ಕರ್ನಾಟಕ

karnataka

ನಿವಾರ್​ ಅಬ್ಬರ: ಚಂಡಮಾರುತಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ನಿವಾರ್​​​ ಚಂಡಮಾರುತ ತನ್ನ ಸ್ಥಳಾಂತರ ಪ್ರಕ್ರಿಯೆ ಮುಂದುವರೆಸಿದ್ದು, ಪುದುಚೇರಿ ಬಳಿಯ ಕರಾವಳಿ ಪ್ರದೇಶವನ್ನು ದಾಟಿಹೋಗಿದೆ. ಹಲವೆಡೆ ಭಾರಿ ಮಳೆ ಮಳೆಯಾದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

By

Published : Nov 26, 2020, 6:57 AM IST

Published : Nov 26, 2020, 6:57 AM IST

Updated : Nov 26, 2020, 8:00 AM IST

CycloneNivar continues in Tamilnadu
ಮುಂದುವರೆದ ನಿವಾರ್​ ಚಂಡಮಾರುತದ ಅಬ್ಬರ....ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಚೆನ್ನೈ(ತಮಿಳುನಾಡು): ನಿವಾರ್​ ಚಂಡಮಾರುತದಿಂದ ತಮಿಳುನಾಡು, ಪುದುಚೇರಿಯ ಹಲವೆಡೆ ಭಾರಿ ಮಳೆ ಮಳೆಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸದ್ಯ ಹಲವೆಡೆ ಭಾರಿ ಗಾಳಿ ಬೀಸುತ್ತಿದ್ದು, ಮತ್ತಷ್ಟು ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ.

ನಿವಾರ್​​​ ಚಂಡಮಾರುತ ತನ್ನ ಸ್ಥಳಾಂತರ ಪ್ರಕ್ರಿಯೆ ಮುಂದುವರೆಸಿದ್ದು, ಪುದುಚೇರಿ ಬಳಿಯ ಕರಾವಳಿಯನ್ನು ಈಗಾಗಲೇ ದಾಟಿದೆ. ಸದ್ಯ ಚಂಡಮಾರುತ ತನ್ನ ತೀಕ್ಷ್ಣತೆಯನ್ನು ನಿಧಾನಗತಿಯಲ್ಲಿ ಕಳೆದುಕೊಳ್ಳುತ್ತಿದೆ.

ಪುದುಚೇರಿ ಮತ್ತು ಕುಡಲೋರ್​​ ಕರಾವಳಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಚೆನ್ನೈನಲ್ಲೂ ನಿವಾರ್​​ ಪರಿಣಾಮ ಕುಂಭದ್ರೋಣ ಮಳೆ ಸುರಿಯುತ್ತಿದೆ. ಪುದುಚೇರಿಯಿಂದ 30 ಕಿ.ಮೀ. ಚೆನ್ನೈನಿಂದ 115 ಕಿಮೀ. ದಕ್ಷಿಣಕ್ಕೆ ನಿವಾರ್​ ಅಪ್ಪಳಿಸಿದೆ. ಈಗಾಗಲೇ ಮರಕ್ಕಣಮ್​​ ಸಮೀಪ ಅಪ್ಪಳಿಸಿದ ಸೈಕ್ಲೋನ್​​ ಪ್ರಭಾವ ಕಡಿಮೆಯಾಗಲು ಇನ್ನೂ 3 ಗಂಟೆ ಬೇಕೆಂದು ಅಂದಾಜಿಸಲಾಗಿದೆ.

ನಿವಾರ್ ಚಂಡಮಾರುತದ ಅನಾಹುತ ತಪ್ಪಿಸಲು ಸೂಕ್ತ ಕ್ರಮ: ಸಿಎಂ

ಚಂಡಮಾರುತದ ಹಿನ್ನೆಲೆ ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಿ, ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಕ್ಷಣಾ ಕಾರ್ಯ ಮುಂದುವರೆದಿದೆ.

Last Updated : Nov 26, 2020, 8:00 AM IST

ABOUT THE AUTHOR

...view details