಾರ, ರಾಜ್ಯ ಸರ್ಕಾರವು ಯೋಜನೆಯನ್ನು ರದ್ದುಗೊಳಿಸಿರುವ ಬಗ್ಗೆ ಪ್ರಧಾನಿ ಕಾರ್ಯಾಲಯದ ಗಮನಕ್ಕೆ ಬಂದಿದೆ. ಹಗರಣದ ಅಡಿ ಸುಮಾರು 1,000 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಹಲವರು ಊಹಿಸಿದ್ದಾರೆ. ಈ ಬಗ್ಗೆ ಇಡಿ ಶೀಘ್ರದಲ್ಲೇ ತನಿಖೆ ನಡೆಸಲಿದೆ ಎಂಬ ಸೂಚನೆಗಳೂ ಇವೆ.

ಇದನ್ನೂ ಓದಿ :ಗಂಗೋತ್ರಿ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ಹಿಮ ಚಿರತೆ ಪ್ರತ್ಯಕ್ಷ

ABOUT THE AUTHOR

...view details