ಕರ್ನಾಟಕ

karnataka

ETV Bharat / bharat

ತೀವ್ರ ಸ್ವರೂಪದಲ್ಲಿ ಮುಂಬೈ ಮೂಲಕ ಗುಜರಾತ್​ ಕಡೆ ಸಾಗಲಿರುವ ತೌಕ್ತೆ ಚಂಡಮಾರುತ - Tauktae

ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ತೌಕ್ತೆ ಚಂಡಮಾರುತ ತನ್ನ ಅಬ್ಬರ ತೋರಿಸಿದ್ದು, ಕೆಲವೇ ಗಂಟೆಗಳಲ್ಲಿ ಮುಂಬೈ ಕರಾವಳಿ ಮೂಲಕ ಹಾದು ಹೋಗಲಿದೆ. ಹೀಗಾಗಿ ಮುಂಬೈನಲ್ಲಿ ಮುಂಜಾಗ್ರತಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

Cyclone: Temporary shelters put up in Mumbai; Navy on standby
ಮುಂಬೈ ಮೂಲಕ ಗುಜರಾತ್​ನೆಡೆ ಸಾಗಲಿರುವ ತೌಕ್ತೆ

By

Published : May 17, 2021, 9:38 AM IST

Updated : May 17, 2021, 10:12 AM IST

ತೌಕ್ತೆ: ಮುಂದಿನ ಕೆಲ ಗಂಟೆಗಳಲ್ಲಿ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಲಿರುವ ತೌಕ್ತೆ ಚಂಡಮಾರುತ ಇಂದು ಮುಂಬೈ ಕರಾವಳಿ ಮೂಲಕ ಹಾದು ಸಂಜೆ ವೇಳೆಗೆ ಗುಜರಾತ್​ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

ಹೀಗಾಗಿ ಮುಂಬೈನಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಬಲವಾದ ಗಾಳಿ ಬೀಸಲಿದ್ದು, ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ. ಐಎಂಡಿ ಎಚ್ಚರಿಕೆ ಮೇರೆಗೆ ಮುಂಬೈನಲ್ಲಿ ಎಲ್ಲೋ ಅಲರ್ಟ್​ ಘೋಷಿಸಲಾಗಿದೆ. ಮುಂಬೈ ಏರ್​​ಪೋರ್ಟ್​​ ಮಧ್ಯಾಹ್ನ 2 ಗಂಟೆಯವರಗೆ ಬಂದ್ ಮಾಡಲಾಗಿದೆ.​ ಮುಂಬೈನ ಪಶ್ಚಿಮ ಭಾಗಗಳ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಮೂರು ತಂಡಗಳು ಬೀಡುಬಿಟ್ಟಿದ್ದು, ಭಾರತೀಯ ನೌಕಾಪಡೆಯ ತಂಡಗಳೂ ಸಹ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ತೀವ್ರತೆಯೊಂದಿಗೆ ಮುಂಬೈ ಮೂಲಕ ಗುಜರಾತ್​ನೆಡೆ ಸಾಗಲಿರುವ ತೌಕ್ತೆ

ಇದನ್ನೂ ಓದಿ: ರಾಜ್ಯದಲ್ಲಿ ತೌಕ್ತೆ ಅಬ್ಬರ: ಚಂಡಮಾರುತಕ್ಕೆ ನಾಲ್ವರು ಬಲಿ, 216 ಮನೆಗಳಿಗೆ ಹಾನಿ

ಮುಂಬೈ ಅಗ್ನಿಶಾಮಕ ದಳದ ಪ್ರವಾಹ ರಕ್ಷಣಾ ಘಟಕದ ಆರು ತಂಡಗಳನ್ನು ನಗರದ ಆರು ಕಡಲತೀರಗಳಲ್ಲಿ ನಿಯೋಜಿಸಲಾಗಿದೆ. ಬೃಹನ್​​ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಐದು ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿದ್ದು, ಅಗತ್ಯವಿದ್ದಲ್ಲಿ ನಾಗರಿಕರು ಇಲ್ಲಿಗೆ ಸ್ಥಳಾಂತರವಾಗಬಹುದು ಎಂದು ತಿಳಿಸಿದೆ.

ವಿವಿಧ ಕೋವಿಡ್ ಕೇಂದ್ರಗಳ ಐಸಿಯುವಿನಲ್ಲಿದ್ದ 580 ರೋಗಿಗಳಲ್ಲಿ 500 ಕ್ಕೂ ಹೆಚ್ಚು ಮಂದಿಯನ್ನು ಇತರ ಕೋವಿಡ್​ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ನಿನ್ನೆಯಿಂದ ಮುಂಬೈನಲ್ಲಿ ವ್ಯಾಕ್ಸಿನೇಷನ್​ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ತೌಕ್ತೆ ಎಫೆಕ್ಟ್​: ಕರಾವಳಿ ಜಿಲ್ಲೆಗಳಲ್ಲಿ ಮೇ 17 ರಿಂದ 20ರವರೆಗೆ ಎಲ್ಲೋ ಅಲರ್ಟ್

ಗುಜರಾತ್​ನಲ್ಲಿ ಸೈಕ್ಲೋನ್​ ಭೂಸ್ಪರ್ಶ ಸಾಧ್ಯತೆ

ತೌಕ್ತೆ ಚಂಡಮಾರುತವು ಮುಂಬೈ ಕರಾವಳಿ ಮೂಲಕ ಹಾದು ಗುಜರಾತ್​ನೆಡೆ ಇಂದು ಸಂಜೆ ಸಾಗಲಿದ್ದು, ಗುಜರಾತ್ ಹಾಗೂ ಕೇಂದ್ರಾಡಳಿತ ಪ್ರದೇಶ ದಿಯುವಿಗೆ ಐಎಂಡಿಯು ರೆಡ್​ ಅಲರ್ಟ್ ನೀಡುತ್ತಿದೆ. ಇಲ್ಲಿನ ಪ್ರದೇಶಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

ತೌಕ್ತೆ ಅಬ್ಬರಕ್ಕೆ 10 ಸಾವು

ಚಂಡಮಾರುತ ತಂದಿಟ್ಟ ಅವಾಂತರದಿಂದಾಗಿ ಕರ್ನಾಟಕದಲ್ಲಿ ನಾಲ್ವರು, ಮಹಾರಾಷ್ಟ್ರ, ಕೇರಳ, ಗೋವಾ ರಾಜ್ಯಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಈ ರಾಜ್ಯಗಳ ನೂರಾರು ಗ್ರಾಮಗಳಿಗೆ ಹಾನಿಯಾಗಿದೆ.

Last Updated : May 17, 2021, 10:12 AM IST

ABOUT THE AUTHOR

...view details