ಕರ್ನಾಟಕ

karnataka

By

Published : Aug 13, 2021, 8:14 PM IST

ETV Bharat / bharat

ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾ ದಿನ ಭರ್ಜರಿ ಕಾರ್ಯಾಚರಣೆ; 55 ಪಿಸ್ತೂಲ್​, 50 ಕಾರ್ಟಿಡ್ಜ್​ ಸೇರಿ ನಾಲ್ವರ ಬಂಧನ

ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು, 55 ಕಂಟ್ರಿ ಪಿಸ್ತೂಲ್​ ಸೇರಿದಂತೆ ನಾಲ್ವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Delhi police
Delhi police

ನವದೆಹಲಿ: ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲು ಕೇವಲ ಎರಡು ದಿನ ಬಾಕಿ ಉಳಿದಿದ್ದು, ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಾಣಿಕೆ ಮಾಡ್ತಿದ್ದ ನಾಲ್ವರು ಬಂಧನ ಮಾಡಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ.

ದೆಹಲಿಯ ವಿಶೇಷ ಪೊಲೀಸ್ ಪಡೆ ಈ ಕಾರ್ಯಾಚರಣೆ ನಡೆಸಿದ್ದು, 55 ಅಕ್ರಮ ಪಿಸ್ತೂಲ್​​, 50 ಲೈವ್​​ ಕಾರ್ಟಿಡ್ಜ್​​ ಸೇರಿದಂತೆ ಮೊಬೈಲ್​ ಫೋನ್​ ಹಾಗೂ ಕೆಲವೊಂದು ಸಿಮ್​ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ನಾಲ್ವರ ಬಂಧನ ಮಾಡಲಾಗಿದ್ದು, ಅವರನ್ನ ರಾಜ್ಬೀರ್​, ದೀರಜ್​, ವಿನೋದ್ ಹಾಗೂ ಧರ್ಮೇಂದ್ರ ಎಂದು ಗುರುತಿಸಲಾಗಿದೆ. ಇದರಲ್ಲಿ ಮೂವರು ಉತ್ತರ ಪ್ರದೇಶ ಹಾಗೂ ಮತ್ತೋರ್ವ ದೆಹಲಿಯಲ್ಲಿ ವಾಸವಾಗಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಕನಸಲ್ಲಿ ಬಂದ ಎಂಎಸ್​ಡಿ.. ಮಾಹಿ ಭೇಟಿಗಾಗಿ ಸಾವಿರಾರು ಕಿ.ಮೀ ಕಾಲ್ನಡಿಗೆ ಹೊರಟ ಅಭಿಮಾನಿ..

ಇವರೆಲ್ಲರೂ ಅಂತಾರಾಜ್ಯ ಶಸ್ತ್ರಾಸ್ತ್ರ ಸಾಗಣೆದಾರರಾಗಿದ್ದು, ವಿವಿಧ ನಗರಗಳಿಗೆ ಅಕ್ರಮವಾಗಿ ರಪ್ತು ಮಾಡುತ್ತಿದ್ದರು. ಬಂಧಿತರ ಮೇಲೆ ಗಂಭೀರವಾಗಿ ಪ್ರಕರಣಗಳಿದ್ದು, ಇದೀಗ ಬಂಧನ ಮಾಡಲಾಗಿದೆ ಎಂದಿದ್ದಾರೆ. ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಆರಂಭಗೊಂಡಿದ್ದು, ದೆಹಲಿ, ಮುಂಬೈ ಸೇರಿದಂತೆ ಕೆಲವೊಂದು ನಗರಗಳಲ್ಲಿ ಭಾರೀ ಪ್ರಮಾಣದ ಭದ್ರತೆ ಒದಗಿಸಲಾಗಿದೆ.

ABOUT THE AUTHOR

...view details