ಕರ್ನಾಟಕ

karnataka

ETV Bharat / bharat

ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ - ಯುಎನ್​ಎಸ್​ಸಿ ಸಭೆ

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬುಧವಾರ "ರೆಸಲ್ಯೂಷನ್ 2532 (2020) ಅನುಷ್ಠಾನ" ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಕ್ತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

EAM Jaishankar
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್

By

Published : Feb 17, 2021, 12:31 PM IST

ನವದೆಹಲಿ:ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯಲ್ಲಿ ಭಾಗವಹಿಸಿ, ರೆಸಲ್ಯೂಶನ್ 2532 (2020) ಅನುಷ್ಠಾನದ ಬಗ್ಗೆ ಮಾತನಾಡಲಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಜೈಶಂಕರ್ ಅವರು ಜುಲೈ 1, 2020 ರಂದು ಭದ್ರತಾ ಮಂಡಳಿಯು ಅಂಗೀಕರಿಸಿದ, ರೆಸಲ್ಯೂಷನ್ 2532 (2020) ಅನುಷ್ಠಾನದ ಕುರಿತು ಮಾತನಾಡಲಿದ್ದಾರೆ.

ವಿಶ್ವದಾದ್ಯಂತದ ಕೋವಿಡ್​​-19 ಸಾಂಕ್ರಾಮಿಕ ರೋಗದ ವಿನಾಶಕಾರಿ ಪರಿಣಾಮ, ಸಶಸ್ತ್ರ ಸಂಘರ್ಷಗಳಿಂದ ಹಾನಿಗೊಳಗಾದ ದೇಶಗಳು, ಸಂಘರ್ಷದ ನಂತರದ ಸಂದರ್ಭಗಳಲ್ಲಿ ಅಥವಾ ಮಾನವೀಯ ಬಿಕ್ಕಟ್ಟಿನಿಂದ ಪ್ರಭಾವಿತವಾದ ಬಗ್ಗೆ ಈ ನಿರ್ಣಯವು ಒತ್ತಿ ಹೇಳುತ್ತದೆ.

ಓದಿ: ಟೂಲ್​ಕಿಟ್​ ಪ್ರಕರಣ: ಇಂದು ನಿಕಿತಾ ಜಾಕೋಬ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

ಇರಾಕ್​ನಲ್ಲಿನ ಇಸ್ಲಾಮಿಕ್ ಸ್ಟೇಟ್ ಮತ್ತು ಲೆವಂಟ್, ಅಲ್ ಖೈದಾ ಮತ್ತು ಅಲ್ ನುಸ್ರಾ ಫ್ರಂಟ್​​ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳಿಗೆ ಈ ಸಾಮಾನ್ಯ ಮತ್ತು ತಕ್ಷಣದ ಯುದ್ಧ ಹಾಗೂ ಈ ಮಾನವೀಯ ವಿರಾಮ ಅನ್ವಯಿಸುವುದಿಲ್ಲ ಎಂದು ಎಂಟು ಅಂಶಗಳ ಕ್ರಿಯಾ ಯೋಜನೆ ದೃಢಪಡಿಸುತ್ತದೆ. ನುಸ್ರಾ ಫ್ರಂಟ್ (ಎಎನ್‌ಎಫ್), ಇತರ ಎಲ್ಲ ವ್ಯಕ್ತಿಗಳು, ಗುಂಪುಗಳು, ಸಂಸ್ಥೆಗಳು ಮತ್ತು ಅಲ್ ಖೈದಾ ಅಥವಾ ಐಎಸ್‌ಐಎಲ್‌ಗೆ ಸಂಬಂಧಿಸಿದ ಘಟಕಗಳು ಹಾಗೂ ಇತರ ಭಯೋತ್ಪಾದಕ ಗುಂಪುಗಳನ್ನು ಭದ್ರತಾ ಮಂಡಳಿಯು ಗೊತ್ತುಪಡಿಸಿದೆ.

ABOUT THE AUTHOR

...view details