ತೇಜ್ಪುರ: ಕೋವಿಡ್ ಪರಿಹಾರಕ್ಕಾಗಿ ಭಾರತೀಯ ವಾಯುಪಡೆಯು ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ವಾಯುಪಡೆಯ ಓನ್ ಸಿ -17 ವಿಮಾನ ತಡರಾತ್ರಿ 2 ಗಂಟೆಗೆ ಸಿಂಗಾಪುರದ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂಡನ್ ವಾಯುನೆಲೆಗೆ ಪ್ರಯಾಣ ಬೆಳೆಸಿತು.
ಭಾರತೀಯ ವಾಯುಸೇನೆಯ ವಿಮಾನಕ್ಕೆ ಆಮ್ಲಜನಕ ಟ್ಯಾಂಕರ್ ತುಂಬಿಸುತ್ತಿರುವುದು. ಇಂದು ಬೆಳಗ್ಗೆ ಸಿಂಗಾಪುರ ತಲುಪಿರುವ ಯುದ್ಧವಿಮಾನ ಕ್ರಯೋಜೆನಿಕ್ ಆಮ್ಲಜನಕದ ಕಂಟೇನರ್ಗಳನ್ನು ತುಂಬಿಸಿಕೊಂಡ ನಂತರ, ಸಿಂಗಾಪುರದಿಂದ ನಿರ್ಗಮಿಸಲಿದೆ.
ಭಾರತೀಯ ವಾಯುಪಡೆಯ ಮತ್ತೊಂದು ಸಿ -17 ಯುದ್ಧ ವಿಮಾನ ಹಿಂಡನ್ ವಾಯುನೆಲೆಯಿಂದ ಪುಣೆಗೆ ಆಗಮಿಸಿತು. ಜೆಟ್ನಲ್ಲಿ 2 ಖಾಲಿ ಕ್ರಯೋಜೆನಿಕ್ ಆಮ್ಲಜನಕ ಕಂಟೇನರ್ ಟ್ರಕ್ಗಳೊಂದಿಗೆ ತುಂಬಿಸಲಾಯಿತು. ನಂತರ ಅವುಗಳನ್ನು ಜಮ್ನಗರ್ ವಾಯುನೆಲೆಗೆ ಹಾರಿಸಲಾಯಿತು. ಅದೇ ರೀತಿ, ಸಿ-17 ವಿಮಾನ ಎರಡು ಖಾಲಿ ಆಮ್ಲಜನಕ ಕಂಟೇನರ್ಗಳನ್ನು ಜೋಧಪುರದಿಂದ ಜಮ್ನಗರಕ್ಕೆ ಸಾಗಿಸಿತು.
ವೈದ್ಯಕೀಯ ಸಲಕರಣೆಗಳನ್ನು ಕೊಂಡೊಯ್ಯಲು ಸಿದ್ಧವಾಗಿರುವ ಭಾರತೀಯ ವಾಯುಸೇನೆಯ ವಿಮಾನ ಒಂದು ಐಎಎಫ್ ಚಿನೂಕ್ ಹೆಲಿಕಾಪ್ಟರ್ ಮತ್ತು ಒಂದು ಆನ್-32 ಸಾರಿಗೆ ವಿಮಾನಗಳು ಕ್ರಮವಾಗಿ ಜಮ್ಮುವಿನಿಂದ ಲೇಹ್ಗೆ ಮತ್ತು ಜಮ್ಮುವಿನಿಂದ ಕಾರ್ಗಿಲ್ಗೆ ಕೋವಿಡ್ ಪರೀಕ್ಷಾ ಸಾಧನಗಳನ್ನು ಕೊಂಡೊಯ್ದಿವೆ. ಉಪಕರಣಗಳು ಜೈವಿಕ ಸುರಕ್ಷತಾ ಕ್ಯಾಬಿನೆಟ್ಗಳು, ಕೇಂದ್ರಾಪಗಾಮಿಗಳು ಮತ್ತು ಸ್ಟೆಬಲೈಸರ್ಗಳನ್ನು ಒಳಗೊಂಡಿವೆ. ಈ ಯಂತ್ರಗಳನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತಯಾರಿಸಿದೆ.
ಇದನ್ನೂ ಓದಿ:ದೆಹಲಿ ಆಸ್ಪತ್ರೆಯ 50 ಮಂದಿ ಸೋಂಕಿತರಿಗೆ ಬೇಕೇ ಬೇಕು ಆಕ್ಸಿಜನ್, ಆದ್ರೆ ಪೂರೈಕೆಯೇ ಇಲ್ಲ!