ಕರ್ನಾಟಕ

karnataka

ETV Bharat / bharat

ಗುಜರಾತ್​ ಚುನಾವಣೆಯಲ್ಲಿ ಕೈ ತಪ್ಪಿದ ಟಿಕೆಟ್​; ಬಿಜೆಪಿ ತೊರೆದು ಎಎಪಿ ಸೇರಿದ ಶಾಸಕ - ಬಿಜೆಪಿ ಶಾಸಕ ಕೇಸರಿ ಸಿನ್ಹಾ ಸೋಲಂಕಿ

ಮತರ್​​​ ಕ್ಷೇತ್ರದಲ್ಲಿ 2014 ಮತ್ತು 2017ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ​ಸೋಲಂಕಿಯವರನ್ನು ಕೈ ಬಿಟ್ಟ ಪಕ್ಷ ಕಲ್ಪೆಶ್​ ಪರ್ಮರ್​ ಅವರಿಗೆ ಟಿಕೆಟ್ ಘೋಷಿಸಿದೆ.

ಗುಜರಾತ್​ ಚುನಾವಣೆಯಲ್ಲಿ ಕೈ ತಪ್ಪಿದ ಟಿಕೆಟ್​; ಬಿಜೆಪಿ ತೊರೆದು ಎಎಪಿ ಸೇರಿದ ಶಾಸಕ
Denied ticket BJP MLA left the party and joined AAP

By

Published : Nov 11, 2022, 11:51 AM IST

ಗುಜರಾತ್​​: ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಕೇಸರಿ ಸಿನ್ಹಾ ಸೋಲಂಕಿಗೆ ಪಕ್ಷ ಈ ಬಾರಿ ಗುಜರಾತ್​ ಚುನಾವಣೆಯಲ್ಲಿ ಟಿಕೆಟ್​ ನೀಡಲು ನಿರಾಕರಿಸಿದೆ. ಪಕ್ಷದ ಈ ನಿರ್ಧಾರದಿಂದ ಬೇಸತ್ತ ಅವರು ಬಿಜೆಪಿಗೆ ಗುಡ್​ಬೈ ಹೇಳಿ, ಆಮ್​​​ ಆದ್ಮಿ ಪಕ್ಷ ಸೇರಿದ್ದಾರೆ. ಗುಜರಾತ್​ನ ಖೇಡ ಜಿಲ್ಲೆಯ ಮತರ್​ ವಿಧಾನಸಭಾ ಕ್ಷೇತ್ರದಲ್ಲಿ ಅವರು ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿ ಗೆಲುವು ಕಂಡಿದ್ದಾರೆ.

ಕೇಸರಿಸಿನ್ಹಾ ಸೋಲಂಕಿಯನ್ನು ಎಎಪಿ ರಾಜ್ಯ ಘಟಕ ಪ್ರತಿನಿಧಿ ಗೋಪಾಲ ಇಟಲಿಯಾ ಸ್ವಾಗತಿಸಿದ್ದು, ಈ ಸಂಬಂಧ ಟ್ವೀಟ್​ ಮಾಡಿದ್ದಾರೆ. ಮತರ್​ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕ ಸೋಲಂಕಿ ಅವರು ಅರವಿಂದ್​ ಕೇಜ್ರಿವಾಲ್​ ಅವರ ನ್ಯಾಯಾಯುತ ರಾಜಕೀಯದಿಂದ ಪ್ರೇರಿತರಾಗಿ, ಇಂದು ನಮ್ಮ ಪಕ್ಷ ಸೇರಿದ್ದಾರೆ. ಅವರಿಗೆ ನಾನು ಪಕ್ಷದಿಂದ ಆತ್ಮೀಯ ಸ್ವಾಗತ ಕೋರುತ್ತೇವೆ. ನಾವು ಒಟ್ಟಾಗಿ ಗುಜರಾತ್​ನಲ್ಲಿ ನ್ಯಾಯಯುತ ಸರ್ಕಾರ ರಚನೆ ಮಾಡುತ್ತೇವೆ ಎಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ಎದುರಿಸಲಿರುವ ಗುಜರಾತ್​ನಲ್ಲಿ ಗುರುವಾರ ಬಿಜೆಪಿ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ವೇಳೆ ಮತರ್​​​ ಕ್ಷೇತ್ರದಲ್ಲಿ 2014 ಮತ್ತು 2017ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಸೋಲಂಕಿಯವರನ್ನು ಕೈ ಬಿಟ್ಟು ಕಲ್ಪೆಶ್​ ಪರ್ಮರ್​ ಅವರಿಗೆ ಟಿಕೆಟ್ ಘೋಷಿಸಿದೆ.

ದೇವುಸಿನ್ಹಾ ಚೌಹಣ್​ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ತೆರವಾದ ಮತರ್​ ಕ್ಷೇತ್ರದಲ್ಲಿ 2014ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸೋಲಂಕಿ ಗೆಲುವು ಸಾಧಿಸಿದ್ದರು. 2017ರ ಸಾರ್ವತ್ರಿಕ ಚುನಾವಣೆಯಲ್ಲೂ ಸೋಲಂಕಿ ಜಯಭೇರಿ ಬಾರಿಸಿದ್ದರು.

ಇನ್ನು ರಾಜ್ಯದಲ್ಲಿ ಬಿಜೆಪಿ ವಿರುದ್ಧ ನೇರ ಹಣಾಹಣಿಗೆ ಇಳಿದಿರುವ ಎಎಪಿ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮತರ್​ ಕ್ಷೇತ್ರದೊಂದ ಮಹಿಪಟ್ಸಿಹ್ನ ಚೌಹಣ್​ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ.

ಇದನ್ನೂ ಓದಿ: ಗುಜರಾತ್ ಚುನಾವಣೆ: ಮೋರ್ಬಿ ಶಾಸಕ ಸೇರಿ ಐವರು ಸಚಿವರಿಗೆ ಬಿಜೆಪಿ ಟಿಕೆಟ್ ಇಲ್ಲ

ABOUT THE AUTHOR

...view details