ಕರ್ನಾಟಕ

karnataka

ETV Bharat / bharat

ಅಮಿತಾಬ್​ ಬಚ್ಚನ್​​​​-ಅಕ್ಷಯ್​ ಸಿನಿಮಾ ಚಿತ್ರೀಕರೀಸಲು ಬಿಡಲ್ಲ ಎಂದ ಪಟೋಲೆ: ಫಡ್ನವಿಸ್​ ತಿರುಗೇಟು​​ - ಅಮಿತಾಬ್ ಬಚ್ಚನ್ ಸಿನಿಮಾ

ಇತ್ತೀಚೆಗಷ್ಟೇ ಎಂಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ನಾನಾ ಪಟೋಲೆ, ನಟರ ಬಗ್ಗೆ ಮಾತನಾಡಿದ ಕೂಡಲೇ ಹೆಸರು ಮಾಡಬಹುದು ಎಂದುಕೊಂಡಿದ್ದಾರೆ. ಚಿತ್ರೀಕರಣ ನಿಲ್ಲಿಸಲು ಹೇಗೆ ಸಾಧ್ಯ..? ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನು ಎಂಬುದು ಇನ್ನೂ ಇದೆ ಎಂದು ದೇವೇಂದ್ರ ಫಡ್ನವಿಸ್​ ಹೇಳಿದ್ದಾರೆ.

ನಾನಾ ಪಟೋಲೆ , ಫಡ್ನವಿಸ್

By

Published : Feb 18, 2021, 9:42 PM IST

ಮುಂಬೈ:ಪೆಟ್ರೋಲ್, ಡೀಸೆಲ್​​​ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಧ್ವನಿ ಎತ್ತದ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ​ಕುಮಾರ್ ಅವರ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಂಪಿಸಿಸಿ ಅಧ್ಯಕ್ಷ ನಾನಾ ಪಟೋಲೆ ಹೇಳಿಕೆಗೆ ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದ್ದಾರೆ.

ಇತ್ತೀಚೆಗಷ್ಟೇ ಎಂಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ನಾನಾ ಪಟೋಲೆ, ನಟರ ಬಗ್ಗೆ ಮಾತನಾಡಿದ ಕೂಡಲೇ ಹೆಸರು ಮಾಡಬಹುದು ಎಂದುಕೊಂಡಿದ್ದಾರೆ. ಚಿತ್ರೀಕರಣ ನಿಲ್ಲಿಸಲು ಹೇಗೆ ಸಾಧ್ಯ..? ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನು ಎಂಬುದು ಇನ್ನೂ ಇದೆ ಎಂದಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್​ನ ಪಟೋಲೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ ಅವಧಿಯಲ್ಲಿ ಪೆಟ್ರೋಲ್​-ಡೀಸೆಲ್ ಬೆಲೆ 60 ರೂಪಾಯಿ ತಲುಪಿದ್ದಾಗ ನಟ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಮನ್ಮೋಹನ್ ಸಿಂಗ್ ಆಡಳಿತವನ್ನು ಟೀಕಿಸಿದ್ದರು. ಆದರೆ ಈಗ ಪೆಟ್ರೋಲ್ ಬೆಲೆ 100ರ ಸನಿಹ ಬಂದಿದೆ. ಇಬ್ಬರೂ ಈ ವಿಚಾರದಲ್ಲಿ ಮೌನವಾಗಿದ್ದಾರೆ ಎಂದಿದ್ದರು.

ಇದನ್ನೂ ಓದಿ:ಜಮ್ಮು ಕಾಶ್ಮೀರ : ಉಗ್ರರು ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

ABOUT THE AUTHOR

...view details