ಕರ್ನಾಟಕ

karnataka

By

Published : Mar 25, 2022, 3:12 PM IST

ETV Bharat / bharat

ಈ ಬಾಬಾನಿಗೆ ಮದ್ಯವೇ ನೈವೇದ್ಯ : ಭಕ್ತರಿಗೆ ಅದುವೇ ತೀರ್ಥ!

ಪಂಜಾಬ್​​ನ ಅಮೃತಸರ್​ದಲ್ಲಿರುವ ಬಾಬಾನಿಗೆ ಪ್ರತಿ ವರ್ಷ ಮದ್ಯಪಾನ ನೈವೇದ್ಯ ಮಾಡಲಾಗ್ತಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಅದನ್ನೇ ತೀರ್ಥದ ರೂಪದಲ್ಲಿ ನೀಡಲಾಗುತ್ತದೆ..

Devotees offered liquor at Baba Rode Shah
Devotees offered liquor at Baba Rode Shah

ಅಮೃತಸರ್(ಪಂಜಾಬ್​) :ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಅನೇಕ ರೀತಿಯ ಭಿನ್ನ-ವಿಭಿನ್ನ ಆಚರಣೆಗಳಿವೆ. ಕೆಲವರು ತಮ್ಮಿಷ್ಟದ ದೇವರಿಗೆ ಸಸ್ಯಹಾರ ನೈವೇದ್ಯ ಮಾಡಿದ್ರೆ, ಕೆಲವರು ಮಾಂಸಾಹಾರ ನೈವೇದ್ಯ ಮಾಡ್ತಾರೆ. ಆದರೆ, ಪಂಜಾಬ್​​ನಲ್ಲಿರುವ ದೇವಾಲಯವೊಂದರಲ್ಲಿ ಮದ್ಯವೇ ನೈವೇದ್ಯ ಆಗಿದ್ದು, ಅಲ್ಲಿನ ಭಕ್ತರಿಗೆ ಅದುವೇ ತೀರ್ಥವಾಗಿದೆ.

ಈ ಬಾಬಾನಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಅದುವೇ ತೀರ್ಥ!

ಪಂಜಾಬ್​ನ ಅಮೃತಸರ ಜಿಲ್ಲೆಯ ಭೋಮಾ ಗ್ರಾಮದಲ್ಲಿರುವ ಬಾಬಾ ರೋಡೆ ಷಾ ದೇವಾಲಯದಲ್ಲಿ ಮದ್ಯವನ್ನ ನೈವೇದ್ಯ ರೂಪದಲ್ಲಿ ಅರ್ಪಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಜನರು ಅದನ್ನ ತೆಗೆದುಕೊಂಡು ಬಂದು ನೈವೇದ್ಯ ಮಾಡ್ತಾರೆ. ತದನಂತರ ಪ್ರಸಾದದ ರೂಪದಲ್ಲಿ ಅಲ್ಲಿನ ಭಕ್ತರಿಗೆ ಹಂಚಿಕೆ ಮಾಡಲಾಗ್ತದೆ. ಕಳೆದ 90 ವರ್ಷಗಳಿಂದಲೂ ಈ ಆಚರಣೆ ನಡೆದುಕೊಂಡು ಬಂದಿದ್ದು, ಅನೇಕರು ಇಲ್ಲಿಗೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ:ತನ್ನ ಸ್ವರದಿಂದಲೇ ಕುಟುಂಬ ಸಾಕುತ್ತಿರುವ ದಿವ್ಯಾಂಗ..ಈ ಸ್ವಾಭಿಮಾನಿಯ ಪ್ರತಿಭೆಯನ್ನು ನೀವು ಒಮ್ಮೆ ನೋಡಿ

ಮಾರ್ಚ್​​ 24ರಿಂದ ಬಾಬಾ ರೋಡೆ ಷಾ ದೇವಾಲಯದ ಜಾತ್ರೆ ಆರಂಭಗೊಂಡಿದ್ದು, ಭಕ್ತಸಾಗರವೇ ಹರಿದು ಬರುತ್ತಿದೆ. ಗ್ಲಾಸ್​ಗಳಲ್ಲಿ ಮದ್ಯವನ್ನ ತೀರ್ಥದ ರೂಪದಲ್ಲಿ ತೆಗೆದುಕೊಂಡು ಭಕ್ತರು ಸೇವನೆ ಮಾಡ್ತಾರೆ. 1924ರಲ್ಲಿ ಬಾಬಾ ರೋಡೆ ಷಾ ನಿಧನರಾಗಿದ್ದು, ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.

ABOUT THE AUTHOR

...view details