ಮುಂಬೈ: ಸಾಮಾನ್ಯವಾಗಿ ಟೀ, ಕಾಫಿ ಕುಡಿದ ಮೇಲೆ ಬಳಸಿದ ಕಪ್ಗಳನ್ನು ತೊಳೆದಿಡುತ್ತೇವೆ. ಪೇಪರ್ ಅಥವಾ ಪ್ಲಾಸ್ಟಿಕ್ ಕಪ್ ಆಗಿದ್ದರೆ ಅದನ್ನು ಬಿಸಾಡ್ತೇವೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನೀವು ಟೀ ಕುಡಿದರೆ ಅದರೊಟ್ಟಿಗೆ ಕಪ್ ಅನ್ನೂ ತಿನ್ನಬಹುದು. ಈ ತಿನ್ನುವ ಕಪ್ಗಳನ್ನು ಬಿಸ್ಕತ್ತು ಕಪ್ ಎಂದು ಕರೆಯಲಾಗುತ್ತದೆ. ದಿಗ್ವಿಜಯ್ ಗಾಯಕ್ವಾಡ್, ಆದೇಶ್ ಕರಂಡೆ ಮತ್ತು ರಾಜೇಶ್ ಖಮ್ಕರ್ ಎಂಬುವವರು ಈ ಕಪ್ಗಳನ್ನು ತಯಾರಿಸಿದ್ದಾರೆ.
ಈ ಮೂವರು ಸೇರಿ "ಮ್ಯಾಗ್ನೆಟ್ ಎಡಿಬಲ್ ಕಟ್ಲರಿ" ಎಂಬ ಬ್ರಾಂಡ್ ಅನ್ನು ಅಭಿವೃದ್ಧಿಪಡಿಸಿದ್ರು. ಹಿಟ್ಟಿನಿಂದ ತಯಾರಿಸಿದ ಬಿಸ್ಕತ್ತು ಕಪ್ಗಳನ್ನು ಈ ಬ್ರ್ಯಾಂಡ್ನಡಿ ಉತ್ಪಾದಿಸುತ್ತಾರೆ. ಕಪ್ ತಿನ್ನಲು ತುಂಬಾ ರುಚಿಯಾಗಿದೆ ಎನ್ನುತ್ತಾರೆ ಗ್ರಾಹಕರು.
ಲಾಕ್ಡೌನ್ ವೇಳೆ ಯುವಕರ ಹೊಸ ಆವಿಷ್ಕಾರ ಈ ಕುರಿತು ಪ್ರತಿಕ್ರಿಯಿಸಿರುವ ತಯಾರಿಕೆದಾರರು, ಎಡಿಬಲ್ ಕಪ್ಗಳ ಪರಿಸರ ಪ್ರಯೋಜನಗಳ ಬಗ್ಗೆ ಮಾರಾಟಗಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇವುಗಳಿಗೆ ಪ್ಲಾಸ್ಟಿಕ್ ಕಪ್ಗಳಿಗಿಂತ ಹೆಚ್ಚು ಬೇಡಿಕೆ ಇದೆ. ಇದರ ಬಳಕೆಯಿಂದ ಪರಿಸರಕ್ಕೂ ಪ್ರಯೋಜನವಿದೆ. ತ್ಯಾಜ್ಯ ಉತ್ಪಾದನೆ ನಿಯಂತ್ರಿಸಲು ಈ ಕಪ್ ಬಳಸುವುದು ಪ್ರಯೋಜನಕಾರಿ. ಜನರು ಕಪ್ ತಿನ್ನದಿದ್ದರೆ ಅದು ವ್ಯರ್ಥವಾಗುವುದಿಲ್ಲ. ಪ್ರಾಣಿಗಳು ಅದನ್ನು ತಿನ್ನಬಹುದು. ಆದ್ದರಿಂದ ಇದು ತ್ಯಾಜ್ಯ ನಿಯಂತ್ರಣಕ್ಕೂ ಸಹಾಯಕಾರಿ ಎಂದಿದ್ದಾರೆ.
ಸಚಿವ ಸತೇಜ್ ಪಾಟೀಲ ಮತ್ತು ಶಾಸಕ ರುತುರಾಜ್ ಪಾಟೀಲ ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜನರು ಈ ಕಪ್ಗಳಲ್ಲಿ ಚಹಾ ಕುಡಿಯುವುದನ್ನು ಆನಂದಿಸುತ್ತಾರೆ. ಈ ಎಡಿಬಲ್ ಕಟ್ಲರಿಗಳು ಪರಿಸರ ಸಂರಕ್ಷಣೆಗೆ ಉತ್ತಮ ಉಪಾಯಗಳಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ.