ನವದೆಹಲಿ:ಭಯೋತ್ಪಾದನೆ, ಆತಂಕವಾದಗಳ ವಿರುದ್ಧ ಶ್ರಮಿಸುವ ಸಂಸ್ಥೆಯಾದ ಎನ್ಐಎಗೆ ಹೊಸ ಬಾಸ್ ನೇಮಕ ಮಾಡಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ ದಳದ ನೂತನ ಮಹಾನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿ ಆದೇಶಿಸಿದೆ.
ಗುಪ್ತಾ ಅವರು ಪಂಜಾಬ್ ಕೇಡರ್ನ 1987ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಕ್ಯಾಬಿನೆಟ್ನ ನೇಮಕಾತಿ ಸಮಿತಿಯು ಇವರನ್ನು ಮಾರ್ಚ್ 31, 2024 ರವರೆಗೆ ಎನ್ಐಎ ಮಹಾನಿರ್ದೇಶಕರನ್ನಾಗಿ ನೇಮಿಸಿದೆ ಎಂದು ಸಿಬ್ಬಂದಿ ಸಚಿವಾಲಯ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.