ಕರ್ನಾಟಕ

karnataka

ETV Bharat / bharat

ರಾಷ್ಟ್ರವ್ಯಾಪಿ ಪೆಟ್ರೋಲ್​ ಬಂಕ್​ ಮುಂದೆ ಧರಣಿಗೆ ಕಾಂಗ್ರೆಸ್ ನಿರ್ಧಾರ​ - Congress will hold a protest on June 11

ದೇಶಾದ್ಯಂತ ತೈಲ ದರ ಸಾಮಾನ್ಯ ಜನರ ಕೈಗೆಟುಕದ ರೀತಿ ಏರಿಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಪಕ್ಷವು ರಾಷ್ಟ್ರವ್ಯಾಪಿ ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದೆ.

Congress
ಕಾಂಗ್ರೆಸ್

By

Published : Jun 9, 2021, 8:23 AM IST

ಹೈದರಾಬಾದ್:ಕೊರೊನಾ ಎರಡನೇ ಅಲೆಗೆ ಸಿಲುಕಿ ಜನರು ಪರದಾಡುತ್ತಿರಬೇಕಾದರೆ, ಗಾಯದ ಮೇಲೆ ಬರೆ ಎಳೆದಂತೆ ಇಂಧನ ಬೆಲೆ ಗಗನಕ್ಕೆ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಿಸದ ಕೇಂದ್ರ ಸರ್ಕಾರದ ವಿರುದ್ಧ ಜೂನ್ 11ರಂದು ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳ ಮುಂದೆ ಪ್ರತಿಭಟಿಸಲು ಕಾಂಗ್ರೆಸ್ ಮುಂದಾಗಿದೆ.

ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್ ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 100 ರೂ.ಗಳಿಗಿಂತ ಹೆಚ್ಚಾಗಿದೆ.

ಕಳೆದ ವರ್ಷ ಜೂನ್​ನಲ್ಲಿ ಪೆಟ್ರೋಲ್ ಲೀ.ಗೆ 74.93 ರೂ. ಇತ್ತು. ಆದ್ರೆ ಒಂದೇ ವರ್ಷದಲ್ಲಿ 25.07 ರೂ. ಹೆಚ್ಚಳವಾಗಿದೆ. 2014ರಲ್ಲಿ 87 ರೂ.ಗೆ ಏರಿಕೆಯಾಗಿದ್ದು, ಆ ಬಳಿಕ ಇಳಿಕೆ ಕಂಡಿತ್ತು.

ಇದನ್ನೂ ಓದಿ:ಶತಕ ದಾಟಿದರೂ ನಿಲ್ಲದ ಪೆಟ್ರೋಲ್-ಡೀಸೆಲ್​ ದರ: ಇಂದು ಮತ್ತೆ ಬೆಲೆ ಏರಿಕೆ ಬರೆ

ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್,​ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದೆ.

ಇದನ್ನೂ ಓದಿ:ಪೆಟ್ರೋಲ್ ಸೆಂಚುರಿ: ಮಿತಿಮೀರಿದ ಲೂಟಿ - ಕೇಂದ್ರದ ವಿರುದ್ಧ ಕೈ ಟೀಕಾಸ್ತ್ರ!

For All Latest Updates

ABOUT THE AUTHOR

...view details