ಕರ್ನಾಟಕ

karnataka

By ETV Bharat Karnataka Team

Published : Sep 29, 2023, 4:00 AM IST

Updated : Sep 29, 2023, 6:17 AM IST

ETV Bharat / bharat

ಶುಕ್ರವಾರದ ರಾಶಿ ಭವಿಷ್ಯ.. ಈ ದಿನ ನಿಮ್ಮಲ್ಲಿರುವ ಸೃಜನಶೀಲತೆ ವಿಜೃಂಭಿಸುತ್ತದೆ.. ನೀವು ನಗುತ್ತಾ ಇದ್ದು ಗೆಲುವು ಸಾಧಿಸುತ್ತೀರಿ

ಶುಕ್ರವಾರದ ದಿನ ಭವಿಷ್ಯ ಹೀಗಿದೆ.

daily horoscope of friday
ಶುಕ್ರವಾರದ ರಾಶಿ ಭವಿಷ್ಯ

ಇಂದಿನ ಪಂಚಾಂಗ

29-09-2023 ಶುಕ್ರವಾರ

ಸಂವತ್ಸರ:ಶುಭಕೃತ್

ಆಯನ:ದಕ್ಷಿಣಾಯಣ

ಋತು :ಶರತ್​

ಮಾಸ :ಭಾದ್ರಪದ

ಪಕ್ಷ :ಪೂರ್ಣಿಮಾ

ನಕ್ಷತ್ರ:ಉತ್ತರಾ

ಸೂರ್ಯೋದಯ:ಬೆಳಗ್ಗೆ06:07:00 ಗಂಟೆಗೆ

ಅಮೃತಕಾಲ:ಬೆಳಗ್ಗೆ07:37 ರಿಂದ 09:07 ಗಂಟೆವರೆಗೆ

ದುರ್ಮುಹೂರ್ತ:ಬೆಳಗ್ಗೆ8:31 ರಿಂದ 9:19 ಗಂಟೆವರೆಗೆ ಹಾಗೂ ಮಧ್ಯಾಹ್ನ 14:55 ರಿಂದ 15:43 ಗಂಟೆವರೆಗೆ

ರಾಹುಕಾಲ : ಬೆಳಗ್ಗೆ 10:38 ರಿಂದ 12:08 ಗಂಟೆವರೆಗೆ

ಸೂರ್ಯಾಸ್ತ: ಸಂಜೆ06:09:00 ಗಂಟೆಗೆ

ವರ್ಜ್ಯಂ:ಸಂಜೆ18:15 ರಿಂದ 19:50 ಗಂಟೆಗೆ

ಮೇಷ :ನೀವು ಅಂತಿಮವಾಗಿ ಯೋಗಿಗಳಿಂದ ಪ್ರಭಾವಿತರಾಗಿದ್ದೀರಿ. ಆರ್ಟ್ ಆಫ್ ಲಿವಿಂಗ್​ನಲ್ಲಿ ಪದವಿ ಕೋರ್ಸ್ ಮಾಡಿದರೆ ಹೇಗೆ? ನೀವು ಸಂಗೀತ ಅಥವಾ ನೃತ್ಯದಲ್ಲಿ ಅಥವಾ ಬಹಳ ಕಾಲದಿಂದ ನೀವು ಆಸಕ್ತಿ ವಹಿಸಿದ್ದ ಪಾಠಗಳನ್ನು ಕಲಿತು ನಿಮ್ಮ ಆಸೆ ತೀರಿಸಿಕೊಳ್ಳಬಹುದು. ಒಳ್ಳೆಯ ದಿನ ಮತ್ತು ನಿಮಗೆ ಯಶಸ್ಸಿನ ಸಿಹಿ ತರುತ್ತದೆ.

ವೃಷಭ:ನೀವು ಅವರಿಂದ ನಿರೀಕ್ಷಿಸಿದ್ದ ಬೆಂಬಲ ದೊರೆಯದೇ ಇರುವ ಕಾರಣ ನೀವು ಕುಗ್ಗಿಹೋಗುತ್ತೀರಿ. ನೀವು ಪ್ರಾಯೋಗಿಕವಾಗಿರಬೇಕೇ ಹೊರತು, ಭಾವನೆಗಳಿಂದ ಬಳಲಬಾರದು. ಕೌಟುಂಬಿಕ ಸಂಘರ್ಷಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ನೀವು ಸಂಘರ್ಷಗಳನ್ನು ತಪ್ಪಿಸಿ ನಗುತ್ತಾ ಇದ್ದು ಗೆಲ್ಲಿರಿ.

ಮಿಥುನ: ಇಂದು ನೀವು ಕೆಲಸಗಳನ್ನು ಪೂರೈಸಲು ತಲೆ ಕೆಡಿಸಿಕೊಳ್ಳುತ್ತೀರಿ. ಆದರೆ ನಿಮ್ಮ ನಮ್ರತೆ ಒಳ್ಳೆಯದೇನೂ ಮಾಡುವುದಿಲ್ಲ. ಆದರೂ ನಿಮ್ಮ ಕೆಲಸಗಳನ್ನು ನಿಮ್ಮ ಬಾಸ್​ಗೆ ತೋರಿಸಬೇಕು. ನಿಮ್ಮ ಅಸಾಧಾರಣ ಸಾಮರ್ಥ್ಯ ಅತ್ಯುತ್ತಮ ಕಾರ್ಯಕ್ಷಮತೆಯಾಗುತ್ತದೆ ಮತ್ತು ದಿನವನ್ನು ಉಳಿಸುತ್ತದೆ. ನಿಮ್ಮ ಯಶಸ್ಸಿಗೆ ನಿಮ್ಮ ಕುಟುಂಬ ಕಾರಣ ಎಂದು ಮರೆಯಬೇಡಿ.

ಕರ್ಕಾಟಕ : ನೀವು ಕೆಲಸ ಅಥವಾ ವ್ಯಾಪಾರದಲ್ಲಿ ಕಠಿಣ ಪರಿಶ್ರಮದಿಂದ ಸ್ಥಾನ ಪಡೆಯುತ್ತೀರಿ. ಪಾಲುದಾರರೊಂದಿಗೆ ಸಂಬಂಧ ಸುಧಾರಿಸುತ್ತದೆ. ಸಂಗಾತಿಯೊಂದಿಗೆ ಹತ್ತಿರವಾಗುತ್ತೀರಿ. ಮೆಲೊಡಿ ಮತ್ತು ಆನಂದ ಮನೆಯಲ್ಲಿನ ಸಂತೋಷ ತೋರುತ್ತದೆ. ನೀವು ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯುತ್ತೀರಿ.

ಸಿಂಹ :ನೀವು ನಿಮ್ಮ ಜೀವನದಲ್ಲಿ ಮಹತ್ತರ ಕ್ಷಣ ಎಂದು ಭಾವಿಸುವ ಸನ್ನಿವೇಶದಲ್ಲಿ ನೀವು ಇದ್ದರೆ ಅದಕ್ಕೆ ಆಶ್ಚರ್ಯಪಡಬೇಡಿ. ಅದು ವೈಯಕ್ತಿಕ ವಿಷಯವಾಗಲಿ, ಅಥವಾ ಕೆಲಸಕ್ಕೆ ಸಂಬಂಧಿಸಿದಾಗಲಿ, ನೀವು ಕಂಡುಕೊಳ್ಳಲು ಕಾಯಬೇಕು, ಸುಸೂತ್ರವಾಗಿ ಮುನ್ನಡೆಯಲು ದೃಢತೆ ಮತ್ತು ರಾಜತಂತ್ರ ಬೇಕು. ಸಮತೋಲನದಲ್ಲಿರಿ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಅಪಾರ ಹೆಚ್ಚಳ ಕಾಣುತ್ತದೆ.

ಕನ್ಯಾ : ಇಂದು ನಿಮ್ಮಲ್ಲಿರುವ ಸೃಜನಶೀಲ ವ್ಯಕ್ತಿ ವೇದಿಕೆಯಲ್ಲಿ ವಿಜೃಂಭಿಸುತ್ತಾನೆ. ನಿಮಗೆ ಮನರಂಜಕ ಮತ್ತು ಕಾಮಿಡಿಯನ್ ಆಗಿ ಮಹತ್ತರ ಸಾಮರ್ಥ್ಯಗಳಿವೆ ಮತ್ತು ಜನರು ಸಂಜೆಯಲ್ಲಿ ನಿಮ್ಮ ಜೋಕ್ ಸಂಪತ್ತಿಗೆ ಖುಷಿಯಾಗುತ್ತಾರೆ. ಆದರೆ ನೀವು ಇತರೆ ಸಮಸ್ಯೆಗಳು ಮತ್ತು ಕರ್ತವ್ಯಗಳಿಗೂ ಕೊಂಚ ಶಕ್ತಿ ಉಳಿಸಿಕೊಳ್ಳಿ.

ತುಲಾ : ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುತ್ತೀರಿ. ನೀವು ಸಣ್ಣ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ಕೊಂಚ ಒತ್ತಡ ಅನುಭವಿಸುತ್ತೀರಿ. ಇಂದು ನೀವು ವಿವಿಧ ಮೂಲಗಳಿಂದ ಗಳಿಸಲು ಶಕ್ತರಾಗಿದ್ದೀರಿ. ನಿಮ್ಮ ಮನಸ್ಸನ್ನು ಸಮತೋಲನದಲ್ಲಿ ಇರಿಸಿದರೆ ನಿಮ್ಮ ಕೆಲಸದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ.

ವೃಶ್ಚಿಕ : ನೀವು ವಿವಿಧ ಅಭಿರುಚಿ ಮತ್ತು ಮನೋಧರ್ಮದ ಜನರನ್ನು ಎದುರಿಸಬಹುದು. ಕೆಲವರು ನಿಮಗೆ ಆಶ್ಚರ್ಯಪಡಿಸುತ್ತಾರೆ. ಕೆಲವರು ನಿಮಗೆ ಶಾಕ್ ನೀಡುತ್ತಾರೆ. ಕೆಲವೊಮ್ಮೆ, ಜನರು ನಿಮ್ಮ ಯಶಸ್ಸಿಗೆ ಒಂದೇ ರೀತಿ ಪ್ರತಿಕ್ರಿಯಿಸಿದ್ದಾರಾ? ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದನ್ನು ಜಾಣ್ಮೆ ಮತ್ತು ರಾಜತಾಂತ್ರಿಕವಾಗಿ ಎದುರಿಸಿ.

ಧನು:ನೀವು ನಿಮ್ಮ ಸುತ್ತಲಿನ ಭಾವಪರವಶತೆಯಲ್ಲಿದ್ದೀರಿ. ನೀವು ಪರ್ಫಾರ್ಮೆನ್ಸ್ ನಿಂದ ಮುನ್ನಡೆಯುವವರು ಮತ್ತು ನೀವು ತೆಗೆದುಕೊಳ್ಳುವ ಯಾವುದೇ ಕಾರ್ಯಕ್ಕೆ ನಿಮ್ಮ ಅತ್ಯುತ್ತಮವಾದುದನ್ನು ನೀಡುತ್ತೀರಿ. ನಿಮ್ಮ ಆಂತರಿಕ ಧ್ವನಿಯನ್ನು ಕೇಳಿರಿ; ಅದು ನಿಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತದೆ. ಸರ್ವಶಕ್ತ ನಿಮ್ಮ ಮೇಲೆ ಕೃಪಾಶಿರ್ವಾದ ಬೀರಿದ್ದಾನೆ. ಅದನ್ನು ಇಂದು ಸರಿಯಾಗಿ ಬಳಸಿಕೊಳ್ಳಿ.

ಮಕರ :ಹೆಚ್ಚಾಗುತ್ತಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳು ನಿಮ್ಮ ಶಕ್ತಿಯನ್ನು ಹೀರುತ್ತವೆ. ಆದರೆ ನಿಮ್ಮ ಉತ್ಸಾಹವನ್ನಲ್ಲ. ದಿನದ ದ್ವಿತೀಯಾರ್ಧ ನೀವು ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ದಣಿವಿನಿಂದ ಕೂಡಿರುತ್ತದೆ. ಜಾಣ್ಮೆಯಿಂದ ಮತ್ತು ಸರಿಯಾದ ಕ್ರಮಗಳ ಮೂಲಕ ನೀವು ವಿಜೇತರಾಗುತ್ತೀರಿ.

ಕುಂಭ :ನೀವು ಸುತ್ತಮುತ್ತಲೂ ಶಾಂತಿ ಮತ್ತು ಆನಂದ ಹರಡಬೇಕಿದ್ದಲ್ಲಿ ಈ ದಿನ ನೀವು ಸಾಧಿಸಬಹುದು. ಆದರೂ ನೀವು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ಸಮಸ್ಯೆ ಪರಿಹರಿಸಲು ತ್ಯಾಗ ಮಾಡಬೇಕಾಗಬಹುದು. ಶಾಂತಿದೂತನ ಕಾರ್ಯ ಮಾಡುವುದು ಒಳ್ಳೆಯದು. ಆದರೆ ಜನರು ಅದನ್ನು ಹಗುರವಾಗಿ ಕಾಣುತ್ತಾರೆ. ನೀವು ಉದಾಹರಣೆ ನಿರ್ಮಿಸುತ್ತಿದ್ದೀರಿ ಎಂದು ಭಾವಿಸುತ್ತೀರಿ. ಆದರೆ ಹಿಂದಿರುಗಿ ನೋಡಿ, ಯಾರೂ ನಿಮ್ಮನ್ನು ಅನುಸರಿಸುತ್ತಿಲ್ಲ.

ಮೀನ:ಪ್ರಮುಖ ವೆಚ್ಚಗಳು ನಿಮ್ಮ ದಾರಿಯಲ್ಲಿವೆ. ಆದರೆ ಒಳ್ಳೆಯ ಸುದ್ದಿ ಎಂದರೆ ಅಗತ್ಯಗಳು ಮತ್ತು ಬಯಕೆಗಳ ನಡುವೆ ಗೆರೆ ಎಳೆದು ಅವುಗಳನ್ನು ತಪ್ಪಿಸಬಹುದು. ಕೊಂಚ ನಿಯಂತ್ರಣ ಹೇರಿಕೊಂಡರೆ ನಂತರ ನಿಮಗೆ ಉಳಿತಾಯ ಹೆಚ್ಚಿಸುತ್ತದೆ.

Last Updated : Sep 29, 2023, 6:17 AM IST

ABOUT THE AUTHOR

...view details