ಕರ್ನಾಟಕ

karnataka

ETV Bharat / bharat

ಕೊರೊನಾ ಎರಡನೇ ಅಲೆ ಕುರಿತು ಮತ್ತೊಂದು ಶಾಕಿಂಗ್​ ಸುದ್ದಿ.. ವೈರಾಲಜಿಸ್ಟ್ ಶಾಹಿದ್ ಜಮೀಲ್ ಹೇಳಿದ್ದೇನು?

ಪ್ರಸ್ತುತ ಪ್ರಕರಣಗಳ ಹೆಚ್ಚಳವು ಸ್ಥಿರವಾಗಿ ಮುಂದುವರೆಯುತ್ತಿದೆ. ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಿಂದ ಹೊರಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ವೈರಾಲಜಿಸ್ಟ್​ ಶಾಹಿದ್​ ಜಮೀಲ್​ ಹೇಳಿದ್ದಾರೆ.

By

Published : May 12, 2021, 4:59 PM IST

ಕೊರೊನಾ
ಕೊರೊನಾ

ಹೈದರಾಬಾದ್​: ಕೊರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಬಹಳ ಸಮಯ ಹಿಡಿಯುತ್ತದೆ. ಇದು ಜುಲೈವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಪ್ರಮುಖ ವೈರಾಲಜಿಸ್ಟ್ ಶಾಹಿದ್ ಜಮೀಲ್ ಹೇಳಿದ್ದಾರೆ.

ಆನ್‌ಲೈನ್ ವೇದಿಕೆಯಾಗಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಸ್ತುತ ಪ್ರಕರಣಗಳ ಹೆಚ್ಚಳವು ಸ್ಥಿರವಾಗಿ ಮುಂದುವರೆಯುತ್ತಿದೆ. ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಿಂದ ಹೊರಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಕೊರೊನಾ ಮಹಾಮಾರಿಯು ಭಾರತವನ್ನು ಇನ್ನಷ್ಟು ಹಂತಗಳಲ್ಲಿ ಆವರಿಸುವ ಸಾಧ್ಯತೆಯಿದೆ. ಹಾಗಾಗಿ ಲಸಿಕೆಗಳ ವಿತರಣೆಯನ್ನು ವೇಗವಾಗಿ ಪೂರ್ಣಗೊಳಿಸಿದರೆ ಮುಂದಿನ ಅಲೆಯನ್ನು ತಡೆಯಬಹುದು ಎಂದು ಅಭಿಪ್ರಾಯಟ್ಟರು.

ರೂಪಾಂತರ ಕೊರೊನಾದಿಂದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂಬುದು ಸತ್ಯ. ಆದರೆ ಇದು ಸಾವಿನ ಹೆಚ್ಚಳಕ್ಕೆ‌ ಕಾರಣ ಎಂಬುದಕ್ಕೆ ಯಾವುದೇ ಆದಾರಗಳಿಲ್ಲ ಎಂದು ಜಲೀಲ್ ಹೇಳಿದರು.

ABOUT THE AUTHOR

...view details