ಕರ್ನಾಟಕ

karnataka

ಅದಾನಿ ವಿಚಾರ: ತನಿಖೆ ನಡೆಸುವಂತೆ ಆರ್​ಬಿಐ, ಸೆಬಿಗೆ ಕಾಂಗ್ರೆಸ್ ಪತ್ರ

By

Published : Feb 14, 2023, 7:06 PM IST

ಅದಾನಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಜೆಪಿಸಿ ತನಿಖೆಗಾಗಿ ಒತ್ತಾಯಿಸಿ ಇದೇ 17 ರಂದು ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪಕ್ಷ ತಿಳಿಸಿದೆ.

http://10.10.50.85:6060/reg-lowres/14-February-2023/1200-900-17750251-thumbnail-4x3-congnew-aspera_1402newsroom_1676368129_197.JPG
http://10.10.50.85:6060/reg-lowres/14-February-2023/1200-900-17750251-thumbnail-4x3-congnew-aspera_1402newsroom_1676368129_197.JPG

ನವದೆಹಲಿ:ಅದಾನಿ ವಿಚಾರದಲ್ಲಿ ಕೇಂದ್ರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಬಜೆಟ್ ಅಧಿವೇಶನದಲ್ಲಿ ಮತ್ತು ಅದರ ನಂತರವೂ ಜೆಪಿಸಿ ತನಿಖೆಗೆ ಒತ್ತಾಯಿಸುವುದಾಗಿ ಹೇಳಿದೆ. ಅದಾನಿ ಸಮಸ್ಯೆಯ ಕುರಿತು ತನಿಖೆ ನಡೆಸುವಂತೆ ಆರ್‌ಬಿಐ ಮತ್ತು ಸೆಬಿಗೆ ತಾನು ಪತ್ರ ಬರೆದಿರುವುದಾಗಿ ಮತ್ತು ಈ ಸಂಬಂಧ ಫೆಬ್ರವರಿ 17 ರಂದು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುವುದಾಗಿ ಪಕ್ಷವು ಹೇಳಿದೆ. ಇದಕ್ಕೂ ಮುನ್ನ ಫೆಬ್ರವರಿ 6 ರಂದು ಪಕ್ಷವು ದೇಶಾದ್ಯಂತದ ಎಲ್​ಐಸಿ ಮತ್ತು ಆರ್​ಬಿಐ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿತ್ತು.

ಸಂಸತ್ತಿನೊಳಗೆ ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಾಯಕರ ಟೀಕೆಗಳಿಗೆ ಕಡಿವಾಣ ಹಾಕುವ ಕ್ರಮ ವಿರೋಧಿಸಿರುವ ಕಾಂಗ್ರೆಸ್, ಜೆಪಿಸಿ ಬೇಡಿಕೆಯನ್ನು ಮುಂದಿಟ್ಟರೆ ತನ್ನ ಸದಸ್ಯರನ್ನು ಅಮಾನತು ಮಾಡುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದೆ. ಅದಾನಿ ಸಮಸ್ಯೆಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಆರ್‌ಬಿಐ ಮತ್ತು ಸೆಬಿ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ.

ನಮ್ಮ ಹೋರಾಟ ಏನಿದ್ದರು ಪ್ರಧಾನಿ ವಿರುದ್ಧ- ರಮೇಶ್:ನಾವು ಯಾವುದೇ ಖಾಸಗಿ ಹೂಡಿಕೆಯ ವಿರುದ್ಧವಾಗಿಲ್ಲ. ನಮ್ಮ ಹೋರಾಟ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವಾಗಿದೆ ಮತ್ತು ಅವರು ನಿರ್ದಿಷ್ಟ ಕಂಪನಿಯೊಂದಕ್ಕೆ ಒಲವು ತೋರಿದ ಬಂಡವಾಳಶಾಹಿ ಧೋರಣೆಯ ವಿರುದ್ಧವಾಗಿದೆ. ಅದಾನಿ ಜತೆಗಿನ ಪ್ರಧಾನಿ ನಂಟುಗಳ ಬಗ್ಗೆ ಜೆಪಿಸಿ ಮಾತ್ರ ತನಿಖೆ ನಡೆಸಬಹುದು ಎಂದು ಎಐಸಿಸಿ ಸಂವಹನ, ಪ್ರಚಾರ ಮತ್ತು ಮಾಧ್ಯಮದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ನಾವು ಸಮಸ್ಯೆಯ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದರೆ ಟಿಪ್ಪಣಿಗಳನ್ನು ದಾಖಲೆಗಳಿಂದ ತೆಗೆಯಲಾಗುವುದು ಮತ್ತು ಅದು ಸದನದಿಂದ ಅಮಾನತುಗೊಳಿಸುವಿಕೆಗೆ ಕಾರಣವಾಗಬಹುದು ಎಂದು ನಮಗೆ ಬೆದರಿಕೆ ಹಾಕಲಾಗುತ್ತಿದೆ. ಇದು ಈ ಹಿಂದೆ ಎಂದೂ ಕಾಣದಂಥ ಪರಿಸ್ಥಿತಿಯಾಗಿದೆ. ಆದರೆ, ನಾವು ಸುಮ್ಮನಿರುವುದಿಲ್ಲ. ಬಜೆಟ್ ಅಧಿವೇಶನ ಮುಗಿಯುವವರೆಗೂ ಮತ್ತು ಅದರ ನಂತರವೂ ನಾವು ಈ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸುತ್ತೇವೆ. ಈ ನಿಟ್ಟಿನಲ್ಲಿ ಫೆ.17ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದರು.

ರಾಹುಲ್​ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಲ್ಲ:ಇದಕ್ಕೂ ಮುನ್ನ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅದಾನಿ ವಿಚಾರವಾಗಿ ನೀಡಿದ ಹೇಳಿಕೆಯನ್ನು ಇಬ್ಬರು ಅಧ್ಯಕ್ಷರುಗಳು ಕಡತದಿಂದ ತೆಗೆದುಹಾಕಿದ್ದರು ಎಂದು ರಮೇಶ್ ಹೇಳಿದರು. ರಾಹುಲ್ ಗಾಂಧಿ ಕ್ಷಮೆ ಕೇಳುವುದಿಲ್ಲ, ಅವರು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ ಎಂದು ರಮೇಶ್ ಹೇಳಿದರು.

ಅದಾನಿ ವಿಷಯದ ಬಗ್ಗೆ ಜೆಪಿಸಿ ತನಿಖೆಯ ಬೇಡಿಕೆಯ ಬಗ್ಗೆ ಇಡೀ ವಿರೋಧ ಪಕ್ಷಗಳ ಸಮೂಹ ಒಗ್ಗೂಡಿದೆ, ಇದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಅವರು ಪ್ರತಿಪಾದಿಸಿದರು. ನೀವು ತಜ್ಞರ ಸಮಿತಿಯಿಂದ ತನಿಖೆಗೆ ಸಿದ್ಧ ಎಂದು ಸುಪ್ರೀಂಕೋರ್ಟ್‌ಗೆ ಹೇಳುತ್ತಿರುವಿರಿ. ಆದರೆ ನೀವು ಜೆಪಿಸಿ ತನಿಖೆಗೆ ಏಕೆ ಹೆದರುತ್ತಿರುವಿರಿ ಎಂದು ಜೈರಾಂ ರಮೇಶ್ ಪ್ರಶ್ನಿಸಿದರು.

ಅದಾನಿ ವಿಷಯವು ದೇಶದ ಮೂರು ಕೋಟಿ ಸಣ್ಣ ಹೂಡಿಕೆದಾರರನ್ನು ರಕ್ಷಿಸುವ ಮತ್ತು ಅಂಥ ಕೃತ್ಯಗಳನ್ನು ತಡೆಯಬೇಕಾದ ಸಂಸ್ಥೆಗಳನ್ನು ಬಲಪಡಿಸುವ ವಿಷಯವಾಗಿದೆ. ಈ ಹಿಂದೆ ಎರಡು ಪ್ರತ್ಯೇಕ ವಿಷಯಗಳಲ್ಲಿ ಇದೇ ರೀತಿಯ ಜೆಪಿಸಿ ತನಿಖೆಗಳು ನಡೆದಿವೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಹೇಳಿದ್ದಾರೆ. ಹರ್ಷದ್ ಮೆಹ್ತಾ ಮತ್ತು ಕೇತನ್ ಪಾರಿಖ್ ಪ್ರಕರಣಗಳಲ್ಲಿ ಜೆಪಿಸಿ ತನಿಖೆ ನಡೆದಿದೆ. ಎರಡೂ ಜೆಪಿಸಿಗಳಲ್ಲಿ ಆಗಿನ ವಿಪಕ್ಷ ಬಿಜೆಪಿ ನಾಯಕರು ಗಂಭೀರ ಪ್ರಶ್ನೆಗಳನ್ನು ಕೇಳಿದ್ದು ದಾಖಲೆಯೇ ಸರಿ. ಆದರೆ ಈಗ ಬಿಜೆಪಿ ನಾಯಕರು ತನಿಖೆಗೆ ಏಕೆ ಹೆದರುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಇದು ಮೋದಿ-ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್​: ಸ್ಪೀಕರ್ ಎಚ್ಚರಿಕೆ ಹೀಗಿತ್ತು!

ABOUT THE AUTHOR

...view details