ಕರ್ನಾಟಕ

karnataka

ETV Bharat / bharat

'ಹೊರಗಿನವರಿಗೆ' ಟಿಕೆಟ್​ ಹಂಚಿಕೆ ಬಿಸಿ ನಡುವೆ ಕುದುರೆ ವ್ಯಾಪಾರದ ಭೀತಿ: ರೆಸಾರ್ಟ್ ಮೊರೆ ಹೋದ ಕೈ ಶಾಸಕರು! - ರೆಸಾರ್ಟ್ ಮೊರೆ ಹೋದ ಕೈ ಶಾಸಕರು

ರಾಜಸಭೆ ಚುನಾವಣೆಯಲ್ಲಿ 'ಹೊರಗಿನವರಿಗೆ' ಟಿಕೆಟ್​ ಹಂಚಿಕೆ ಮಾಡಿರುವ ಬಿಸಿ ಎದುರಿಸುತ್ತಿರುವ ಕಾಂಗ್ರೆಸ್​​ಗೆ ಈಗ ಕುದುರೆ ವ್ಯಾಪಾರದ ಆತಂಕವೂ ಉಂಟಾಗಿದೆ. ಆದ್ದರಿಂದ ಹರಿಯಾಣ ಮತ್ತು ರಾಜಸ್ಥಾನದಲ್ಲಿ ತನ್ನ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್​ ಮಾಡಿದೆ.

Congress trying to deal with RS poll woes
'ಹೊರಗಿನವರಿಗೆ' ಟಿಕೆಟ್​ ಹಂಚಿಕೆ ಬಿಸಿ ನಡುವೆ ಕುದುರೆ ವ್ಯಾಪಾರದ ಭೀತಿ: ರೆಸಾರ್ಟ್ ಮೊರೆ ಹೋದ ಕೈ ಶಾಸಕರು!

By

Published : Jun 2, 2022, 9:19 PM IST

ನವದೆಹಲಿ: ಜೂನ್ 10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಟಿಕೆಟ್​ ಹಂಚಿಕೆ​ ವಿಷಯವಾಗಿ ಕಾಂಗ್ರೆಸ್​​ನಲ್ಲಿ ಅಸಮಾಧಾನದ ಹೊಗೆ ಹೆಚ್ಚಾಗಿದೆ. ರಾಜಸ್ಥಾನ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಹೊರಗಿನವರಿಗೆ ಮಣೆ ಹಾಕಿರುವುದು ಸ್ಥಳೀಯ ಮುಖಂಡರಲ್ಲಿ ಅತೃಪ್ತಿಗೆ ಕಾರಣವಾಗಿದೆ. ಇದರ ನಡುವೆ ಶಾಸಕರ ಕುದುರೆ ವ್ಯಾಪಾರದ ಭೀತಿಯನ್ನೂ ಕಾಂಗ್ರೆಸ್​​ ಎದುರಿಸುತ್ತಿದೆ. ಹೀಗಾಗಿ ಉಭಯ ಸಂಕಟಗಳನ್ನು ಕಾಂಗ್ರೆಸ್​​ ಒಟ್ಟಿಗೆ ಪರಿಹರಿಸಿಕೊಳ್ಳಬೇಕಾದ ಅನಿರ್ವಾಯತೆಯಲ್ಲಿ ಸಿಲುಕಿದೆ.

ರಾಜಸ್ಥಾನದ ಮೂರು ರಾಜ್ಯಸಭಾ ಸ್ಥಾನಗಳಿಗೆ ರಂದೀಪ್​ ಸಿಂಗ್​ ಸುರ್ಜೇವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ಕಾಂಗ್ರೆಸ್​​ ಕಣಕ್ಕಿಳಿಸಿದೆ. ಈ ಮೂವರು ಕೂಡ ರಾಜಸ್ಥಾನಕ್ಕೆ ಹೊರಗಿನವರು. ಇತ್ತ, ಮಹಾರಾಷ್ಟ್ರ ಮತ್ತು ಹರಿಯಾಣದ ತಲಾ ಒಂದು ಸ್ಥಾನಕ್ಕೆ ಕ್ರಮವಾಗಿ ಇಮ್ರಾನ್ ಪ್ರತಾಪ್‌ಘರ್ಹಿ ಹಾಗೂ ಅಜಯ್​​ ಮಕೇನ್​ ಅವರಿಗೆ ಮಣೆ ಹಾಕಲಾಗಿದೆ. ಈ ಇಬ್ಬರು ಸಹ ಎರಡು ರಾಜ್ಯಗಳಿಗೆ ಹೊರಗಿನವರೇ ಆಗಿದ್ದಾರೆ.

ಅಚ್ಚರಿ ಎಂದರೆ ರಂದೀಪ್​ ಸಿಂಗ್​ ಸುರ್ಜೇವಾಲಾ ಹರಿಯಾಣದವರೇ ಆಗಿದ್ದರೂ, ಅವರನ್ನು ಪಕ್ಕದ ರಾಜಸ್ಥಾನದಿಂದ ಕಣಕ್ಕಿಳಿಸಲಾಗಿದೆ. ಒಂದೇ ವೇಳೆ ಸುರ್ಜೇವಾಲಾ ಹರಿಯಾಣದಿಂದಲೇ ಸ್ಪರ್ಧಿಸಿದರೆ, ಈ ರಾಜ್ಯದಲ್ಲಿ ಅತೃಪ್ತಿಯೇ ಉಂಟಾಗುತ್ತಿರಲಿಲ್ಲವೇನೋ. ಆದರೆ, ಅಜಯ್​​ ಮಕೇನ್​ಗೆ ಟಿಕೆಟ್​ ನೀಡಿರುವುದು ಹರಿಯಾಣದ ಕಾಂಗ್ರೆಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ, ಕೆಲ ಶಾಸಕರೂ ಪಕ್ಷದ ಸಭೆಗಳಿಂದಲೇ ದೂರು ಉಳಿಯುವ ಮೂಲಕ ತಮ್ಮ ಸಿಟ್ಟು ಹೊರ ಹಾಕಿದ್ದಾರೆ.

ರೆಸಾರ್ಟ್​ಗಳ ಮೊರೆ ಹೋದ 'ಕೈ': ಟಿಕೆಟ್​​ ವಿಚಾರವಾಗಿ ಪಕ್ಷದಲ್ಲಿನ ಅಸಮಾಧಾನದ ನಡುವೆ ತನ್ನ ಶಾಸಕರ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್​​ ರೆಸಾರ್ಟ್​​ ರಾಜಕಾರಣದ ಮೊರೆ ಹೋಗಿದೆ. ಗುರುವಾರ ಹರಿಯಾಣದ ಶಾಸಕರನ್ನು ಛತ್ತೀಸ್​ಗಢದ ಮೈಫೈರ್​​ ರೆಸಾರ್ಟ್​ಗೆ ಸ್ಥಳಾಂತರ ಮಾಡಲಾಗಿದೆ. ಇತ್ತ, ರಾಜಸ್ಥಾನದಲ್ಲೂ ಶಾಸಕರನ್ನು ಜೈಪುರನಿಂದ ಉದಯಪುರ್​ಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆ : ಮುಂದುವರಿದ ಕಾಂಗ್ರೆಸ್ - ಜೆಡಿಎಸ್‍ ಮೈತ್ರಿ ಗೊಂದಲ

ABOUT THE AUTHOR

...view details