ಕರ್ನಾಟಕ

karnataka

ETV Bharat / bharat

ಮಹಿಳಾ ವೈದ್ಯೆ ಹಣೆಗೆ ಕುಂಕುಮ ಹಚ್ಚಿದ ಕಾಂಪೌಂಡರ್​... ನೌಕರಿಯಿಂದ ವಜಾ ಮಾಡಿದ್ದಕ್ಕೆ ಸೇಡು!

ಕೆಲಸದಿಂದ ವಜಾ ಮಾಡಿದ್ದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಕಾಂಪೌಂಡರ್​ವೋರ್ವ ಮಹಿಳಾ ವೈದ್ಯೆ ಹಣೆಗೆ ಕುಂಕುಮ ಹಚ್ಚಿರುವ ಘಟನೆ ಬಿಹಾರದಲ್ಲಿ ನಡೆದಿದೆ.

By

Published : Jul 13, 2021, 11:55 PM IST

Updated : Jul 14, 2021, 8:19 AM IST

Samastipur crime news
Samastipur crime news

ಸಮಸ್ತಿಪುರ್​​(ಬಿಹಾರ):ನೌಕರಿಯಿಂದ ವಜಾ ಮಾಡಿದ್ದಕ್ಕಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಕಾಂಪೌಂಡರ್​​ವೋರ್ವ ವಿಭಿನ್ನವಾಗಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ಬಿಹಾರದ ಸಮಸ್ತಿಪುರ್​ದಲ್ಲಿ ಈ ವಿಚಿತ್ರ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕಾಂಪೌಂಡರ್​ ಆಗಿ ಕೆಲಸ ಮಾಡುತ್ತಿದ್ದ ಸಮಿತ್​ ಕುಮಾರ್​​​ ಕಳೆದ ಕೆಲ ದಿನಗಳ ಹಿಂದೆ ವಜಾಗೊಂಡಿದ್ದನು. ಇದರಿಂದ ಕೋಪಗೊಂಡು ಮಹಿಳಾ ವೈದ್ಯೆಯ ಹಣೆಗೆ ಬಲವಂತವಾಗಿ ಕುಂಕುಮ(ಸಿಂಧೂರ) ಹಚ್ಚಿದ್ದಾನೆ. ತದನಂತರ ಸೆಲ್ಫಿ ತೆಗೆದುಕೊಂಡು ಫೋಟೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಿದ್ದಾನೆ. ಈ ಫೋಟೋ ವೈರಲ್​ ಆಗುತ್ತಿದ್ದಂತೆ ವೈದ್ಯೆ-ಕಾಂಪೌಂಡರ್​ ಮದುವೆಯಾಗಿದ್ದಾರೆಂದು ಅನೇಕರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಫೋಟೋದಲ್ಲಿ ಕಾಣಿಸಿಕೊಂಡಿರುವ ಮಹಿಳಾ ವೈದ್ಯೆ ಜಿಲ್ಲೆಯ ವೈದ್ಯಕೀಯ ಅಧಿಕಾರಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ವೈದ್ಯೆ ಹಣೆಗೆ ಸಿಂಧೂರ ಹಚ್ಚಿದ ಕಾಂಪೌಂಡರ್​

ಇದನ್ನೂ ಓದಿರಿ: ಮೇಕೆಗೆ ಒಂದು ಕೋಟಿ ರೂ. ಫಿಕ್ಸ್ ಮಾಡಿದ ಮಾಲೀಕ: ಕಾರಣವೇನು ಗೊತ್ತಾ?

ಘಟನೆಗೆ ಸಂಬಂಧಿಸಿದಂತೆ ದಲ್ಸಿಂಗ್​ ಸರಾಯ್​ ಪೊಲೀಸ್ ಠಾಣೆಯಲ್ಲಿ ವೈದ್ಯೆ ದೂರು ದಾಖಲು ಮಾಡಿದ್ದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಸಮಿತ್​​ ಕುಮಾರ್​ಗೆ ಕೆಲಸದಿಂದ ತೆಗೆದು ಹಾಕಿರುವ ಕಾರಣ ಆಕ್ರೋಶಗೊಂಡಿದ್ದನು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ತಿಳಿಸಿದ್ದಾರೆ. ಈಗಾಗಲೇ ಆತನಿಗೋಸ್ಕರ ಶೋಧ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

Last Updated : Jul 14, 2021, 8:19 AM IST

ABOUT THE AUTHOR

...view details