ಕರ್ನಾಟಕ

karnataka

ಮಂಗಳವಾರದ ದಿನ ಭವಿಷ್ಯ..ಈ ರಾಶಿಯವರಿಗೆ ಶುಭ

By ETV Bharat Karnataka Team

Published : Jan 9, 2024, 6:19 AM IST

ಮಂಗಳವಾರದ ರಾಶಿ ಭವಿಷ್ಯ ಹೀಗಿದೆ

ದಿನ ಭವಿಷ್ಯ
ದಿನ ಭವಿಷ್ಯ

ಪಂಚಾಂಗ:

ದಿನಾಂಕ: 09-01-2024, ಮಂಗಳವಾರ

ಸಂವತ್ಸರ:ಶುಭಕೃತ್

ಆಯನ:ಉತ್ತರಾಯಣ

ಋತು :ಮಾರ್ಗಶಿರ

ಮಾಸ:ಮಾರ್ಗಶಿರ

ಪಕ್ಷ :ಕೃಷ್ಣ

ತಿಥಿ:ತ್ರಯೋದಶಿ

ನಕ್ಷತ್ರ:ಜ್ಯೇಷ್ಠ

ಸೂರ್ಯೋದಯ:ಮುಂಜಾನೆ06:43 ಗಂಟೆಗೆ

ಅಮೃತಕಾಲ:ಮುಂಜಾನೆ9:7 ರಿಂದ 9:55 ಗಂಟೆವರೆಗೆ

ದುರ್ಮುಹೂರ್ತಮ್:ಮಧ್ಯಾಹ್ನ15:15 ರಿಂದ 16:40 ಗಂಟೆವರೆಗೆ

ರಾಹುಕಾಲ:ಮಧ್ಯಾಹ್ನ 12:25 ರಿಂದ 13:50 ಗಂಟೆವರೆಗೆ ಹಾಗೂ 12:19 ರಿಂದ 13:7 ಗಂಟೆವರೆಗೆ

ಸೂರ್ಯಾಸ್ತ:ಸಂಜೆ06:06 ಗಂಟೆವರೆಗೆ

ವರ್ಜ್ಯಂ : ಸಂಜೆ18:15 ರಿಂದ 19:50 ವರೆಗೆ

ಮೇಷ : ಇಂದು ನೀವು ಆಳವಾಗಿ ಅತೀಂದ್ರಿಯ ಮತ್ತು ಅತಿಮಾನುಷ ವಿಷಯಗಳತ್ತ ಆಸಕ್ತಿ ವಹಿಸುತ್ತೀರಿ. ನೀವು ಅದಕ್ಕೆ ಸಂಬಂಧಿಸಿ ಏನೋ ಒಂದು ಮಾಡಬಹುದು. ನೀವು ಈ ವಿಷಯಗಳನ್ನ ವಿವರವಾಗಿ ಚರ್ಚಿಸುವ ಪುಸ್ತಕಗಳ ಮೇಲೆ ಖರ್ಚು ಮಾಡಲೂಬಹುದು. ನೀವು ಅಂತಹ ಜ್ಞಾನವನ್ನು ಶಾಂತಿಯುತ ಕಾರಣಗಳಿಗೆ ಮಾತ್ರ ಬಳಸಬೇಕು.

ವೃಷಭ: ಇಂದು, ನೀವು ಕೆರಳಿಸುವ ಮತ್ತು ನಿಮ್ಮನ್ನು ಕೆಣಕುವ ಯಾರೋ ಒಬ್ಬರ ಮುಖಾಮುಖಿಯಾಗುತ್ತೀರಿ. ನೀವು ಅದಕ್ಕೆ ಪ್ರತೀಕಾರ ತೆಗೆದುಕೊಳ್ಳದೇ ಇರುವುದು ಮತ್ತು ನಿಮ್ಮ ಒಳ್ಳೆಯ ಸ್ವಭಾವ ಮೀರುವಂತೆ ಮಾಡದೇ ಇರುವುದು ಉತ್ತಮ. ಶಾಂತ ಮತ್ತು ಕ್ಷೋಭೆಗೊಳ್ಳದೇ ಇರಿ. ನಿಮ್ಮ ಒಳ್ಳೆಯ ಸ್ವಭಾವ ಕಾಣುವಂತೆ ಪ್ರತಿಕ್ರಿಯೆ ಮತ್ತು ವರ್ತನೆ ತೋರಿ. ಇತರರು ನಿಮ್ಮ ಶಾಂತತೆ, ದಯೆ, ಒಳ್ಳೆಯತನ, ಸಭ್ಯತೆಯನ್ನು ಹಾಳು ಮಾಡದಂತೆ ನೋಡಿಕೊಳ್ಳಿ.

ಮಿಥುನ : ನೀವು ನಿಮ್ಮ ಮನೆಯಲ್ಲಿ ಕುಟುಂಬದ ಮರು ಭೇಟಿ ಅಥವಾ ಸಂತೋಷಕೂಟ ಆಯೋಜಿಸಲು ಶ್ರಮಿಸುತ್ತಿದ್ದೀರಿ. ಇಂದು ಅದಕ್ಕೆ ಪರಿಪೂರ್ಣ ದಿನ. ಅಲ್ಲದೆ ಕುಟುಂಬ ಮಾತ್ರವೇಕೆ? ನೀವು ನಿಮ್ಮ ಹತ್ತಿರದ ಮಿತ್ರರನ್ನು ಹಾಗೂ ವ್ಯಾಪಾರ ಪಾಲುದಾರರನ್ನೂ ನಿಮ್ಮ ಸ್ಥಳಕ್ಕೆ ಆಹ್ವಾನಿಸಲಿದ್ದೀರಿ. ನಿಮ್ಮ ಸಂಗಾತಿ ನಿಮ್ಮ ಪ್ರೀತಿಪಾತ್ರರ ಜೊತೆಯನ್ನು ಆನಂದಿಸುತ್ತಾರೆ.

ಕರ್ಕಾಟಕ : ನೀವು ಇಂದು ನಿಮ್ಮ ದಿನವನ್ನು ಅತ್ಯಂತ ಉತ್ತಮ ಸ್ಫೂರ್ತಿಯಲ್ಲಿ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಸಾಹ ಮತ್ತು ಹರ್ಷಚಿತ್ತತೆ ಸಾಂಕ್ರಾಮಿಕ, ಮತ್ತು ನೀವು ಎಲ್ಲಿ ಹೋದರೂ ಮೂಡ್ ಉತ್ತಮಪಡಿಸುತ್ತೀರಿ. ಆದರೆ ನಿಮ್ಮ ಉತ್ಸಾಹವು ಅಲ್ಪಕಾಲೀನ ಮತ್ತು ಕೊಂಚ ಕೆಟ್ಟ ಸುದ್ದಿಗಳಿಂದ ಕಂಗೆಡಿಸಿ ತಲ್ಲಣಗೊಳಿಸುತ್ತದೆ. ನೀವು ಒತ್ತಡದ ಭಾವನೆ ಹೊಂದಿದರೆ ಕೊಂಚ ಬಿಡುವು ತೆಗೆದುಕೊಳ್ಳಿ. ದಿನ ಅಂತ್ಯವಾಗುವಾಗ ವಿಷಯಗಳು ಉತ್ತಮಗೊಳ್ಳುತ್ತವೆ.

ಸಿಂಹ : ನಿಮ್ಮ ಇಡೀ ದಿನ ಕೆಲಸದಲ್ಲಿ ಕಳೆಯುತ್ತದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮ ಮೇಲಾಧಿಕಾರಿಗಳಿಂದ ಎತ್ತರದ ನಿರೀಕ್ಷೆಗಳನ್ನು ಪೂರೈಸಬೇಕು. ಗೃಹಿಣಿಯರು ತಮ್ಮ ದೈನಂದಿನ ಕಾರ್ಯಗಳಲ್ಲದೆ ಇತರೆ ಕೆಲಸಗಳನ್ನೂ ನಿರ್ವಹಿಸಬೇಕು. ಇದು ನಿಮಗೆ ಪ್ರಮುಖವಾದ ದಿನ.

ಕನ್ಯಾ: ಕುಟುಂಬದ ಆತ್ಮೀಯ ಸದಸ್ಯರು ಮತ್ತು ಮಿತ್ರರು ಇಂದು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಪರೀಕ್ಷೆಗಳು ಹತ್ತಿರದಲ್ಲಿರುವುದರಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು, ಮತ್ತು ಅವರು ಅಧ್ಯಯನ ಮತ್ತು ಬಿಡುವಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಕಲಿಯಬೇಕು. ಇಂದು ಆಸ್ತಿಯಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ.

ತುಲಾ : ನೀವು ಮಧ್ಯಾಹ್ನದಲ್ಲಿ ನಿಮ್ಮದೇ ತರಂಗಾಂತರ ಹೊಂದಿರುವ ಜನರನ್ನು ಭೇಟಿ ಮಾಡುತ್ತೀರಿ ಮತ್ತು ಇದು ಸಾಕಷ್ಟು ಆಸಕ್ತಿದಾಯಕ ಚರ್ಚೆಗಳಿಗೆ ಕಾರಣವಾಗುತ್ತದೆ. ಇಂದು ನೀವು ವಿಶ್ವದ ಕುರಿತು ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಬಯಸುತ್ತೀರಿ ಮತ್ತು ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ.

ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಪ್ರೀತಿ ಮತ್ತು ತೀವ್ರ ಆಸಕ್ತಿ ಜೀವನ ವಿಧಾನದಂತೆ. ಇಂದು ಕೂಡಾ ಭಿನ್ನವಾಗಿಲ್ಲ, ದಿನವನ್ನು ಯೋಜಿಸುವಾಗ ನೀವು ಇದನ್ನು ಅತ್ಯಂತ ಆದ್ಯತೆಯಲ್ಲಿರಿಸುತ್ತೀರಿ. ನಿಮ್ಮ ಗಡಿಗಳನ್ನು ತಿಳಿದಿರುವವರೆಗೂ ಅದರಿಂದ ಏನೂ ತೊಂದರೆಯಿಲ್ಲ.

ಧನು :ನೀವು ಇಂದು ಅತ್ಯಂತ ಸಮತೋಲನದಲ್ಲಿರುತ್ತೀರಿ. ಕುಟುಂಬದ ವ್ಯಕ್ತಿಯಾಗಿ ನೀವು ನಿಮ್ಮ ಸಮಯವನ್ನು ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಜವಾಬ್ದಾರಿಗಳಿಗಾಗಿ ಕಳೆಯುತ್ತೀರಿ. ಕೆಲಸದ ವಿಷಯದಲ್ಲ ನೀವು ಬಹಳ ಸುಲಭವಾಗಿ ನಿಭಾಯಿಸುತ್ತೀರಿ. ಸಂಜೆ ನಿಸರ್ಗದ ಪ್ರಶಾಂತತೆಯನ್ನು ಆನಂದಿಸಿ.

ಮಕರ : ನೀವು ಒಳ್ಳೆಯ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ; ಇದು ನಿಮಗೆ ನಿಮ್ಮ ಸುತ್ತಲೂ ಇರುವ ಅತ್ಯಂತ ಹಠ ಸ್ವಭಾವದವರನ್ನು ಮನ ಒಲಿಸಲು ನೆರವಾಗುತ್ತದೆ. ಆದಾಗ್ಯೂ, ನೀವು ಈ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿಯಬೇಕು. ನೀವು ವಿಷಯದ ಹೃದಯದಲ್ಲಿ ನೋಡುತ್ತೀರಿ ಮತ್ತು ನೀವು ಹುಡುಕುತ್ತಿರುವ ಉತ್ತರಗಳನ್ನು ಕಂಡುಕೊಳ್ಳುತ್ತೀರಿ.

ಕುಂಭ : ಕೆಲವೊಮ್ಮೆ ನೀವು ಉಸುಕಿನಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ, ಮತ್ತು ಅದರಿಂದ ನಿಮ್ಮನ್ನು ಹೊರಗೆಳೆಯಲು ಯಾರೂ ಇಲ್ಲ. ಆದಾಗ್ಯೂ, ಸ್ವತಂತ್ರ ಕುಂಭ ರಾಶಿಯವರು ಏಕಾಂಗಿಯಾಗಿ ಪ್ರತಿಕೂಲತೆಯನ್ನು ಎದುರಿಸಲು ಶಕ್ತರು. ಅಲ್ಲದೆ ಈ ಪ್ರವೃತ್ತಿ ನಿಮಗೆ ಇಂದಿಗೂ ಅನುಕೂಲಕರ.

ಮೀನ : ನೀವು ಪ್ರಯಾಣ ಮಾಡುವ ಬಯಕೆಯಲ್ಲಿರುತ್ತೀರಿ ಮತ್ತು ಅದಕ್ಕೆ ಕಾರಣ ಹುಡುಕುತ್ತೀರಿ. ಆದ್ದರಿಂದ ಮನಸ್ಸಿಗೆ ಇಚ್ಛಿಸಿದಂತೆ ನೀವು ಬ್ಯಾಗ್ ಸಿದ್ಧಪಡಿಸಿಕೊಂಡು ಪ್ರಯಾಣ ಹೊರಟರೆ ಆಶ್ಚರ್ಯವೇ ಇಲ್ಲ. ಜೀವನೋಪಾಯ ಗಳಿಸುವ ದೈನಂದಿನ ಒತ್ತಡಗಳಲ್ಲಿ ಇದು ನಿಮಗೆ ಅತ್ಯಂತ ಅಗತ್ಯವಾದ ಬಿಡುವು ಕೂಡಾ ಆಗಿದೆ.

ABOUT THE AUTHOR

...view details