ಕರ್ನಾಟಕ

karnataka

By

Published : Apr 13, 2022, 8:19 PM IST

ETV Bharat / bharat

ಕುತುಬ್​ ಮಿನಾರ್​​ ಕಾಂಪ್ಲೆಕ್ಸ್‌ನ 'ಗಣೇಶ ವಿಗ್ರಹ' ತೆಗೆಯದಂತೆ ಕೋರ್ಟ್​ ನಿರ್ದೇಶನ

ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಕುತುಬ್ ಮಿನಾರ್​ ಕಾಂಪ್ಲೆಕ್ಸ್​​ನಲ್ಲಿರುವ ಗಣೇಶನ ವಿಗ್ರಹ ತೆರವು ವಿಚಾರವಾಗಿ ಸಾಕೇತ್ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

lord Ganesha idol from Qutub Minar complex
lord Ganesha idol from Qutub Minar complex

ನವದೆಹಲಿ: ಕುತುಬ್‌ ಮಿನಾರ್‌ ಕಾಂಪ್ಲೆಕ್ಸ್‌ನಲ್ಲಿರುವ ಎರಡು ಗಣೇಶನ ವಿಗ್ರಹಗಳನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಗೊಳಿಸಬೇಕೆಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆದಿದೆ. ಆದರೆ, ವಿಶ್ವ ಪರಂಪರೆ ತಾಣವೆನಿಸಿದ ಸ್ಥಳದಲ್ಲಿ ಬದಲಾವಣೆ ಮಾಡುವ ಎನ್‌ಎಂಎ ಪ್ರಯತ್ನಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಪ್ರಶ್ನೆ ಮಾಡಿ ಸಾಕೇತ್​ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದರ ವಿಚಾರಣೆ ನಡೆಸಿರುವ ಕೋರ್ಟ್ ಇದೀಗ ಮಹತ್ವದ ನಿರ್ದೇಶನ ನೀಡಿದೆ.

ರಾಷ್ಟ್ರೀಯ ವಸ್ತು ಸಂಗ್ರಹಾಲಯ ಅಥವಾ ಇನ್ನಾವುದೇ ಸ್ಥಳದಲ್ಲಿ ಗಣೇಶನ ವಿಗ್ರಹ ಪ್ರದರ್ಶಿಸಬಾರದು, ಕುತುಬ್ ಮಿನಾರ್​ ಸಂಕೀರ್ಣದಲ್ಲೇ ಗೌರಯುತವಾಗಿ ಇರಿಸಬೇಕೆಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಅರ್ಜಿದಾರನ ಪರವಾಗಿ ತೀರ್ಪು ನೀಡಿದೆ.

ಬಿಜೆಪಿ ನಾಯಕ ಮತ್ತು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಅಧ್ಯಕ್ಷ ತರುಣ್​ ವಿಜಯ್​ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಅಗೌರವದಿಂದ ಇರಿಸಲಾಗಿರುವ ಗಣೇಶನ ಮೂರ್ತಿ ತೆಗೆದು, ಬೇರೆ ಕಡೆ ಸ್ಥಾಪಿಸುವಂತೆ ತಿಳಿಸಿದ್ದರು. ಜೊತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಪತ್ರ ಬರೆದಿದ್ದರು. ಇದರ ವಿರುದ್ಧವಾಗಿ ಅರ್ಜಿದಾರನೋರ್ವ ಕೋರ್ಟ್​ ಮೆಟ್ಟಿಲೇರಿದ್ದನು. ಅದರ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ಇದನ್ನೂ ಓದಿ:ಒಂದೇ ಗಂಟೆಯಲ್ಲಿ ನಿಮ್ಮ ಬ್ಯಾಂಕ್​ ಖಾತೆಗೆ PF ಹಣ: ನೀವು ಮಾಡಬೇಕಾಗಿದ್ದಿಷ್ಟೇ..

ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ 12ನೇ ಶತಮಾನದ ಉಲ್ಟಾಗಣೇಶ ಹಾಗೂ ಪಂಜರದಲ್ಲಿರುವ ಗಣೇಶನ ಎರಡು ವಿಗ್ರಹಗಳಿವೆ. 1993ರಲ್ಲಿ ಇಡೀ ಸಮುಚ್ಛಯವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ದಾಖಲಿಸಿದೆ.

ABOUT THE AUTHOR

...view details