ಕರ್ನಾಟಕ

karnataka

ದುರ್ಗಾ ದೇವಿ ನಿಮಜ್ಜನ ವೇಳೆ ಹಠಾತ್​ ಪ್ರವಾಹ.. ನದಿ ನೀರಲ್ಲಿ ಕೊಚ್ಚಿಹೋದ 7 ಮಂದಿ

By

Published : Oct 6, 2022, 6:55 AM IST

Updated : Oct 6, 2022, 7:08 AM IST

ದೇವಿ ಮೂರ್ತಿ ನಿಮಜ್ಜನ ವೇಳೆ ಹಠಾತ್​ ಪ್ರವಾಹ ಉಂಟಾಗಿ ನದಿಯಲ್ಲಿ 7 ಜನರು ಕೊಚ್ಚಿಹೋದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ. ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.

during-durga-idol-immersion-tragic-in-west-bengal
ದುರ್ಗಾ ದೇವಿ ನಿಮಜ್ಜನ ವೇಳೆ ಹಠಾತ್​ ಪ್ರವಾಹ

ಜಲ್​ಪೈಗುರಿ(ಪಶ್ಚಿಮಬಂಗಾಳ):ವಿಜಯದಶಮಿ ಆಚರಣೆ ಬಳಿಕ ದುರ್ಗಾ ಮೂರ್ತಿ ನಿಮಜ್ಜನ ವೇಳೆ ನದಿ ಪ್ರವಾಹ ಉಂಟಾಗಿ 7 ಜನರು ಕೊಚ್ಚಿಹೋಗಿ, ಹಲವರು ನಾಪತ್ತೆಯಾದ ಘಟನೆ ಪಶ್ಚಿಮಬಂಗಾಳದಲ್ಲಿ ಬುಧವಾರ ರಾತ್ರಿ ನಡೆದಿದೆ.

ದುರ್ಗಾ ಮೂರ್ತಿ ನಿಮಜ್ಜನ ವೇಳೆ ಸ್ಥಳದಲ್ಲಿಯೇ ಎನ್​ಡಿಆರ್​ಎಫ್​ ತಂಡ ಹಾಜರಿದ್ದ ಕಾರಣ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ನದಿ ಗಡ್ಡೆಯಲ್ಲಿ ಸಿಲುಕಿದ್ದ 40 ಜನರನ್ನು ರಕ್ಷಿಸಲಾಗಿದೆ.

ಜಲ್​ಪೈಗುರಿ ಎಂಬಲ್ಲಿ ದೇವಿ ಮೂರ್ತಿ ನಿಮಜ್ಜನಕ್ಕಾಗಿ ಮಾಲ್​ ನದಿಗೆ 50 ಕ್ಕೂ ಅಧಿಕ ಜನರು ತೆರಳಿದ್ದರು. ಈ ವೇಳೆ ಹಠಾತ್​ ಪ್ರವಾಹ ಬಂದಿದೆ. ಸಂಭ್ರಮದಲ್ಲಿದ್ದ ಜನರು ಪ್ರವಾಹದಿಂದ ಗಲಿಬಿಲಿಗೊಂಡಿದ್ದಾರೆ. ನೋಡನೋಡುತ್ತಿದ್ದಂತೆ ಹಲವರು ನೀರಿಗೆ ಕೊಚ್ಚಿಹೋದರು. ಇನ್ನೂ ಕೆಲವರು ನದಿಯಲ್ಲಿನ ಗಡ್ಡೆಯ ಮೇಲೆ ತೆರಳಿದರು. ನೀರು ಪೂರ್ಣವಾಗಿ ಗಡ್ಡೆಯನ್ನು ಆವರಿಸಿಕೊಂಡಿದೆ.

ಸ್ಥಳದಲ್ಲೇ ಇದ್ದ ಪೊಲೀಸರು ಮತ್ತು ಎನ್​ಡಿಆರ್​ಎಫ್​ ಪಡೆ ತಕ್ಷಣವೇ ನದಿಗೆ ಜಿಗಿದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದವರನ್ನು ಹಗ್ಗದ ಸಹಾಯದಿಂದ ಬದುಕುಳಿಸಿದ್ದಾರೆ. ಅಲ್ಲದೇ, ನದಿಯಲ್ಲಿ ಸಿಲುಕಿದ್ದ 40 ಜನರನ್ನು ರಕ್ಷಿಸಿದ್ದಾರೆ.

ದುರ್ಗಾ ದೇವಿ ನಿಮಜ್ಜನ ವೇಳೆ ಹಠಾತ್​ ಪ್ರವಾಹ

ಕೊಚ್ಚಿಹೋಗಿದ್ದ 7 ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಕಣ್ಮರೆಯಾದ ಇನ್ನಷ್ಟು ಜನರ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ:ಪಶ್ಚಿಮಬಂಗಾಳದಲ್ಲಿ ನಡೆದ ದುರಂತದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ದುರ್ಗಾದೇವಿ ಸಂಭ್ರಮಾಚರಣೆ ವೇಳೆ ದುರಂತ ನಡೆದಿರುವುದು ದುಖಃಕರ ಸಂಗತಿ. ಮಡಿದವರ ಕುಟುಂಬಕ್ಕೆ ನೆರವು ನೀಡಿ. ಅವರಿಗೆ ದುಃಖ ಭರಿಸುವ ಶಕ್ತಿ ದೇವಿ ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ.

ಓದಿ:ನಾಗರಹೊಳೆಯಲ್ಲಿ ಗಾಯಗೊಂಡ ಆನೆ ಮರಿ ಕಂಡ ರಾಹುಲ್​: ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ಪತ್ರ

Last Updated : Oct 6, 2022, 7:08 AM IST

ABOUT THE AUTHOR

...view details