ಬಹ್ರೇಚ್(ಯುಪಿ): ಉತ್ತರಪ್ರದೇಶದಲ್ಲಿ ಹರಿಯುವ ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡುವ ಕುರಿತು ಪೊಲೀಸರು ನೇಪಾಳದ ಗಡಿ ಭಾಗದ ಜನರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡುತ್ತಿರುವ ಕುರಿತು ಪೊಲೀಸರು, ಎಸ್ಎಸ್ಬಿ (ಸಶಸ್ತ್ರ ಸೀಮಾ ಬಲ್), ನೇಪಾಳದ ಭದ್ರತಾ ಸಿಬ್ಬಂದಿ ಮತ್ತು ಉಭಯ ದೇಶಗಳ ಪುರೋಹಿತರೊಂದಿಗೆ ಅನಧಿಕೃತ ಚರ್ಚೆ ನಡೆಸಲಾಗಿದೆ.
ನೇಪಾಳಿ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ. ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಲಾಗಿದೆ " ಅಂತ ಸುಜೌಲಿ ಸ್ಟೇಷನ್ ಹೌಸ್ ಅಧಿಕಾರಿ ಒ.ಪಿ ಚೌಹಾಣ್ ಹೇಳಿದ್ದಾರೆ