ಕರ್ನಾಟಕ

karnataka

ಜೀವನ್ಮರಣದ ವೇಳೆ ಸಿಗದ ಪ್ರಾಣವಾಯು: ತಮಿಳುನಾಡಿನಲ್ಲಿ 11 ಸೋಂಕಿತರ ದಾರುಣ ಸಾವು

By

Published : May 5, 2021, 7:19 AM IST

Updated : May 5, 2021, 7:39 AM IST

ತಮಿಳುನಾಡಿನಲ್ಲಿ ಕೊರೊನಾ ಎರಡನೇ ಅಲೆಗೆ ಅತಿ ಹೆಚ್ಚು ಬಾಧಿತವಾದ ಚೆಂಗಲ್ಪಟ್ಟು ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 10ಕ್ಕೂ ಅಧಿಕ ಜನ ಕೊರೊನಾ ಸೋಂಕಿತರು ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯ ದುರ್ಘಟನೆ ಕರ್ನಾಟಕದ ಚಾಮರಾಜನಗರ ಜಿಲ್ಲೆ, ಕಲಬುರಗಿ ಹಾಗು ಯಲಹಂಕದಲ್ಲಿ ನಡೆದಿತ್ತು.

11 corona patients die at Chengalpattu Government Hospital due to Oxygen deficiency
ತಮಿಳುನಾಡಿನಲ್ಲಿ ಆಮ್ಲಜನಕದ ಕೊರತೆಯಿಂದ 11 ಕೊರೊನಾ ಸೋಂಕಿತರು ಬಲಿ

ಚೆಂಗಲ್ಪಟ್ಟು (ತಮಿಳುನಾಡು):ದೇಶದಲ್ಲಿ ಕೋವಿಡ್​ ಎರಡನೇ ಅಲೆಯ ಅಟ್ಟಹಾಸದ ನಡುವೆ ಆಮ್ಲಜನಕದ ಕೊರತೆ ಗಂಭೀರ ಸ್ವರೂಪ ಪಡೆದಿದೆ. ಇದೀಗ ತಮಿಳುನಾಡಿನಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ.

ತಮಿಳುನಾಡಿನಲ್ಲಿ 11 ಸೋಂಕಿತರ ದಾರುಣ ಸಾವು

ಇಲ್ಲಿನ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಎದುರಾದ ಆಕ್ಸಿಜನ್​ ಕೊರತೆಯಿಂದ ಹನ್ನೊಂದು ಜನರ ಪ್ರಾಣಪಕ್ಷಿ ಹಾರಿ ಹೋಗಿದೆ.

ಇದನ್ನೂ ಓದಿ:ಅಂತರ್‌ರಾಜ್ಯ ಪ್ರಯಾಣಕ್ಕೆ RT-PCR ವರದಿ ಬೇಕಿಲ್ಲ: ಕೋವಿಡ್‌ ಪರೀಕ್ಷೆಗೆ ಕೇಂದ್ರದಿಂದ ಹೊಸ ನಿಯಮ

ತಮಿಳುನಾಡಿನಲ್ಲಿ ಮಂಗಳವಾರ ಕೊರೊನಾ ಪ್ರಕರಣಗಳ ಸಂಖ್ಯೆ 21,000 ಗಡಿ ದಾಟಿದೆ. ಒಟ್ಟು 21,228 ಜನರು ಸೋಂಕಿಗೆ ತುತ್ತಾಗಿದ್ದು, 144 ಜನರು ಸಾವನ್ನಪ್ಪಿದ್ದಾರೆ. ಮಾರ್ಚ್ 5 ರಿಂದ ಹೊಸ ಕೊರೊನಾ ಸೋಂಕುಗಳ ಪ್ರಮಾಣ ಹೆಚ್ಚುತ್ತಿದೆ. ದೈನಂದಿನ ಪ್ರಕರಣಗಳ ಉಲ್ಬಣದಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,25,230 ಕ್ಕೆ ತಲುಪಿದೆ.

ರಾಜಧಾನಿ ಚೆನ್ನೈನಲ್ಲಿ ಮಂಗಳವಾರ 6,228 ಜನರು ಕೊರೊನಾ ಸೋಂಕಿಗೆ ತುತ್ತಾದರೆ, ಎರಡನೇ ಸ್ಥಾನದಲ್ಲಿರುವ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 1,608 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

Last Updated : May 5, 2021, 7:39 AM IST

ABOUT THE AUTHOR

...view details