ಕರ್ನಾಟಕ

karnataka

ಮಂಗಳವಾರದ ದಿನ ಭವಿಷ್ಯ: ಈ ರಾಶಿಯವರಿಗೆ ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ!

By

Published : Mar 14, 2023, 5:37 AM IST

ಮಂಗಳವಾರದ ರಾಶಿ ಭವಿಷ್ಯ. ಯಾರ ರಾಶಿಯಲ್ಲಿ ಇಂದು ಏನಿದೆ ಎಂಬ ಮಾಹಿತಿ ಇಲ್ಲಿದೆ...

ಮಂಗಳವಾರದ ದಿನ ಭವಿಷ್ಯ
ಮಂಗಳವಾರದ ದಿನ ಭವಿಷ್ಯ

ಮೇಷ: ಇಂದು ನೀವು ಗಾಢವಾದ ನಿಗೂಢ ಮತ್ತು ಅತಿಮಾನುಷ ವಿಷಯಗಳತ್ತ ಆಸಕ್ತಿ ವಹಿಸುತ್ತೀರಿ. ನೀವು ಅದಕ್ಕೆ ಸಂಬಂಧಿಸಿ ಏನೋ ಒಂದು ಆನಂದಿಸಬಹುದು. ನೀವು ಈ ವಿಷಯಗಳ್ನು ವಿವರವಾಗಿ ಚರ್ಚಿಸುವ ಪುಸ್ತಕಗಳ ಮೇಲೆ ಖರ್ಚು ಮಾಡುತ್ತೀರಿ ಮತ್ತು ಈ ಅಂಶಗಳನ್ನು ವಿವರವಾಗಿ ಚರ್ಚಿಸುತ್ತೀರಿ. ನೀವು ಅಂತಹ ಮಾಹಿತಿಯನ್ನು ಶಾಂತಿಯುತ ಕಾರಣಕ್ಕೆ ಮಾತ್ರ ಬಳಸಬೇಕು, ಯುದ್ಧಕ್ಕಲ್ಲ.

ವೃಷಭ: ಇಂದು ನೀವು ಅತ್ಯಂತ ಸೂಕ್ಷ್ಮವಾದ ವ್ಯಕ್ತಿಯೊಬ್ಬರನ್ನು ಭೇಟಿಯಾಗುತ್ತೀರಿ ಮತ್ತು ಅವರು ನಿಮ್ಮನ್ನು ಬುದ್ಧಿವಿಕಲ್ಪದತ್ತ ತಳ್ಳುತ್ತಾರೆ. ನೀವು ನಿಮ್ಮ ಸಕಾರಾತ್ಮಕ ಹೊರನೋಟ ಅಥವಾ ಒಳ್ಳೆಯ ಸ್ವಭಾವ ಬದಲಾಯಿಸುವ ವಿಷಯಗಳನ್ನು ಮಾಡದೇ ಇರುವುದು ಸೂಕ್ತ. ನಿಮ್ಮ ಏಕತೆ ಮತ್ತು ಪ್ರಾಮಾಣಿಕತೆ ಖಂಡಿತವಾಗಿಯೂ ಗೆಲುವು ನೀಡುತ್ತದೆ.

ಮಿಥುನ: ನೀವು ಕುಟುಂಬದ ಸಂತೋಷಕೂಟ ಆಯೋಜಿಸಲು ಬಯಸುತ್ತಿದ್ದೀರಿ. ಎಲ್ಲ ವಿಷಯಗಳನ್ನೂ ಪರಿಗಣಿಸಿದರೆ, ಈ ದಿನ ಅತ್ಯಂತ ಸೂಕ್ತವಾದ ದಿನ. ಅಲ್ಲದೆ ಕುಟುಂಬ ಮಾತ್ರ ಏಕೆ? ನಿಮ್ಮ ಪ್ರೀತಿಪಾತ್ರರು ಮತ್ತು ವ್ಯಾಪಾರ ಪಾಲುದಾರರನ್ನೂ ನಿಮ್ಮ ಸ್ಥಳಕ್ಕೆ ಆಹ್ವಾನಿಸುತ್ತೀರಿ. ನಿಮ್ಮ ಜೀವನ ಸಂಗಾತಿ ನಿಮ್ಮ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ.

ಕರ್ಕಾಟಕ: ನೀವು ಇಂದು ನಿಮ್ಮ ದಿನವನ್ನು ಅತ್ಯಂತ ಉತ್ತಮ ಸ್ಫೂರ್ತಿಯಲ್ಲಿ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಸಾಹ ಮತ್ತು ಜೀವಂತಿಕೆ ತಡೆಯಲಾಗದ್ದು ಮತ್ತು ನೀವು ಎಲ್ಲಿ ಹೋದರೂ ನಿಮ್ಮ ಸುತ್ತಲಿನ ಜನರ ಮೂಡ್ ಉತ್ತಮಪಡಿಸುತ್ತೀರಿ. ಆದರೆ ಕೆಟ್ಟ ಸುದ್ದಿ ಕಂಗೆಡಿಸುತ್ತದೆ.

ಸಿಂಹ: ನಿಮ್ಮ ಇಡೀ ದಿನ ಕೆಲಸದಲ್ಲಿ ಕಳೆಯುತ್ತದೆ. ದೊಡ್ಡ ಉದ್ಯಮಗಳಲ್ಲಿ ಕೆಲಸ ಮಾಡುವವರು ತಮ್ಮ ಮೇಲಾಧಿಕಾರಿಗಳನ್ನು ಮೆಚ್ಚಿಸಲು ಶಕ್ತರಾಗುತ್ತಾರೆ. ಗೃಹಿಣಿಯರು ತಮ್ಮ ದೈನಂದಿನ ಸಾಧಾರಣತೆಯ ಹೊರಗಡೆ ಏನನ್ನಾದರೂ ಪ್ರಯತ್ನಿಸಬಹುದು. ಒಟ್ಟಾರೆಯಾಗಿ ಇದು ನಿಮಗೆ ಪ್ರಮುಖವಾದ ದಿನವೆಂದು ಸಾಬೀತಾಗಲಿದೆ.

ಕನ್ಯಾ: ನಿಮ್ಮ ಪ್ರೀತಿಪಾತ್ರರು ಇಂದು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಪರೀಕ್ಷೆಗಳು ಹತ್ತಿರದಲ್ಲಿರುವುದರಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು ಮತ್ತು ಅವರು ಅಧ್ಯಯನ ಮತ್ತು ಬಿಡುವಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಕಲಿಯಬೇಕು. ಇಂದು ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ.

ತುಲಾ: ನೀವು ಸಂಜೆ ನಿಮ್ಮದೇ ತರಂಗಾಂತರ ಹೊಂದಿರುವ ಜನರನ್ನು ಭೇಟಿ ಮಾಡುತ್ತೀರಿ ಮತ್ತು ಇದು ಸಾಕಷ್ಟು ಅದ್ಭುತ ಚರ್ಚೆಗಳಿಗೆ ಕಾರಣವಾಗುತ್ತದೆ. ಇಂದು ನೀವು ಪ್ರಸ್ತುತ ವಾಸ್ತವ ಕುರಿತು ನಿಮ್ಮ ಒಳನೋಟ ವಿಸ್ತರಿಸಿಕೊಳ್ಳಲು ಬಯಸುತ್ತೀರಿ ಮತ್ತು ನಿಮ್ಮ ಪ್ರಯತ್ನಗಳಲ್ಲಿ ಪರಿಣಾಮಕಾರಿಯಾಗುತ್ತೀರಿ.

ವೃಶ್ಚಿಕ: ಪ್ರೀತಿ ಮತ್ತು ಅತ್ಯಂತ ಉತ್ಸಾಹ ನಿಮಗೆ ಜೀವನ ವಿಧಾನದಂತೆ. ಈ ಅಂಶಗಳನ್ನು ಇಂದು ನೀವು ಎತ್ತಿ ಹೇಳಲಿದ್ದೀರಿ. ಆದಾಗ್ಯೂ ಇದು ನಿಮಗೆ ಅತಿಯಾಗಿ ಮಾಡದೇ ಇರಲು ನೆರವಾಗುತ್ತದೆ. ಯಾವುದು ಅತಿಯಾದರೂ ಅದು ವಿನಾಶಕರ.

ಧನು: ನೀವು ಇಂದು ಅತ್ಯಂತ ಸ್ಥಿರ ಮತ್ತು ಸಂಘಟಿತರಾಗಿರುತ್ತೀರಿ. ಕೌಟುಂಬಿಕ ವ್ಯಕ್ತಿಯಾಗಿ ನೀವು ನಿಮ್ಮ ಸಮಯವನ್ನು ಮನೆಯಲ್ಲಿ ಮತ್ತು ಕುಟುಂಬ ಕುರಿತಂತೆ ನಿಮ್ಮ ಕರ್ತವ್ಯಗಳನ್ನು ಪೂರೈಸಲು ಬಳಸುತ್ತೀರಿ. ಕೆಲಸದ ವಿಷಯದಲ್ಲಿ ನೀವು ಇಂದು ಶಾಂತರಾಗಿರುತ್ತೀರಿ. ಸಂಜೆಯಲ್ಲಿ ನಿಸರ್ಗದ ಸೌಂದರ್ಯ ಮತ್ತು ಪ್ರಶಾಂತತೆ ಅನುಭವಿಸಿ.

ಮಕರ: ನೀವು ಮಹತ್ತರ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ; ಇದು ನಿಮ್ಮ ಸುತ್ತಲೂ ಇರುವ ಅತ್ಯಂತ ಮೊಂಡುತನದ ವ್ಯಕ್ತಿಗಳನ್ನೂ ಮನ ಒಲಿಸುತ್ತದೆ. ಆದಾಗ್ಯೂ, ನೀವು ಈ ಸಾಮರ್ಥ್ಯವನ್ನು ಹೆಚ್ಚು ಹೆಚ್ಚು ತೀಕ್ಷ್ಣಗೊಳಿಸಿಕೊಳ್ಳಬೇಕು. ಸಮಸ್ಯೆಯ ಕೇಂದ್ರವನ್ನು ಕಂಡುಕೊಂಡು ಅದಕ್ಕೆ ನೀವು ಎದುರು ನೋಡುತ್ತಿರುವ ಸೂಕ್ತ ಪ್ರತಿಕ್ರಿಯೆಗಳನ್ನು ಆವಿಷ್ಕರಿಸಿಕೊಳ್ಳುತ್ತೀರಿ.

ಕುಂಭ: ಕೆಲ ಪ್ರಕರಣಗಳಲ್ಲಿ ನೀವು ಇರುಕಾದ ಸ್ಥಳದಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ ಮತ್ತು ಪಲಾಯನಕ್ಕೆ ದಾರಿಯೇ ಇಲ್ಲ. ಆದಾಗ್ಯೂ ಸ್ವತಂತ್ರವಾದ ವ್ಯಕ್ತಿಯಾಗಿ ನೀವು ಯಾರ ಸಹಾಯವೂ ಇಲ್ಲದೆ ಕಷ್ಟಗಳನ್ನು ನಿಭಾಯಿಸಬಲ್ಲಿರಿ. ಅದೇ ಸಾಮರ್ಥ್ಯ ನಿಮ್ಮನ್ನು ಇಂದಿಗೂ ದಿಟ್ಟವಾಗಿ ನಿಲ್ಲುವಂತೆ ಮಾಡುತ್ತದೆ.

ಮೀನ: ನಿಮಗೆ ಪ್ರಯಾಣವೆಂದರೆ ಇಷ್ಟ ಮತ್ತು ಅದಕ್ಕೆ ಹಲವು ಕಾರಣಗಳನ್ನು ಹುಡುಕುತ್ತೀರಿ. ಆದ್ದರಿಂದ ನೀವು ಇಂದು ದಿಢೀರ್ ಎಂದು ಸಾಹಸಯಾತ್ರೆ ಕೈಗೊಂಡರೆ ಆಶ್ಚರ್ಯಪಡಬೇಡಿ. ಏನೇ ಆಗಲಿ, ಇದು ಜೀವನೋಪಾಯ ಗಳಿಸುವ ದೈನಂದಿನ ಸಾಧಾರಣ ಸಮಸ್ಯೆಗಳಲ್ಲಿ ನಿಮಗೆ ಅತ್ಯಂತ ಅಗತ್ಯವಾದ ಬಿಡುವು.

ABOUT THE AUTHOR

...view details