ಕರ್ನಾಟಕ

karnataka

ETV Bharat / bharat

ದುಬೈನಿಂದ ಬಂದವರ ಬಾಯೆಲ್ಲಾ ಬಂಗಾರ.. 951 ಗ್ರಾಂ ಚಿನ್ನ ಸಾಗಿಸುತ್ತಿದ್ದ ಇಬ್ಬರು ಖದೀಮರು ಅರೆಸ್ಟ್​ - ಉಜ್ಬೇಕಿ ಪ್ರಜೆಗಳ ಬಂಧನ

ಬಾಯಿಯಲ್ಲಿ ಬಂಗಾರ ಇಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಾಯಲ್ಲಿ ಬಂಗಾರ ಸಾಗಿಸುತ್ತಿದ್ದ ಇಬ್ಬರು ವಿದೇಶಿಗರ ಬಂಧನ
ಬಾಯಲ್ಲಿ ಬಂಗಾರ ಸಾಗಿಸುತ್ತಿದ್ದ ಇಬ್ಬರು ವಿದೇಶಿಗರ ಬಂಧನ

By

Published : Sep 11, 2021, 10:19 AM IST

ನವದೆಹಲಿ:ಬಾಯಿಯಲ್ಲಿ ದಂತ ದ್ರವ್ಯದ ರೂಪದಲ್ಲಿ 951 ಗ್ರಾಂ ಚಿನ್ನ ಸಾಗಿಸುತ್ತಿದ್ದ ಇಬ್ಬರು ಉಜ್ಬೇಕಿ ಪ್ರಜೆಗಳನ್ನು ದೆಹಲಿ ಕಸ್ಟಮ್ಸ್​ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ.

ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರ ತಪಾಸಣೆ ವೇಳೆ ಇಬ್ಬರು ಉಜ್ಬೇಕಿ ಪ್ರಜೆಗಳ ಬಾಯಲ್ಲಿ ಚಿನ್ನವಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಕದ್ದ ಬೈಕ್​ಗಳನ್ನು ಗುಜರಿಗೆ ಕೊಂಡೊಯ್ಯುತ್ತಿದ್ದ ಖದೀಮರು ಪೊಲೀಸರ ವಶಕ್ಕೆ

ಇಬ್ಬರನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರಿಂದ 951 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details