ಕರ್ನಾಟಕ

karnataka

'ಗುಲಾಬ್' ಎಫೆಕ್ಟ್​​​: ಹಲವೆಡೆ ಭೂಕುಸಿತ, ರಸ್ತೆ ಸಂಪರ್ಕ ಅಸ್ತವ್ಯಸ್ತ

By

Published : Sep 27, 2021, 12:42 PM IST

ರಾತ್ರಿಯಿಡೀ ಸುರಿದ ಮಳೆಯಿಂದಾಗಿ, ಸುಂಕಿ ಆಸ್ಪತ್ರೆಯ ಬಳಿಯ ಎನ್‌ಎಚ್ -26 ಹೆದ್ದಾರಿಯಲ್ಲಿ ನೀರು ನಿರಂತರವಾಗಿ ಹರಿಯುತ್ತಿದೆ. ಇದರಿಂದ ಸುಂಕಿ ಘಾಟಿಯಲ್ಲಿ ಕೂಡ ಭೂಕುಸಿತ ಸಂಭವಿಸಿದೆ.

'ಗುಲಾಬ್' ಎಫೆಕ್ಟ್​​​
'ಗುಲಾಬ್' ಎಫೆಕ್ಟ್​​​

ಕೊರಪುಟ್:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರೂಪುಗೊಂಡಿರುವ ಗುಲಾಬ್ ಚಂಡಮಾರುತ ಒಡಿಶಾ, ಆಂಧ್ರಪ್ರದೇಶಗಳಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ.

'ಗುಲಾಬ್' ಎಫೆಕ್ಟ್​​​

ಈ ಚಂಡಮಾರುತದ ಎಫೆಕ್ಟ್​​ನಿಂದಾಗಿ ಕೋರಾಪುಟ್ ಜಿಲ್ಲೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಬೃಹತ್​ ಮರಗಳು ನೆಲಕ್ಕುರುಳಿರುವುದರಿಂದ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ದೊಡ್ಡ ಮರಗಳು ಲ್ಯಾಮ್ಟಾಪುಟ್​​​ - ವಿಶಾಖಪಟ್ಟಣಂ ರಸ್ತೆಗೆ ಉರುಳುತ್ತಿರುವ ದೃಶ್ಯ ಸೆರೆಯಾಗಿದೆ.

ರಾತ್ರಿಯಿಡೀ ಸುರಿದ ಮಳೆಯಿಂದಾಗಿ, ಸುಂಕಿ ಆಸ್ಪತ್ರೆ ಬಳಿಯ ಎನ್‌ಎಚ್ -26 ಹೆದ್ದಾರಿಯಲ್ಲಿ ನೀರು ನಿರಂತರವಾಗಿ ಹರಿಯುತ್ತಿದೆ. ಇದರಿಂದ ಸುಂಕಿ ಘಾಟಿಯಲ್ಲಿ ಕೂಡ ಭೂಕುಸಿತ ಸಂಭವಿಸಿದೆ.

ABOUT THE AUTHOR

...view details