ಕರ್ನಾಟಕ

karnataka

ಸಿಎಂ ಅರವಿಂದ್ ಕೇಜ್ರಿವಾಲ್‌ರಿಗೆ ನೀಡಿದ ಭದ್ರತೆ ಕಡಿತ ಇಲ್ಲ : ದೆಹಲಿ ಪೊಲೀಸರ ಸ್ಪಷ್ಟನೆ

ಅರವಿಂದ್ ಕೇಜ್ರಿವಾಲ್​ಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಇದರಲ್ಲಿ ಪೈಲೆಟ್ ವಾಹನ, ಎಸ್ಕಾರ್ಟ್​, ರಕ್ಷಣಾ ಸಿಬ್ಬಂದಿ, ಮನೆ ಭದ್ರತಾ ಸಿಬ್ಬಂದಿ ಸೇರಿ 16 ಸಮವಸ್ತ್ರಧಾರಿಗಳನ್ನು ಭದ್ರತೆಗೆ ಒದಗಿಸಲಾಗಿದೆ..

By

Published : Feb 26, 2021, 9:20 AM IST

Published : Feb 26, 2021, 9:20 AM IST

Updated : Feb 26, 2021, 9:43 AM IST

Delhi Police denied the news of removing Chief Minister Kejriwal  security
ಸಿಎಂ ಅರವಿಂದ್ ಕೇಜ್ರಿವಾಲ್ ಭದ್ರತೆಯಲ್ಲಿ ಯಾವುದೇ ಬದಲಾವಣೆಯಿಲ್ಲ: ದೆಹಲಿ ಪೊಲೀಸ್

ನವದೆಹಲಿ :ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಒದಗಿಸಿರುವ ಭದ್ರತೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ದೆಹಲಿ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಗುರುವಾರ ಮಾಹಿತಿ ನೀಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರಿಗೆ ಒದಗಿಸಿದ್ದ ಭದ್ರತಾ ಸಿಬ್ಬಂದಿಯಲ್ಲಿ ಯಾವುದೇ ಇಳಿಕೆ ಮಾಡಿಲ್ಲ. ಅವರಿಗೆ ಒದಗಿಸಿದ್ದ ಭದ್ರತೆಯನ್ನು ಕಡಿಮೆ ಮಾಡಿಲ್ಲ ಎಂದು ದೆಹಲಿ ಪೊಲೀಸ್​ನ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್​ಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಇದರಲ್ಲಿ ಪೈಲೆಟ್ ವಾಹನ, ಎಸ್ಕಾರ್ಟ್​, ರಕ್ಷಣಾ ಸಿಬ್ಬಂದಿ, ಮನೆ ಭದ್ರತಾ ಸಿಬ್ಬಂದಿ ಸೇರಿ 16 ಸಮವಸ್ತ್ರಧಾರಿಗಳನ್ನು ಭದ್ರತೆಗೆ ಒದಗಿಸಲಾಗಿದೆ.

ಇದನ್ನೂ ಓದಿ:ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

ಇದಕ್ಕೂ ಮೊದಲು ಕೆಲ ಮಾಧ್ಯಮಗಳು ದೆಹಲಿ ಸಿಎಂ ಗುಜರಾತ್​ಗೆ ಭೇಟಿ ನೀಡುತ್ತಿದ್ದು, ಅವರ ಭದ್ರತಾ ಸಿಬ್ಬಂದಿ ಕಡಿತಗೊಳಿಸಲಾಗಿದೆ ಎಂದು ಹೇಳಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್​​ನ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಗುಜರಾತ್​ನ ಸ್ಥಳೀಯ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಉನ್ನತ ಸಾಧನೆ ಮಾಡಿದೆ. ಗುಜರಾತ್ ಜನರಿಗೆ ಅದರಲ್ಲೂ ಸೂರತ್​ ಜನರಿಗೆ ಧನ್ಯವಾದ. 125 ವರ್ಷಗಳ ಹಳೆಯ ಕಾಂಗ್ರೆಸ್ ಹೊಸ ಪಕ್ಷದಿಂದ ಪರಾಭವಗೊಂಡಿದೆ. ನಮ್ಮ ಪ್ರತಿ ಕಾರ್ಯಕರ್ತನೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾನೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.

Last Updated : Feb 26, 2021, 9:43 AM IST

ABOUT THE AUTHOR

...view details