ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಸರ್ಕಾರ ಚೀನಾ, ಪಾಕಿಸ್ತಾನ ಒಟ್ಟಿಗೆ ತಂದಿದೆ ಎಂದ ರಾಹುಲ್‌: ಸಚಿವ ಜೈಶಂಕರ್‌ ತಿರುಗೇಟು - EAM Jaishankar slams Rahul Gandhi

1970ರ ದಶಕದಿಂದ ಉಭಯ ದೇಶಗಳು ಸಹ ನಿಕಟ ಪರಮಾಣು ಸಹಯೋಗವನ್ನು ಹೊಂದಿದ್ದವು. 2013 ರಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಾರಂಭವಾಯಿತು. ಆಗ ಚೀನಾ ಮತ್ತು ಪಾಕಿಸ್ತಾನ ದೂರವಾಗಿದ್ದವೇ ಎಂದು ರಾಹುಲ್‌ ಗಾಂಧಿ ಆರೋಪಕ್ಕೆ ಸಚಿವ ಎಸ್‌.ಜೈಶಂಕರ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

EAM Jaishankar slams Rahul Gandhi
ಪ್ರಧಾನಿ ಮೋದಿ ಸರ್ಕಾರ ಚೀನಾ, ಪಾಕಿಸ್ತಾನವನ್ನು ಒಟ್ಟಿಗೆ ತಂದಿದೆ ಎಂದ ರಾಹುಲ್‌ಗೆ ಸಚಿವ ಜೈಶಂಕರ್‌ ತಿರುಗೇಟು

By

Published : Feb 3, 2022, 9:26 AM IST

ನವದೆಹಲಿ: ಪ್ರಧಾನಿ ಮೋದಿ ಸರ್ಕಾರವು ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದಿದೆ ಎಂದು ಲೋಕಸಭೆಯಲ್ಲಿ ನಿನ್ನೆ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ತಿರುಗೇಟು ನೀಡಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನ ಆರೋಪಕ್ಕೆ ತೀಕ್ಷ್ಣ ಉತ್ತರ ನೀಡಿರುವ ಜೈಶಂಕರ್, 1963 ರಲ್ಲಿ ಪಾಕಿಸ್ತಾನವು ಶಾಕ್ಸ್‌ಗಾಮ್ ಕಣಿವೆಯನ್ನು ಅಕ್ರಮವಾಗಿ ಚೀನಾಕ್ಕೆ ಹಸ್ತಾಂತರಿಸಿತು. 1970 ರ ದಶಕದಲ್ಲಿ ಚೀನಾ ಪಿಒಕೆ ಮೂಲಕ ಕಾರಕೋರಂ ಹೆದ್ದಾರಿಯನ್ನು ನಿರ್ಮಿಸಿತು. 1970ರ ದಶಕದಿಂದ ಉಭಯ ದೇಶಗಳು ಸಹ ನಿಕಟ ಪರಮಾಣು ಸಹಯೋಗವನ್ನು ಹೊಂದಿದ್ದವು.

2013 ರಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಾರಂಭವಾಯಿತು. ಆಗ ಚೀನಾ ಮತ್ತು ಪಾಕಿಸ್ತಾನ ದೂರವಾಗಿದ್ದವೇ ಎಂಬುದನ್ನು ನಿಮ್ಮನ್ನ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದಿದ್ದಾರೆ.

ಚೀನೀಯರು ತಾವು ಏನು ಮಾಡಬೇಕೆಂದು ಬಯಸುತ್ತಾರೆ ಎಂಬುದರ ಬಗ್ಗೆ ಬಹಳ ಸ್ಪಷ್ಟವಾದ ದೃಷ್ಟಿಯನ್ನು ಹೊಂದಿದ್ದಾರೆ. ಭಾರತದ ವಿದೇಶಾಂಗ ನೀತಿಯ ಏಕೈಕ ದೊಡ್ಡ ಕಾರ್ಯತಂತ್ರದ ಗುರಿಯು ಪಾಕಿಸ್ತಾನ ಮತ್ತು ಚೀನಾವನ್ನು ಪ್ರತ್ಯೇಕವಾಗಿ ಇಡುವುದು.

ಇದು ಭಾರತಕ್ಕೆ ಮೂಲಭೂತವಾಗಿದೆ. ನೀವು ಏನು ಮಾಡಿದ್ದೀರಿ, ನೀವು ಅವರನ್ನು ಒಟ್ಟಿಗೆ ಸೇರಿಸಿದ್ದೀರಿ ಎಂದು ರಾಹುಲ್‌ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರದಲ್ಲಿನ ವಿದೇಶಾಂಗ ನೀತಿಯ ಬಗ್ಗೆ ಟೀಕಿಸಿ ದೇಶವು ಸಂಪೂರ್ಣವಾಗಿ ಪ್ರತ್ಯೇಕವಾಗಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ನಿನ್ನೆ ಟ್ವೀಟ್‌ ಮಾಡಿದ್ದರು.

ಗಣರಾಜ್ಯೋತ್ಸವದಂದು ನಿಮಗೆ ಅತಿಥಿಗಳನ್ನು ಕರೆ ತರಲು ಯಾಕೆ ಸಾಧ್ಯವಾಗಿಲ್ಲ ಎಂಬುದನ್ನು ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ. ಇಂದು ಭಾರತವು ಸಂಪೂರ್ಣವಾಗಿ ಪ್ರತ್ಯೇಕವಾಗಿದೆ. ಶ್ರೀಲಂಕಾ, ನೇಪಾಳ, ಬರ್ಮಾ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾ ದೇಶಗಳಿಂದ ನಾನು ಸುತ್ತುವರೆದಿದ್ದೇವೆ.
ನಾನು ಮಾತನಾಡುವ ಮನೋಭಾವವು ನಮ್ಮ ರಾಷ್ಟ್ರದ ಸ್ಥಿತಿಯ ಬಗ್ಗೆ ಅಸಮಾಧಾನವನ್ನು ಹೊಂದಿದೆ. ನಾವು ವೇಗವಾಗಿ ಮತ್ತು ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು ಎಂದಿದ್ದರು.

ಈ ಆರೋಪಕ್ಕೆ ಸಚಿವ ಜೈಶಂಕರ್‌ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ವಾಸಿಸುವವರಿಗೆ ನಾವು ಕರೋನಾ ಅಲೆಯ ನಡುವೆ ಇದ್ದೇವೆ ಎಂದು ತಿಳಿದಿದೆ. ಬರಬೇಕಿದ್ದ 5 ಮಧ್ಯ ಏಷ್ಯಾದ ಅಧ್ಯಕ್ಷರು ಜನವರಿ 27 ರಂದು ವರ್ಚುಯಲ್ ಶೃಂಗಸಭೆ ನಡೆಸಿದ್ದಾರೆ. ರಾಹುಲ್ ಗಾಂಧಿ ಇದನ್ನು ತಪ್ಪಿಸಿಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details