ಕರ್ನಾಟಕ

karnataka

By

Published : Jul 22, 2021, 7:55 AM IST

ETV Bharat / bharat

ಜಂತರ್​ ಮಂತರ್​ನಲ್ಲಿ ಅನ್ನದಾತರ ಹೋರಾಟ.. ಅಧಿವೇಶನಕ್ಕೆ ತಟ್ಟುತ್ತಾ ಪ್ರತಿಭಟನೆ ಬಿಸಿ?

ಮುಂಗಾರು ಅಧಿವೇಶನ ಆರಂಭಗೊಂಡಿರುವ ಹಿನ್ನೆಲೆ, ಇಂದಿನಿಂದ ರೈತರು ಜಂತರ್​, ಮಂತರ್​ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ, ದೆಹಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಅನ್ನದಾತರ ಹೋರಾಟ
ಅನ್ನದಾತರ ಹೋರಾಟ

ನವದೆಹಲಿ:ಸಂಸತ್ತಿನ ಮಾನ್ಸೂನ್​ ಅಧಿವೇಶನ ನಡೆಯುತ್ತಿದ್ದು, ಕೇಂದ್ರ ಹಾಗೂ ಇತರ ಪಕ್ಷಗಳ ಗಮನ ಸೆಳೆಯಲು ಇಂದು ರೈತರು ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. 2020ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಕಾನೂನಗಳ ವಿರುದ್ಧ ಅನ್ನದಾತರು ಪ್ರತಿಭಟನೆ ನಡೆಸಲಿದ್ದು, ದೆಹಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ರೈತರು ಪ್ರತಿಭಟನೆ ಶಾಂತಿಯುತವಾಗಿ ನಡೆಸಲು ಅವಕಾಶ ನೀಡಲಾಗಿದೆ. ಸಂಸತ್ತಿನ ಕಡೆಗೆ ಮೆರವಣಿಗೆ ಮಾಡದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದ್ದು, ಅನ್ನದಾತರ ಪ್ರತಿಭಟನೆಗೆ ಅನುಮತಿ ನೀಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ 11: 30ರ ವೇಳೆಗೆ ರೈತರು ಪ್ರತಿಭಟನಾ ಸ್ಥಳವನ್ನು ತಲುಪುವ ನಿರೀಕ್ಷೆಯಿರುವುದರಿಂದ ಖಾಕಿ ಪಡೆ ಈಗಾಗಲೇ ಬ್ಯಾರಿಕೇಡ್ ನಿರ್ಮಿಸಿ ಭದ್ರತೆ ಕೈಗೊಂಡಿದೆ.

ಇದನ್ನೂ ಓದಿ: ಜು.21 ರಿಂದ ಆ.15ರ ವರೆಗೆ ಕೆಂಪು ಕೋಟೆಗೆ ಇಲ್ಲ ಪ್ರವೇಶ

ಮುಂಗಾರು ಸಂಸತ್‌ ಅಧಿವೇಶನ ನಡೆಯುತ್ತಿರುವುದರಿಂದ ಜುಲೈ 22ರಿಂದ ಪ್ರತಿದಿನ ಸುಮಾರು 200 ರೈತರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಬೇಕೆಂದು ರೈತ ಸಂಘಗಳ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಈ ಹಿಂದೆ ಯೋಜಿಸಿತ್ತು.

ABOUT THE AUTHOR

...view details