ಕರ್ನಾಟಕ

karnataka

By

Published : May 16, 2021, 11:05 AM IST

ETV Bharat / bharat

ಕಾಂಗ್ರೆಸ್ ಸಂಸದ ರಾಜೀವ್ ಶತವ್​ ನಿಧನ... ಕಂಬನಿ ಮಿಡಿದ ಕೈ ನಾಯಕರು

ಮಹಾರಾಷ್ಟ್ರದ ಹಿಂಗೋಲಿ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜೀವ್ ಶತವ್ ಇಂದು ನಿಧನರಾಗಿದ್ದು, ಕೈ ನಾಯಕರು ಟ್ವೀಟ್​ ಮಾಡಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

Congress MP Rajeev Satav passes away
ಕಾಂಗ್ರೆಸ್ ಸಂಸದ ರಾಜೀವ್ ಸಾತವ್​ ನಿಧನ

ಪುಣೆ (ಮಹಾರಾಷ್ಟ್ರ): ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದ ಕಾಂಗ್ರೆಸ್ ಸಂಸದ ರಾಜೀವ್ ಶತವ್​ (46) ಇಂದು ಪುಣೆಯ ಜಹಾಂಗೀರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೋವಿಡ್​ ದೃಢಪಟ್ಟ ಬಳಿಕ ಕಳೆದ ಏಪ್ರಿಲ್ 23ರಿಂದ ಜಹಾಂಗೀರ್ ಆಸ್ಪತ್ರೆಯಲ್ಲಿ ರಾಜೀವ್ ಚಿಕಿತ್ಸೆ ಪಡೆಯುತ್ತಿದ್ದರು. ಇವರ ವರದಿ ನೆಗೆಟಿವ್​ ಕೂಡ ಬಂದಿದ್ದು, ವೈದ್ಯರು ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದರು. ಆದರೆ ನಿನ್ನೆ ಮತ್ತೆ ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಐಸಿಯುಗೆ ಶಿಫ್ಟ್​ ಮಾಡಲಾಗಿತ್ತು. ಅಲ್ಲದೇ ಹೊಸ ಬಗೆಯ ಸೋಂಕಿಗೆ ಒಳಗಾಗಿರುವುದೂ ರಕ್ತ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು.

ಇಂದು ಬೆಳಗ್ಗೆ ರಾಜೀವ್ ಶತವ್​ ನಿಧನರಾಗಿರುವುದಾಗಿ ಕಾಂಗ್ರೆಸ್​ ರಾಷ್ಟ್ರೀಯ ವಕ್ತಾರ ರಂದೀಪ್​ ಸಿಂಗ್​ ಸುರ್ಜೇವಾಲ ಟ್ವೀಟ್​ ಮಾಡಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಮುಖಂಡ ರಾಹುಲ್​ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಗಣ್ಯರು ತಮ್ಮ ಸಂಸದನ ಸಾವಿಗೆ ಕಂಬನಿ ಮಿಡಿದಿದ್ದಾರೆ.

ರಾಜೀವ್ ಶತವ್ ಮಹಾರಾಷ್ಟ್ರದ ಹಿಂಗೋಲಿ ಕ್ಷೇತ್ರದ ಸಂಸದರಾಗಿದ್ದು, 2020ರ ಸೆಪ್ಟೆಂಬರ್ 21ರಂದು ಕೃಷಿ ಕಾನೂನುಗಳ ಚರ್ಚೆ ವಿಚಾರವಾಗಿ ಶತವ್​ ಮತ್ತು ಇತರ ಏಳು ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.

ABOUT THE AUTHOR

...view details