ಕರ್ನಾಟಕ

karnataka

ಬುಧವಾರದ ರಾಶಿ ಭವಿಷ್ಯ..ಈ ರಾಶಿಯವರಿಗೆ ಶುಭ

ಈ ದಿನದ ರಾಶಿ ಭವಿಷ್ಯ

By

Published : Oct 5, 2022, 5:41 AM IST

Published : Oct 5, 2022, 5:41 AM IST

ರಾಶಿ ಭವಿಷ್ಯ
ರಾಶಿ ಭವಿಷ್ಯ

ಮೇಷ:ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು. ಏಕೆಂದರೆ ಇದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಎಲ್ಲ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ರಾತ್ರೋರಾತ್ರಿ ಬರುವುದಿಲ್ಲವಾದ್ದರಿಂದ ನೀವು ತಾಳ್ಮೆಯಿಂದ ಇರಬೇಕು.

ವೃಷಭ: ನಿಮ್ಮದೇ ಮೈಲಿಗಲ್ಲುಗಳನ್ನು ಯೋಜಿಸುವುದು ಮತ್ತು ಮಿತ್ರರ ಯಶಸ್ಸನ್ನು ಸಂಭ್ರಮಿಸುವುದು ಇಂದಿನ ಕಾರ್ಯಸೂಚಿ. ವ್ಯಾಪಾರ ಅಥವಾ ಕೆಲಸದಲ್ಲಿ ನಿಮ್ಮ ಆಲೋಚನೆಗಳು ಪ್ರಗತಿಪರವಾಗಿರುತ್ತವೆ ಮತ್ತು ಯಾವುದೇ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಸದೃಢ ತಳಹದಿ ನಿರ್ಮಿಸುತ್ತವೆ. ಸಾಮಾಜಿಕ ಸಭೆಗಳು ಮತ್ತು ಪಾರ್ಟಿಗಳು ಉಲ್ಲಾಸ ತರುತ್ತವೆ.

ಮಿಥುನ:ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ವಿಷಯಗಳ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇಂದು ನೀವು ಕೊಂಚ ಅವಿಶ್ರಾಂತರಾಗುತ್ತೀರಿ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ರಿಸ್ಕ್ ತೆಗೆದುಕೊಳ್ಳಬಹುದು.

ಕರ್ಕಾಟಕ: ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನಿಮ್ಮ ಮನರಂಜನೆಯಿಂದ ಅವರನ್ನು ತೊಡಗಿಸಿಕೊಳ್ಳುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಲಾಭ ತರುತ್ತವೆ. ವಿದ್ಯಾರ್ಥಿಗಳು ನಿರೀಕ್ಷೆ ಮೀರುತ್ತಾರೆ. ತಮ್ಮ ಕೆಲಸಕ್ಕೆ ಗಮನ ನೀಡುತ್ತಾರೆ. ಒಟ್ಟಾರೆ ಎಲ್ಲರಿಗೂ ಇದು ಒಳ್ಳೆಯ ದಿನವಾಗಿದೆ.

ಸಿಂಹ:ನಿಮ್ಮ ದಿನ ಸಂಪೂರ್ಣ ಮಿಶ್ರ ಫಲಿತಾಂಶಗಳು. ಒಂದು ಕಡೆ ನಿಮ್ಮ ಸಂಗಾತಿ ಅಥವಾ ವ್ಯಾಪಾರ ಪಾಲುದಾರರಿಂದ ಅಸಂತೃಪ್ತಿ ಹೊಂದಿದ್ದೀರಿ. ಇನ್ನೊಂದೆಡೆ ನೀವು ಸಟ್ಟಾ ಉದ್ಯಮದಲ್ಲಿ ಅದ್ಭುತ ಗಳಿಕೆ ಪಡೆಯುತ್ತೀರಿ. ನೀವು ಕೆಲ ಮಿತ್ರರ ಸಲಹೆಯ ಮೇರೆಗೆ ಸಮತೋಲನ ಕಾಪಾಡಿಕೊಳ್ಳುತ್ತೀರಿ.

ಕನ್ಯಾ:ಆರೋಗ್ಯದ ವಿಷಯಕ್ಕೆ ಬಂದರೆ ಕಾಲಹರಣ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಉತ್ಸಾಹದಲ್ಲಿದ್ದೀರಿ. ಆದರೆ, ಶಾಂತಿ ಮತ್ತು ಸಮಾಧಾನ ಇಂದಿನ ಪ್ರಭಾವಿ ಅಂಶಗಳು. ನೀವು ಹೊರಗಡೆ ಹೋಗಿ ಮತ್ತು ಆನಂದಿಸಿ.

ತುಲಾ : ಉತ್ಕಂಠಿತ ದಿನ ನಿಮ್ಮ ಮುಂದಿದೆ. ಈ ದಿನ `ಬೇಸಿಗೆಯ ದಿನ ನಾವು ಪಟಗಳನ್ನು ಹಾರಿಸಿದೆವು’ ಎಂಬಂತೆ ಉತ್ತಮ ಭವಿಷ್ಯ ಬಯಸಿದಾಗ ಅದೇ ಮಾನದಂಡವಾಗುತ್ತದೆ. ನಿಮ್ಮ ಹೊರನೋಟದಲ್ಲಿ ಬದಲಾವಣೆಯ ಶರಧಿಯನ್ನೇ ನಿರೀಕ್ಷಿಸಿ, ಅದಕ್ಕೆ ನಿಮ್ಮ ಪ್ರಿಯತಮೆಯ ಸೂಚನೆಯೇ ಕಾರಣ.

ವೃಶ್ಚಿಕ: ನೀವು ಹೊಸ ವ್ಯಾಪಾರೋದ್ಯಮ ಪ್ರಾರಂಭಿಸಲು ಯೋಜಿಸುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಎಲ್ಲಕ್ಕಿಂತ ಇಂದು ಹೆಚ್ಚಾಗಿದೆ. ನೀವು ನಿಮ್ಮ ಅತ್ಯುತ್ತಮವಾದುದನ್ನು ನೀಡಲು ನಿರ್ಧರಿಸಿದ್ದೀರಿ ಮತ್ತು ನಿಮ್ಮ ಯೋಜನೆಗಳಲ್ಲಿ ಯಶಸ್ವಿಯಾಗಲು ಶ್ರಮ ಪಡುತ್ತೀರಿ. ಈ ದಿನ ನಿಮ್ಮ ಸಹವರ್ತಿಗಳಿಂದ ಅಭಿನಂದನೆಗಳು ಮತ್ತು ಸಕಾರಾತ್ಮಕ ಅಭಿಪ್ರಾಯ ಪಡೆದ ನಂತರ ಫಲದಾಯ ಮತ್ತು ಮೌಲಿಕ ಎನಿಸುತ್ತದೆ.

ಧನು:ನಿಮ್ಮ ಕೋಪ ಬೆಂಕಿಯುಂಡೆಯಷ್ಟು ಬಿಸಿಯಾಗಿದೆ. ಕೋಪ ವಿಶ್ವವನ್ನು ನಾಶ ಮಾಡುತ್ತದೆ ಎಂದು ಅಷ್ಟಲ್ಲದೆ ಹೇಳಿಲ್ಲ. ನೀವು ನಿಮ್ಮ ಆಕ್ರಮಣಕಾರಿ ವರ್ತನೆಯಿಂದ ನಿಮ್ಮದೇ ಕಾಲಿಗೆ ಏಟು ಮಾಡಿಕೊಳ್ಳುತ್ತೀರಿ. ಶಾಂತವಾಗಿರಿ ಮತ್ತು ಕೆಲಸ ಮಾಡುವ ಮುನ್ನ ಚಿಂತಿಸಿ. ನೀವು ಹಣಕಾಸಿನ ಕೊರತೆ ಎದುರಿಸುವ ಸಾಧ್ಯತೆಗಳಿವೆ. ಅದನ್ನು ಎಚ್ಚರಿಕೆಯಿಂದ ನಿಭಾಯಿಸಿ.

ಮಕರ : ಇಂದು ನೀವು ನಿಮ್ಮ ಗುರಿಗಳನ್ನು ಸಾಧಿಸಲು ನ್ಯಾಯ ಮತ್ತು ಅನ್ಯಾಯದ ದಾರಿಗಳಲ್ಲಿ ಪವರ್ ಗೇಮ್ ಆಡುತ್ತೀರಿ. ಬೌದ್ಧಿಕ ಪ್ರಗತಿ ಮುಖ್ಯವಾಗಿದೆ; ನಿಮ್ಮ ಸಾಕ್ಷಾತ್ಕಾರಗಳೂ ಸಮಾನವಾಗಿ ಒಳ್ಳೆಯದು. ನಿಮ್ಮ ಕೆಚ್ಚು ಇಂದು ನೀವು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೆ ಮಾರ್ಗದರ್ಶನ ನೀಡುತ್ತವೆ ಮತ್ತು ಉಳಿದಿದ್ದು ನಿಶ್ಚಿತ. ಯಾವುದೂ ನಿಮ್ಮನ್ನು ತೊಂದರೆಗೆ ಈಡು ಮಾಡುವುದಿಲ್ಲ.

ಕುಂಭ:ಅನಿರೀಕ್ಷಿತವಾದುದನ್ನು ಇಂದು ನಿರೀಕ್ಷಿಸಿ! ಯಶಸ್ಸು, ಹಣ, ಪ್ರೀತಿ ಯಾವುದರ ಕುರಿತು ನೀವು ದಿಢೀರ್ ಎಂದು ಭರವಸೆ ಕಳೆದುಕೊಳ್ಳುತ್ತೀರೋ ಅದು ನಿಮ್ಮ ದಾರಿಯಲ್ಲಿ ಬರುತ್ತದೆ. ಸಂಜೆಯಲ್ಲಿ, ಓದು, ಸಂಶೋಧನೆ, ಚರ್ಚೆ ಅಥವಾ ಅಂತಹ ಚಟುವಟಿಕೆಯನ್ನು ನಡೆಸುತ್ತೀರಿ.

ಮೀನ:`ನೆರೆಹೊರೆಯವರನ್ನು ಪ್ರೀತಿಸಿ’ ಎನ್ನುವ ಆಜ್ಞೆಯನ್ನು ಅಕ್ಷರಶಃ ನೀವು ಅನುಷ್ಠಾನಗೊಳಿಸುತ್ತೀರಿ. ಇದು ಧರ್ಮಗ್ರಂಥಗಳು ಇಂದು ನಿಮಗೆ ಚಿಂತನೆಗೆ ಆಹಾರ ಒದಗಿಸುತ್ತವೆ ಎನ್ನುವುದನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಅನ್ವೇಷಣೆಗಳು ನಿಮ್ಮನ್ನು ಸಕ್ರಿಯವನ್ನಾಗಿಸುತ್ತವೆ. ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.

ABOUT THE AUTHOR

...view details