ಕರ್ನಾಟಕ

karnataka

ಅದಾನಿ ವಿವಾದ ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಕೇಜ್ರಿವಾಲ್ ತೀವ್ರ ವಾಗ್ದಾಳಿ..

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಅದಾನಿ ಸಮಸ್ಯೆಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

By

Published : Mar 28, 2023, 10:44 PM IST

Published : Mar 28, 2023, 10:44 PM IST

CM Kejriwal
ಸಿಎಂ ಕೇಜ್ರಿವಾಲ್

ನವದೆಹಲಿ:ದೆಹಲಿಮುಖ್ಯಮಂತ್ರಿ ಮತ್ತು ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಮಂಗಳವಾರ ದೆಹಲಿ ವಿಧಾನಸಭೆಯಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಅದಾನಿ ವಿವಾದವನ್ನು ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು, ಕೇಜ್ರಿವಾಲ್ ಅವರು ವಿಧಾನಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದರು. ಈ ಸಂದರ್ಭದಲ್ಲಿ ಅವರು ಮೋದಿಯನ್ನು ಸ್ವಾತಂತ್ರ್ಯದ ನಂತರ ಅತ್ಯಂತ ಭ್ರಷ್ಟ ಪ್ರಧಾನಿ ಎಂದು ಕರೆದರು. ಈ ಮೂಲಕ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಕ್​ ಸಮರ ನಡೆಸಿದರು.

ಕೇಂದ್ರ ಸರ್ಕಾರದಿಂದ ವ್ಯಾಪಕವಾಗಿ ಲೂಟಿ- ಸಿಎಂ ಕೇಜ್ರಿವಾಲ್​:ಕೇಂದ್ರ ಸರ್ಕಾರದಿಂದ ವ್ಯಾಪಕವಾಗಿ ಲೂಟಿ ನಡೆಯುತ್ತಿದೆ. ಕಾಂಗ್ರೆಸ್ 75 ವರ್ಷಗಳಲ್ಲಿ ಲೂಟಿ ಮಾಡಿದ್ದಕ್ಕಿಂತ ಹೆಚ್ಚಿನ ಲೂಟಿಯನ್ನು ಅವರು ಏಳು ವರ್ಷಗಳಲ್ಲೇ ಮಾಡಿದ್ದಾರೆ. ದೇಶವು ಕಷ್ಟದ ಸಮಯದಲ್ಲಿ ಮುನ್ನಡೆಯುತ್ತಿದೆ. ಈ ಪರಿಸ್ಥಿತಿಯ ಬಗ್ಗೆ ನಾವು ತೀವ್ರ ಚಿಂತಿತರಾಗಿದ್ದೇವೆ ಎಂದು ಕೇಜ್ರಿವಾಲ್ ಅವರು ಗಂಭೀರವಾಗಿ ಆರೋಪಿಸಿದರು.

ಇದನ್ನೂ ಓದಿ:ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಕ್ಸಲರಿಂದ ಐಇಡಿ ಸ್ಫೋಟ: ಇಬ್ಬರು ಬಿಎಸ್‌ಎಫ್ ಯೋಧರಿಗೆ ಗಾಯ

ಕಡಿಮೆ ಶಿಕ್ಷಣ ಪಡೆದಿರುವ ಪ್ರಧಾನಿ ಮೋದಿ- ಸಿಎಂ ಕೇಜ್ರಿವಾಲ್​: ಪ್ರಧಾನಿ ನರೇಂದ್ರ ಮೋದಿ ಕಡಿಮೆ ಶಿಕ್ಷಣ ಪಡೆದಿದ್ದಾರೆ ಮತ್ತು ಅವರು ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಅದಾನಿ ಜೊತೆಗೆ ಪ್ರಧಾನಿ ಮೋದಿ ಯಾವ ರೀತಿಯ ಸಂಬಂಧ ಹೊಂದಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಪ್ರಶ್ನಿಸಿದರು.

ಇದನ್ನೂ ಓದಿ:101 ಕೇಸ್​ ಎದುರಿಸುತ್ತಿರುವ ಮಾಫಿಯಾ ಡಾನ್​ ಅತೀಕ್​ ಅಹ್ಮದ್​: ಕಿಡ್ನಾಪ್​ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ

ಅದಾನಿಯನ್ನು ಎಲ್ಲಾ ಏಜೆನ್ಸಿಗಳಿಂದ ರಕ್ಷಿಸುವಲ್ಲಿ ನಿರತರಾದ ಮೋದಿ- ಕೇಜ್ರಿವಾಲ್​: ಪಿಎಂ ಮೋದಿ ಎಂಥ ಸ್ವಾರ್ಥಿ ಎಂದರೆ, ಅದಾನಿಯೊಂದಿಗೆ ಸ್ನೇಹದ ವಿಚಾರವಿರದ್ದರೆ ಅವರು ಇಷ್ಟೆಲ್ಲಾ ಮಾಡುತ್ತಿರಲಿಲ್ಲ. ಪ್ರಧಾನಿ ಮೋದಿ ಅವರು ಅದಾನಿಯನ್ನು ಎಲ್ಲಾ ಏಜೆನ್ಸಿಗಳಿಂದ ರಕ್ಷಿಸುವಲ್ಲಿ ನಿರತರಾಗಿದ್ದಾರೆ. ಅಲ್ಲಿ ಯಾವ ರೀತಿಯ ಸ್ನೇಹವಿದೆ ಎಂದು ತಿಳಿಯುವ ಕುತೂಹಲ ಮೂಡಿತು. ಅವರನ್ನು ಉಳಿಸಲು ಅವರು ಎಲ್ಲವನ್ನೂ ಪಣಕ್ಕಿಡಲು ಸಿದ್ಧರಾಗಿದ್ದಾರೆ ಎಂದು ಕೇಜ್ರಿವಾಲ್​ ವಾಗ್ದಾಳಿ ನಡೆಸಿದರು.

ಇದಕ್ಕೂ ಮುನ್ನ ಬಿಜೆಪಿ ಶಾಸಕರು ಚರ್ಚೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಸದನವನ್ನು ಎರಡು ಬಾರಿ ಮುಂದೂಡಲಾಗಿತ್ತು. ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ರೂಲಿಂಗ್ ನೀಡಿ ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರಿಗೆ ಪ್ರಧಾನಿ ಹೆಸರನ್ನು ಹೇಳದಂತೆ ಕೇಳಿಕೊಂಡರು.

ಇದನ್ನೂ ಓದಿ:ದೇವೇಂದ್ರ ಫಡ್ನವೀಸ್ ಮನೆ ಮುಂದೆ ಬಾಂಬ್ ಇಡುವುದಾಗಿ ಬೆದರಿಕೆ ಕರೆ: ಆರೋಪಿ ಅರೆಸ್ಟ್

ಇದನ್ನೂ ಓದಿ:ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಲು ಬುಡಕಟ್ಟು ನಾಯಕರಿಗೆ ಅವಕಾಶ ನಿರಾಕರಣೆ: ಗೃಹ ಬಂಧನ

ABOUT THE AUTHOR

...view details