ಕರ್ನಾಟಕ

karnataka

ಬುಧವಾರದ ರಾಶಿ ಭವಿಷ್ಯ, ಪಂಚಾಂಗ: ಈ ರಾಶಿಯವರು ಪ್ರವಾಸ ತೆರಳಲು ಸಕಾಲ

By ETV Bharat Karnataka Team

Published : Oct 25, 2023, 5:01 AM IST

Updated : Oct 25, 2023, 6:08 AM IST

ಬುಧವಾರದ ದಿನ ಭವಿಷ್ಯ ಹೀಗಿದೆ..

ರಾಶಿ ಭವಿಷ್ಯ
ರಾಶಿ ಭವಿಷ್ಯ

ಇಂದಿನ ಪಂಚಾಂಗ:

ದಿನಾಂಕ: 25-10-2023

ಸಂವತ್ಸರ:ಶುಭಕೃತ್

ಆಯನ:ದಕ್ಷಿಣಾಯಣ

ಋತು: ಹೇಮಂತ

ಮಾಸ:ಅಶ್ವಿನ್

ಪಕ್ಷ: ಶುಕ್ಲ

ತಿಥಿ:ಏಕಾದಶಿ

ನಕ್ಷತ್ರ:ಶತಭಿಷ

ಸೂರ್ಯೋದಯ:ಮುಂಜಾನೆ06:10:00 ಗಂಟೆಗೆ

ಅಮೃತಕಾಲ:ಬೆಳಗ್ಗೆ11:46 ರಿಂದ 12:34 ಗಂಟೆವರೆಗೆ

ದುರ್ಮುಹೂರ್ತಂ:ಮಧ್ಯಾಹ್ನ12:02 ರಿಂದ 1:30 ಗಂಟೆವರೆಗೆ

ರಾಹುಕಾಲ:ಮಧ್ಯಾಹ್ನ1:30 ರಿಂದ 2:57 ಗಂಟೆವರೆಗೆ

ಸೂರ್ಯಾಸ್ತ:ಸಂಜೆ05:53:00 ಗಂಟೆಗೆ

ವರ್ಜ್ಯಂ:ಸಂಜೆ6:15 ರಿಂದ 7:50 ಗಂಟೆಗೆ

ಮೇಷ: ಇಂದು ನೀವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುತ್ತೀರಿ. ನೀವು ಗಿಡ ನೆಡಬಹುದು. ನೆರೆಹೊರೆಯನ್ನು ಸ್ವಚ್ಛವಾಗಿರಿಸಲು ಬೀದಿಯಲ್ಲಿನ ಕಸ ತೆಗೆಯಬಹುದು. ಪರಿಸರಕ್ಕೆ ಒಳ್ಳೆಯ ಹೆಚ್ಚು ಚಟುವಟಿಕೆಗಳನ್ನು ಮಾಡಲು ಬಯಸಿದ್ದೀರಿ. ಆದ್ದರಿಂದ ಒಂದು ಸಲಕ್ಕೆ ಒಂದು ಕೆಲಸ ಮಾಡಿ.

ವೃಷಭ: ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಕಾರ್ಯ ಮತ್ತು ಚಟುವಟಿಕೆ ನಿಧಾನಗೊಳ್ಳುತ್ತವೆ. ಭಾವುಕ ಅಥವಾ ಭಾವನಾತ್ಮಕತೆ ಹೊಂದದೆ ಇರಲು ಪ್ರಯತ್ನಿಸಿ. ಏಕೆಂದರೆ ಅದು ಸಂಘರ್ಷಗಳಿಗೆ ಎಡೆಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಸುಲಭವಾಗಿ ಮರೆಯದಂತೆ ಮಾಡುತ್ತದೆ.

ಮಿಥುನ: ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಪ್ರವಾಸ ಹೊರಡಬಹುದು ಮತ್ತು ಅದಕ್ಕೆ ಪ್ರೋತ್ಸಾಹ ಪಡೆಯುತ್ತೀರಿ ಮತ್ತು ನೀವು ನಿಮ್ಮ ಕಾರ್ಯಕ್ರಮ ಯೋಜಿಸುತ್ತೀರಿ. ಇದು ಪ್ರವಾಸಕ್ಕೆ ಒಳ್ಳೆಯ ಸಮಯ ಮತ್ತು ನೀವು ನಿಮ್ಮ ಬಜೆಟ್​ನಲ್ಲಿ ಅತ್ಯಂತ ಸಂತೋಷವಾಗಿ ಪ್ರವಾಸ ಪೂರೈಸುತ್ತೀರಿ.

ಕರ್ಕಾಟಕ: ನೀವು ಎಲ್ಲದಕ್ಕಿಂತ ನಿಮ್ಮ ಉದ್ಯೋಗಕ್ಕೆ ಆದ್ಯತೆ ನೀಡಬೇಕು. ನೀವು ನಿಮಗೆ ನೀಡಲಾದ ಕೆಲಸವನ್ನು ವೇಗವಾಗಿ ಅತ್ಯಂತ ಏಕಾಗ್ರತೆ ಮತ್ತು ಬದ್ಧತೆಯಿಂದ ಮುಗಿಸುತ್ತೀರಿ. ಕೆಲಸದಲ್ಲಿ ನಿಮ್ಮ ಶಕ್ತಿ ಅತ್ಯಂತ ಹೆಚ್ಚಾಗಿರುತ್ತದೆ. ನೀವು ನಿಮ್ಮ ಮಿತ್ರರಿಗೆ ಮಹತ್ತರ ಪ್ರಾಮುಖ್ಯತೆ ನೀಡುತ್ತೀರಿ.

ಸಿಂಹ:ನೀವು ಪ್ರತಿ ಕಷ್ಟ ಹಾಗೂ ಅಡೆತಡೆಯನ್ನೂ ಸಮರ್ಥವಾಗಿ ಎದುರಿಸುತ್ತೀರಿ. ನಿಮ್ಮ ನಿರ್ದಿಷ್ಟ ಗುರಿ ಏನೇ ಆದರೂ ಯಶಸ್ವಿಯಾಗುವುದು. ವ್ಯಾಪಾರ ಅಥವಾ ಉದ್ಯಮದಲ್ಲಿ ನಿಮ್ಮ ಸಾಧನೆ ಹೆಚ್ಚಾಗಲಿದೆ. ವೈಯಕ್ತಿಕ ಜೀವನ ಸಮಸ್ಯೆಗಳಿಲ್ಲದೆ ಮುಂದುವರೆಯುತ್ತದೆ.

ಕನ್ಯಾ: ನಿಮ್ಮ ಹೊಂದಿಕೆ ಮತ್ತು ಕಲಾತ್ಮಕ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದಲ್ಲಿ ಸಕಾರಾತ್ಮಕತೆಯಿಂದ ತುಂಬಿದ್ದೀರಿ ಮತ್ತು ಉತ್ಸಾಹ ಹರಡುತ್ತೀರಿ. ಆದರೆ ನಿಮ್ಮ ಕಲ್ಪನಾಶಕ್ತಿ ಯಾವುದೇ ಒತ್ತಡ ಅಥವಾ ಆಯಾಸ ಇಲ್ಲದಾಗ ಮಾತ್ರ ಅರಳುತ್ತದೆ.

ತುಲಾ:ನಿಮ್ಮ ಮಿತ್ರರಲ್ಲೊಬ್ಬರು ಆತ/ಆಕೆಯ ಜಾಲ ಸದೃಢವಾಗಿದ್ದು ನಿಮಗೆ ನೆರವಾಗುತ್ತಾರೆ. ಯಾವುದೇ ಕಷ್ಟಗಳಿಲ್ಲದೆ ನೀವು ಮತ್ತೊಂದು ಜಂಟಿ ಯೋಜನೆ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಪಾದಕತೆ ಮತ್ತು ಶ್ರದ್ಧೆ ಮೌಲ್ಯ ಪಡೆಯುತ್ತವೆ.

ವೃಶ್ಚಿಕ: ನೀವು ಇಂದು ನಿಮ್ಮ ಬಾಸ್​ನ ದೂಷಣೆಗೆ ಪಾತ್ರರಾಗಬೇಕಾಗುತ್ತದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಅವಕಾಶ ಎದುರು ನೋಡುತ್ತಿರುವ ಹೊಸಬರು ಸಂದರ್ಶನಗಳಲ್ಲಿ ಯಶಸ್ಸು ಕಾಣುತ್ತಾರೆ.

ಧನು: ಹಣ ಇಂದು ಸುಲಭವಾಗಿ ಕೈಜಾರಿ ಹೋಗುತ್ತದೆ. ಅನಗತ್ಯ ವೆಚ್ಚ ನಿವಾರಿಸಲು ಯತ್ನಿಸಿ. ಇಡೀ ದಿನ ಹಣ ನಿರ್ವಹಣೆಗೆ ಹೋಗುತ್ತದೆ. ಸಂಜೆ ಅದರೊಂದಿಗೆ ಸಾಕಷ್ಟು ಸಕಾರಾತ್ಮಕ ಶಕ್ತಿ ತರುತ್ತದೆ. ನೀವು ಕುಳಿತು ನಿರಾಳರಾಗಲು ಬಯಸುತ್ತೀರಿ.

ಮಕರ: ನಿಮ್ಮ ಕೆಲಸವಾಗಲು ಅತ್ತಿಂದ ಇತ್ತ ಓಡಾಡಿದ ನಂತರ ನೀವು ಕುಳಿತು ಭವಿಷ್ಯದ ಕಾರ್ಯಯೋಜನೆ ರೂಪಿಸಲು ದಿನವನ್ನು ಕಳೆಯುತ್ತೀರಿ. ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಬರಲಿವೆ. ಆದರೆ ಅದನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂಬುದು ತಿಳಿದಿರಬೇಕು.

ಕುಂಭ: ಕೆಲ ದಿನಗಳು ನೀವು ಪ್ರತಿಯೊಂದನ್ನೂ ತಿಳಿಯಲು ಪ್ರಯತ್ನಿಸುತ್ತೀರಿ. ಇದೂ ಅಂತಹ ಒಂದು ದಿನ. ನೀವು ಸರಿಯಾದ ಎದುರಾಳಿ ಎಂದು ಸಾಬೀತುಪಡಿಸುತ್ತೀರಿ. ನೀವು ವಿರೋಧಿಗಳ ಯೋಜನೆಗಳನ್ನೂ ತಲೆಕೆಳಗು ಮಾಡುತ್ತೀರಿ. ಅದು ನಿಮಗೆ ಅನುಕೂಲವಾಗುತ್ತದೆ. ವಿದ್ವಾಂಸರಾಗಲು ಅದು ನಿಮಗೆ ಅಗತ್ಯ. ನೀವು ಅದರಲ್ಲೂ ಕಷ್ಟದ ಸಮಯದಲ್ಲಿ ನಿಮ್ಮ ಗುಣದ ಸಾಮರ್ಥ್ಯ ಸಾಬೀತುಪಡಿಸುತ್ತೀರಿ.

ಮೀನ:ಜೀವನದಲ್ಲಿ ನಿಮ್ಮ ಹಣಕಾಸಿನ ಬಗ್ಗೆ ಯೋಜಿಸುವುದು ಅಗತ್ಯ ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸುತ್ತೀರಿ. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು, ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

Last Updated : Oct 25, 2023, 6:08 AM IST

ABOUT THE AUTHOR

...view details