ನವದೆಹಲಿ: ವಾಯುಮಾಲಿನ್ಯ ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಸರ್ಕಾರದ ನಿರ್ದೇಶನದಂತೆ ಇಂದಿನಿಂದ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಹಳೆಯ ಡೀಸೆಲ್ ಬಸ್ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ವಾಹನಗಳಿಂದ ಹೊರಸೂಸುವ ಹೊಗೆ ಅಥವಾ ಕಾರ್ಬನ್ ಡೈ ಆಕ್ಸೈಡ್ ನಗರದ ವಾಯುಮಾಲಿನ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎನ್ಜಿ ಬಸ್ಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಮಾತ್ರ ಕಾರ್ಯನಿರ್ವಹಿಸಿದರೆ ಮಾಲಿನ್ಯ ಕಡಿಮೆ ಮಾಡಬಹುದು. ಹೀಗಾಗಿ ಸಾರಿಗೆ ಇಲಾಖೆ ವಾಹನಗಳ ನಿಷೇಧ ಮತ್ತು ಹೊಸ ನಿಯಮಗಳ ಕುರಿತು ನೆರೆ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ನವದೆಹಲಿಗೆ ಬರುವ ಎಲ್ಲಾ ಬಸ್ಗಳು ಎಲೆಕ್ಟ್ರಿಕ್, ಸಿಎನ್ಜಿ ಅಥವಾ ಬಿಎಸ್-6 ಡೀಸೆಲ್ನಲ್ಲಿ ಓಡಿಸುವಂತಿರಬೇಕು ಎಂದು ನಿಳಿಸಿದೆ.
ಸಾರಿಗೆ ಇಲಾಖೆಯ ಪ್ರಕಾರ, ಮುಂದಿನ ವರ್ಷ ಜುಲೈ 1 ರಿಂದ ಯಾವುದೇ ನಗರದಿಂದ ದೆಹಲಿಗೆ ಬರುವ ಎಲ್ಲಾ ಬಸ್ಗಳು ಕೇವಲ ಎಲೆಕ್ಟ್ರಿಕ್, ಸಿಎನ್ಜಿ ಮತ್ತು ಬಿಎಸ್-VI ಡೀಸೆಲ್ ಇಂಧನ ಬಳಸಬೇಕು. ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಯಾವುದೇ ನಗರ ಅಥವಾ ಪಟ್ಟಣದಿಂದ ಬರುವ ಪ್ರತಿಯೊಂದು ಬಸ್ಗಳಿಗೆ ಈ ನಿಯಮ ಅನ್ವಯಿಸುತ್ತದೆ.
ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಕಮಿಷನ್ (ಸಿಎಕ್ಯೂಎಂ) ನಿರ್ದೇಶನದ ಪ್ರಕಾರ, ಎಲೆಕ್ಟ್ರಿಕ್, ಸಿಎನ್ಜಿ ಮತ್ತು ಬಿಎಸ್-VI ಡೀಸೆಲ್ ಬಸ್ಗಳನ್ನು ದೆಹಲಿ ಮತ್ತು ಹರಿಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನದ ನಗರಗಳು ಮತ್ತು ಪಟ್ಟಣಗಳ ನಡುವೆ ನವೆಂಬರ್ 1ರಿಂದ ಎನ್ಸಿಆರ್ನಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು.
ದೆಹಲಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಡೀಸೆಲ್-ಚಾಲಿತ ಬಸ್ಗಳಿಂದ ಉಂಟಾಗುವ ವಾಯು ಮಾಲಿನ್ಯ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆ ಮಾಡುವ ಅಂತಿಮ ಗುರಿ ಹೊಂದಲಾಗಿದೆ. ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ಸಾರಿಗೆ ಇಲಾಖೆಯು ವಿವರವಾದ ಮಾರ್ಗಸೂಚಿಗಳು ಮತ್ತು ಉದ್ದೇಶಗಳನ್ನು ಸೂಚಿಸಿದೆ ಎಂದು ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಕಮಿಷನ್ ತಿಳಿಸಿದೆ.