ಕರ್ನಾಟಕ

karnataka

By

Published : Dec 12, 2021, 9:38 AM IST

ETV Bharat / bharat

Helicopter Tragedy : ಲ್ಯಾನ್ಸ್​​ ನಾಯಕ್ ಸಾಯಿ ತೇಜ ಪಾರ್ಥಿವ ಶರೀರ ಆಂಧ್ರದ ಚಿತ್ತೂರಿಗೆ ರವಾನೆ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿದ್ದ ಲ್ಯಾನ್ಸ್ ನಾಯಕ್ ಸಾಯಿ ತೇಜ ಪಾರ್ಥಿವ ಶರೀರವನ್ನು ರಸ್ತೆ ಮಾರ್ಗದ ಮೂಲಕ ಆಂಧ್ರದ ಚಿತ್ತೂರಿಗೆ ರವಾನೆ ಮಾಡಲಾಗಿದೆ.

Coonoor  Tragedy : lance naik sai teja mortal shifts bengaluru to chittor , andhra
Coonoor Tragedy : ಲ್ಯಾನ್ಸ್​​ ನಾಯಕ್ ಸಾಯಿ ತೇಜ ಪಾರ್ಥಿವ ಶರೀರ ಆಂಧ್ರದ ಚಿತ್ತೂರಿಗೆ ರವಾನೆ

ಬೆಂಗಳೂರು:ಕೂನೂರು ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಅವರೊಂದಿಗೆ ಹುತಾತ್ಮರಾದ ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕಮಾಂಡ್​ ಆಸ್ಪತ್ರೆಯಿಂದ ರಸ್ತೆ ಮಾರ್ಗವಾಗಿ ಆಂಧ್ರದ ಚಿತ್ತೂರಿಗೆ ರವಾನಿಸಲಾಗುತ್ತಿದೆ.

ಇದಕ್ಕೂ ಮುನ್ನ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸಾಯಿತೇಜ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಗಿತ್ತು. ಇಂದು ಬೆಳಗ್ಗೆಯೂ ಕಮಾಂಡ್ ಆಸ್ಪತ್ರೆಯಲ್ಲಿ ಗೌರವ ಸಲ್ಲಿಸಲಾಗಿದ್ದು, ಚಿತ್ತೂರಿಗೆ ರವಾನೆ ಮಾಡಲಾಗಿದೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಎಂಬಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಪತನವಾಗಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ, ಸುಮಾರು 13 ಮಂದಿ ಹುತಾತ್ಮರಾಗಿದ್ದು, ಇದರಲ್ಲಿ ಆಂಧ್ರಪ್ರದೇಶ ಮೂಲದ ಸಾಯಿ ತೇಜ ಕೂಡಾ ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ:Helicopter Tragedy: ದುರಂತ ನಡೆದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸ್ಥಳೀಯರ ಆಗ್ರಹ

ABOUT THE AUTHOR

...view details