ಕರ್ನಾಟಕ

karnataka

ವಲಸಿಗರಿಗೆ ಪಡಿತರ ಪಡೆಯಲು ಅಡೆತಡೆ ಮಾಡಬೇಡಿ: ದೆಹಲಿ ಸರ್ಕಾರಕ್ಕೆ ಪಿಯೂಷ್​ ಪತ್ರ

By

Published : Jun 11, 2021, 9:57 PM IST

2018 ರ ಏಪ್ರಿಲ್‌ನಲ್ಲಿ ದೆಹಲಿ ಸರ್ಕಾರ ಇ - ಪೋಸ್ ವ್ಯವಸ್ಥೆಯ ಮೂಲಕ ಪಡಿತರ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್, ಪಡಿತರ ಧಾನ್ಯಗಳನ್ನು ಪಡೆಯಲು ಬಡ ವಲಸಿಗರಿಗೆ ಅಡೆತಡೆ ಮಾಡಬಾರದು ಮತ್ತು 'ಒನ್ ನೇಷನ್ ಒನ್ ರೇಷನ್ ಕಾರ್ಡ್ (ಒನೋರ್ಕ್)' ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

Goyal to Delhi govt
ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್

ನವದೆಹಲಿ:ಪಡಿತರ ಧಾನ್ಯಗಳನ್ನು ಪಡೆಯಲು ಬಡ ವಲಸಿಗರಿಗೆ ಅಡೆತಡೆಗಳನ್ನು ಸೃಷ್ಟಿಸಬಾರದು ಮತ್ತು 'ಒನ್ ನೇಷನ್ ಒನ್ ರೇಷನ್ ಕಾರ್ಡ್ (ಒನೋರ್ಕ್)' ಯೋಜನೆಯನ್ನು ಜಾರಿಗೆ ತರಬೇಕು ಎಂದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಇ - ಪೋಸ್ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಸಾಧನಗಳನ್ನು ಹೊಂದಿಸುವುದು ಒಎನ್‌ಒಆರ್‌ಸಿ ಅನುಷ್ಠಾನಕ್ಕೆ ಅಗತ್ಯವಾಗಿದೆ.

2018 ರ ಏಪ್ರಿಲ್‌ನಲ್ಲಿ ದೆಹಲಿ ಸರ್ಕಾರ ಇ - ಪೋಸ್ ವ್ಯವಸ್ಥೆಯ ಮೂಲಕ ಪಡಿತರ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇ-ಪೋಸ್ ಸಾಧನಗಳನ್ನು ಶೀಘ್ರವಾಗಿ ಪುನಾರಂಭಿಸಬೇಕು ಎಂಬುದರ ಕುರಿತು ದೆಹಲಿ ಸರ್ಕಾರಕ್ಕೆ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಪತ್ರಗಳನ್ನು ಬರೆದಿರುವ ಗೋಯಲ್, "ಬಡ ವಲಸಿಗರಿಗೆ ಅಡೆತಡೆಗಳನ್ನು ಸೃಷ್ಟಿಸುವುದನ್ನು ನಿಲ್ಲಿಸಿ, ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಬೇಕು" ಎಂದರು.

ಈ ವಿಷಯದ ಬಗ್ಗೆ ಗೋಯಲ್ ಪತ್ರ ಬರೆದಿದ್ದರೂ ದೆಹಲಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಕೂಡ ಜೂನ್ 8 ರಂದು ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈಗಾಗಲೇ, 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಎನ್‌ಒಆರ್‌ಸಿ ಯೋಜನೆಯಡಿ ತರಲಾಗಿದ್ದು, ಇದರ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿ ಫಲಾನುಭವಿಗಳು ದೇಶದ ಯಾವುದೇ ಭಾಗದಿಂದ ತಮ್ಮ ಪಡಿತರ ಪಡೆಯಬಹುದು.

ABOUT THE AUTHOR

...view details