ಕರ್ನಾಟಕ

karnataka

ETV Bharat / bharat

ಪೊಲೀಸ್ ಆಯುಕ್ತರಾದ್ರು ಮಟನ್ ವಾಲೆ ಚಾಚಾ... ಯಾಕೆ ಈ ಮಾರುವೇಷ!? - ಸಾಮಾನ್ಯ ವ್ಯಕ್ತಿಯಂತೆ ವೇಷ ತೊಟ್ಟ ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್

ಜನರ ಸಮಸ್ಯೆಗಳಿಗೆ ಆರಕ್ಷಕರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆಯೇ ಎನ್ನುವುದನ್ನು ಪರೀಕ್ಷಿಸಲು ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್ ಅವರು ಸಾಮಾನ್ಯ ವ್ಯಕ್ತಿಯಂತೆ ವೇಷ ಧರಿಸಿ, ಪೊಲೀಸ್​ ಠಾಣೆಗಳಿಗೆ ತೆರಳಿ ದೂರುಗಳನ್ನು ದಾಖಲಿಸಿದ್ದಾರೆ.

Commissioner disguises himself as layman to monitor Pimpri Chinchwad Police
ಮಾರುವೇಷದಲ್ಲಿ ಪೊಲೀಸರ ಕಾರ್ಯಪ್ರವೃತ್ತಿ ಪರೀಕ್ಷೆ ನಡೆಸಿದ ಪೊಲೀಸ್ ಆಯುಕ್ತ

By

Published : May 9, 2021, 8:30 AM IST

Updated : May 9, 2021, 10:49 AM IST

ಪಿಂಪ್ರಿ-ಚಿಂಚ್ವಾಡ್ (ಮಹಾರಾಷ್ಟ್ರ): ಕೈಗಾರಿಕಾ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ನಗರದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಜನರು ದಿನಕ್ಕೆ ನೂರಾರು ದೂರುಗಳನ್ನು ಹೊತ್ತು ಪೊಲೀಸ್​ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.

ಜನರ ಸಮಸ್ಯೆಗಳಿಗೆ ಆರಕ್ಷಕರು ಸ್ಪಂದಿಸುತ್ತಾರೆಯೇ ಎಂದು ಪೊಲೀಸರ ಕಾರ್ಯಪ್ರವೃತ್ತಿ ಗಮನಿಸುವ ಸಲುವಾಗಿ ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್ ಅವರು ಬುಧವಾರ ಸಾಮಾನ್ಯ ವ್ಯಕ್ತಿಯಂತೆ ವೇಷ ಧರಿಸಿದ್ದರು. ಹಳದಿ ಸಲ್ವಾರ್, ತಲೆಯ ಮೇಲೆ ವಿಗ್​ ಹಾಕಿ, ಅದರ ಮೇಲೆ ಬಿಳಿ ಟೋಪಿ ಹಾಕಿ, ಗಡ್ಡ ಅಂಟಿಸಿಕೊಂಡು ಮಟನ್ ಅಂಗಡಿಯ ಚಾಚಾನಂತೆ ರೆಡಿಯಾಗಿ, ನಗರದ ಮೂರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದಾರೆ.

ಮಾರುವೇಷದಲ್ಲಿ ಪೊಲೀಸರ ಕಾರ್ಯಪ್ರವೃತ್ತಿ ಪರೀಕ್ಷೆ ನಡೆಸಿದ ಪೊಲೀಸ್ ಆಯುಕ್ತ

ಇದನ್ನೂ ಓದಿ:ಬೆಡ್ ಹಂಚಿಕೆ ಸಂಬಂಧ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಕೇಸ್​: ಎಫ್​ಐಆರ್ ದಾಖಲು

ಮೊದಲು ಹಿಂಜೇವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕೆಲ ವ್ಯಕ್ತಿಗಳು ನನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು, ವಾಕಡ್ ಪೊಲೀಸ್ ಠಾಣೆಗೆ ತೆರಳಿ ಸರಗಳ್ಳತನದ ದೂರು ಹಾಗೂ ಪಿಂಪ್ರಿ ಪೊಲೀಸ್ ಠಾಣೆಗೆ ಹೋಗಿ ಆಂಬುಲೆನ್ಸ್ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಎರಡು ಠಾಣೆಗಳಲ್ಲಿ ಪೊಲೀಸರ ವರ್ತನೆ, ಸ್ಪಂದನೆಯನ್ನು ಕಮಿಷನರ್​ ಶ್ಲಾಘಿಸಿದ್ದಾರೆ. ಆದರೆ ಒಂದು ಠಾಣೆಯಲ್ಲಿ ಕೆಟ್ಟ ಅನುಭವವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Last Updated : May 9, 2021, 10:49 AM IST

ABOUT THE AUTHOR

...view details