ತೆಲಂಗಾಣ (ಹೈದರಾಬಾದ್):ಹೈದರಾಬಾದ್ನ ಗೋಶಾಮಹಲ್ ಬಳಿ ದಿಢೀರ್ ಭೂಮಿ ಕುಸಿದಿದೆ. ತರಕಾರಿ ಮಾರಾಟ ಮಾಡುತ್ತಿದ್ದವರ ಕೈಗಾಡಿಗಳೂ ಸೇರಿದಂತೆ ಹಲವು ಕಾರು ಮತ್ತು ಬೈಕ್ಗಳು ಗುಂಡಿಯಲ್ಲಿ ಸಿಲುಕಿಕೊಂಡಿವೆ. ಮೂವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.
ಹೈದರಾಬಾದ್ನಲ್ಲಿ ದಿಢೀರ್ ಕುಸಿದ ಒಳಚರಂಡಿ ಕಾಲುವೆ!
ಹೈದರಾಬಾದ್ನಲ್ಲಿ ಇದ್ದಕ್ಕಿದ್ದಂತೆ ಭೂಮಿ ಕುಸಿಯಿತು. ಒಳಚರಂಡಿ ಕಾಲುವೆ ಇದಾಗಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ.
Collapsed drainage canal in Hyderabad
ಈ ಪ್ರದೇಶದಲ್ಲಿ ಪ್ರತಿ ಶುಕ್ರವಾರ ಮಾರುಕಟ್ಟೆ ನಡೆಯುತ್ತದೆ. ಎಂದಿನ ವಾರದಂತೆ ಇಂದು ಸಹ ಮಾರುಕಟ್ಟೆ ನಡೆಯುತ್ತಿದ್ದಾಗ ಭೂಮಿ ದಿಢೀರ್ ಬಿರುಕು ಬಿಟ್ಟಿತು. ಒಳಚರಂಡಿ ಕಾಲುವೆ ಇದಾಗಿದ್ದು ದೊಡ್ಡ ಅನಾಹುತ ತಪ್ಪಿದೆ. ತರಕಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ರಸ್ತೆಯಲ್ಲಿ ಹೆಚ್ಚು ವಾಹನ ದಟ್ಟಣೆ ಇಲ್ಲದೇ ಇರುವುದರಿಂದ ದುರಂತ ತಪ್ಪಿದೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕನ್ನಡಿಗರಿಗೆ ಗ್ರೂಪ್ ಸಿ, ಡಿ ದರ್ಜೆ ಉದ್ಯೋಗ ಮೀಸಲಾತಿಯ ಖಾಸಗಿ ವಿಧೇಯಕ ಅಂಗೀಕಾರ