ಕರ್ನಾಟಕ

karnataka

By

Published : Apr 29, 2021, 5:09 PM IST

Updated : Apr 29, 2021, 5:30 PM IST

ETV Bharat / bharat

ಆಸ್ಪತ್ರೆಗೆ ಸಿಎಂ ಭೇಟಿ: ಚಿಕಿತ್ಸೆ ಸಿಗದೇ ಆಸ್ಪತ್ರೆ ಹೊರಗೆ ನರಳಾಡಿದ ಕೋವಿಡ್ ರೋಗಿಗಳು

ಸರ್ಕಾರಿ ಆಸ್ಪತ್ರೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದರಿಂದ ಅನೇಕ ರೋಗಿಗಳು ಚಿಕಿತ್ಸೆಗೋಸ್ಕರ ಹೊರಗಡೆ ಕಾಯ್ದಿರುವ ಘಟನೆ ನಡೆದಿದೆ.

jind civil hospital manohar lal visit
jind civil hospital manohar lal visit

ಜಿಂದ್​(ಹರಿಯಾಣ): ಜಿಂದ್​ನಲ್ಲಿನ ಆಸ್ಪತ್ರೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದು, ಈ ವೇಳೆ ಕೊರೊನಾ ರೋಗಿಗಳು ಚಿಕಿತ್ಸೆಗೋಸ್ಕರ ಗಂಟೆಗೂ ಅಧಿಕ ಕಾಲ ಕಾಯ್ದಿರುವ ಘಟನೆ ನಡೆದಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್​ಲಾಲ್​ ಖಟ್ಟರ್​​ ಜಿಂದ್​​ನಲ್ಲಿರುವ ಸಿವಿಲ್​​ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ, ಅವರೊಂದಿಗೆ ಅಧಿಕಾರಿಗಳು ಮತ್ತು ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿ ಸಹ ಇದ್ದರು. ಹೀಗಾಗಿ ಆಸ್ಪತ್ರೆಯ ಎಲ್ಲ ಗೇಟ್​ ಬಂದ್​ ಮಾಡಲಾಗಿತ್ತು. ಇದರಿಂದಾಗಿ ಅನೇಕ ರೋಗಿಗಳು ಗೇಟ್​ ಹೊರಗಡೆ ಕಾಯ್ದಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಕೆಲ ರೋಗಿಗಳು ನರಳಾಟ ನಡೆಸಿರುವ ಘಟನೆ ನಡೆದಿದೆ.

ಸಿವಿಲ್​​ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಮನೋಹರ್​ಲಾಲ್​ ಖಟ್ಟರ್​​

ಸುಮಾರು ನಿಮಿಷಗಳ ಕಾಲ ಅಲ್ಲಿನ ವೈದ್ಯರೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿರುವ ಕಾರಣ ರೋಗಿಗಳು ಹೊರಗಡೆ ಕಾಯ್ದಿದ್ದಾರೆ. ಈ ವೇಳೆ, ಕೆಲ ರೋಗಿಗಳು ಅನೇಕ ಸಲ ಬಂದ್​ ಮಾಡಿದ್ದ ಬಾಗಿಲು ತಟ್ಟಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ಕೊರೊನಾ ಅಟ್ಟಹಾಸಕ್ಕೆ ಚಿದಂಬರಂ ನಗರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಬಲಿ

ಕೆಲ ರೋಗಿಗಳ ಪರಿಸ್ಥಿತಿ ಹದಗೆಡಲು ಪ್ರಾರಂಭಿಸುತ್ತಿದ್ದಂತೆ ಹೊರಗಡೆ ಕಾಯುತ್ತಿದ್ದ ಅನೇಕರು ಬಾಗಿಲು ಬಡಿಯಲು ಶುರು ಮಾಡಿದ್ದಾರೆ. ನಂತರ ಪೊಲೀಸರು ಬಾಗಿಲು ತೆರೆದಿದ್ದಾರೆ.

Last Updated : Apr 29, 2021, 5:30 PM IST

ABOUT THE AUTHOR

...view details