ಕರ್ನಾಟಕ

karnataka

By

Published : Jul 4, 2022, 10:31 AM IST

ETV Bharat / bharat

'ಈದ್​ ವೇಳೆ ಗೋವು ಬಲಿ ಕೊಡಬೇಡಿ': ಮುಸ್ಲಿಂ ಸಮುದಾಯಕ್ಕೆ ಅಸ್ಸೋಂ ಸಂಸದ ಕರೆ

ಮಾತೃ ಸ್ವರೂಪಿ ಗೋವನ್ನು ರಕ್ಷಿಸುವುದು ಪ್ರತಿ ಭಾರತೀಯನ ಕರ್ತವ್ಯ. ಹೀಗಾಗಿ ಈದ್​ ಆಚರಣೆಯಲ್ಲಿ ಬಲಿ ಕೊಡುವುದನ್ನು ನಿಲ್ಲಿಸಬೇಕು ಎಂದು ಅಸ್ಸೋಂ ಸಂಸದರೊಬ್ಬರು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಈದ್​ ವೇಳೆ ಗೋವು ಬಲಿ ಕೊಡಬೇಡಿ: ಮುಸ್ಲಿಂ ಸಮುದಾಯಕ್ಕೆ ಅಸ್ಸೋಂ ಸಂಸದ ಕರೆ
ಈದ್​ ವೇಳೆ ಗೋವು ಬಲಿ ಕೊಡಬೇಡಿ: ಮುಸ್ಲಿಂ ಸಮುದಾಯಕ್ಕೆ ಅಸ್ಸೋಂ ಸಂಸದ ಕರೆ

ಗುವಾಹಟಿ:ಗೋರಕ್ಷಣೆಗಾಗಿ ಸರ್ಕಾರಗಳು ಏನೆಲ್ಲಾ ಕಾಯ್ದೆಗಳನ್ನು ಜಾರಿ ಮಾಡಿದ್ದರೂ, ಈದ್​ ಆಚರಣೆಯ ವೇಳೆ ಪ್ರಾಣಿಬಲಿ(ಗೋವು) ಎಗ್ಗಿಲ್ಲದೇ ನಡೆಯುತ್ತದೆ. ಇದನ್ನು ಮಾಡದಂತೆ ಅಸ್ಸೋಂ ರಾಜ್ಯದ ಮುಸ್ಲಿಂ ರಾಜಕೀಯ ಮುಖಂಡರೊಬ್ಬರು ಕರೆ ನೀಡಿದ್ದಾರೆ.

ಜುಲೈ 10ರಂದು ಆಚರಿಸುವ ಈದ್ ಸಂದರ್ಭದಲ್ಲಿ ಗೋವುಗಳನ್ನು ಬಲಿ ನೀಡದಂತೆ ಅಸ್ಸೋಂನ ಮುಸ್ಲಿಂ ಸಮುದಾಯವನ್ನು ಲೋಕಸಭೆ ಸಂಸದ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಒತ್ತಾಯಿಸಿದ್ದಾರೆ.

"ಭಾರತ ವಿವಿಧ ಸಮುದಾಯ, ಜನಾಂಗ ಮತ್ತು ಧರ್ಮಗಳ ನೆಲೆಬೀಡಾಗಿದೆ. ಗೋವನ್ನು ಪವಿತ್ರ ಸಂಕೇತವಾಗಿ ಪೂಜಿಸುವ ಸನಾತನ ನಂಬಿಕೆಯನ್ನು ಬಹುಪಾಲು ಭಾರತೀಯರು ಆಚರಿಸುತ್ತಾರೆ. ಹಿಂದೂಗಳು ಗೋವನ್ನು ತಾಯಿ ರೂಪದಲ್ಲಿ ಕಾಣುತ್ತಾರೆ. ಹಬ್ಬದ ಆಚರಣೆ ನೆಪದಲ್ಲಿ ಯಾವುದೇ ಪ್ರಾಣಿಗಳನ್ನು ಬಲಿ ಕೊಡುವುದು ಒಳ್ಳೆಯದಲ್ಲ" ಎಂದಿದ್ದಾರೆ.

ಜವಾಬ್ದಾರಿ ಮೆರೆಯಿರಿ:ಧಾರ್ಮಿಕ ಜವಾಬ್ದಾರಿ ಮೆರೆಯಲು ಮತ್ತು ಇತರರ ಭಾವನೆಗಳಿಗೆ ಧಕ್ಕೆ ತರುವುದನ್ನು ತಪ್ಪಿಸಲು ಮುಸ್ಲಿಂ ಸಮುದಾಯವು ಹಸುಗಳನ್ನು ಬಲಿ ಕೊಡುವ ಬದಲಾಗಿ, ಇತರ ಪ್ರಾಣಿಗಳನ್ನು ಬಳಸಿಕೊಳ್ಳಲು ಸಂಸದ ಅಜ್ಮಲ್​ ವಿನಂತಿಸಿದರು.

ದೇಶದ ಅತಿದೊಡ್ಡ ಇಸ್ಲಾಮಿಕ್ ಶೈಕ್ಷಣಿಕ ಸಂಸ್ಥೆಯಾದ ದಾರುಲ್ ಉಲೂಮ್ ದಿಯೋಬಂದ್ ಎರಡು ವರ್ಷಗಳ ಹಿಂದೆ ಈದ್‌ನಲ್ಲಿ ಗೋವುಗಳನ್ನು ಬಲಿ ನೀಡುವುದನ್ನು ತಪ್ಪಿಸುವಂತೆ ಮನವಿ ಮಾಡಿತ್ತು. ಹೀಗಾಗಿ ಈದ್​ ವೇಳೆ ಮಾತೃಸ್ವರೂಪಿ ಗೋವನ್ನು ಬಲಿ ಮಾಡಬೇಡಿ. ಈ ಆಚರಣೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಎಂದಿದ್ದಾರೆ.

ಈ ಹಿಂದೆ ಜಮಿಯತ್ ಉಲೇಮಾ-ಎ-ಹಿಂದ್‌ನ ಅಸ್ಸೋಂ ಘಟಕವೂ ಗೋಬಲಿಯನ್ನು ತಡೆಯಲು ವಿನಂತಿಸಿದೆ.

ಗಮನಾರ್ಹ ಸಂಗತಿಯೆಂದರೆ, ಅಸ್ಸೋಂನಲ್ಲಿ ಗೋಮಾಂಸ ಸೇವಿಸದ ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮತ್ತು 15-16 ನೇ ಶತಮಾನದ ಸಂತರು ರೂಪಿಸಿದ ದೇವಾಲಯಗಳು ಮತ್ತು 'ಸತ್ರಾ'ಗಳ 5 ಕಿಮೀ ವ್ಯಾಪ್ತಿಯೊಳಗೆ ಗೋಮಾಂಸ ಮಾರಾಟವನ್ನು ರಾಜ್ಯ ಸರ್ಕಾರವು ಕಳೆದ ವರ್ಷ ನಿರ್ಬಂಧಿಸಿದೆ.

ಇದನ್ನೂ ಓದಿ:ಮುಳುಗು ಭೀತಿಯಲ್ಲಿ ಸಿಡ್ನಿ: ಸುರಕ್ಷಿತ ಸ್ಥಳಗಳಿಗೆ ತೆರಳಲು 32 ಸಾವಿರ ಜನರಿಗೆ ಸೂಚನೆ

ABOUT THE AUTHOR

...view details