ಕರ್ನಾಟಕ

karnataka

By

Published : Dec 9, 2020, 7:57 AM IST

ETV Bharat / bharat

'ಸಿಎಂ ಆದವರು ಜನರಿಗೆ ಸೇವೆ ಸಲ್ಲಿಸಬೇಕು'- ವಿನೋದ್ ಸೋಂಕರ್

ನಾನು ಡಿಸೆಂಬರ್ 13 ರಂದು ವಿವೇಕಾನಂದ ಮೈದಾನಕ್ಕೆ ತೆರಳಲಿದ್ದೇನೆ. ತ್ರಿಪುರದ ಜನರನ್ನು ಅಲ್ಲಿಗೆ ಬರಲು ಹೇಳಿ, ನಾನು ಸಿಎಂ ಆಗಿ ಉಳಿಯಬೇಕೇ ಎಂದು ಅವರನ್ನು ಕೇಳುತ್ತೇನೆ. ಒಂದು ವೇಳೆ ಜನರು ನನ್ನನ್ನು ಬೆಂಬಲಿಸದಿದ್ದರೆ, ನಾನು ಪಕ್ಷದ ಹೈಕಮಾಂಡ್​ಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್​ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ತ್ರಿಪುರ ರಾಜ್ಯ ಉಸ್ತುವಾರಿ ವಿನೋದ್​ ಸೋಂಕರ್​, ಸಿಎಂ ಆದವರು ಜನರಿಗೆ ಸೇವೆ ಸಲ್ಲಿಸಬೇಕು, ಅದಕ್ಕಾಗಿ ಅವರು ಆ ಸ್ಥಾನದಲ್ಲಿ ಮುಂದುವರಿಯಬೇಕು ಎಂದಿದ್ದಾರೆ.

Vinod Sonkar
ವಿನೋದ್ ಸೋಂಕರ್

ತ್ರಿಪುರ / ನವದೆಹಲಿ:'ಬಿಪ್ಲಾಬ್ ಹಟಾವೊ, ಬಿಜೆಪಿ ಬಚಾವೋ' ಘೋಷಣೆ ಕುರಿತು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಪ್ರತಿಕ್ರಿಯಿಸಿದ್ದಾರೆ.

'ಸಿಎಂ ಆದವರು ಜನರಿಗೆ ಸೇವೆ ಸಲ್ಲಿಸಬೇಕು'- ವಿನೋದ್ ಸೋಂಕರ್

ಮಂಗಳವಾರ ನವದೆಹಲಿಯಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ್ದ ಅವರು, ನಾನು ಡಿಸೆಂಬರ್ 13 ರಂದು ವಿವೇಕಾನಂದ ಮೈದಾನಕ್ಕೆ ತೆರಳಲಿದ್ದೇನೆ. ತ್ರಿಪುರದ ಜನರನ್ನು ಅಲ್ಲಿಗೆ ಬರಲು ಹೇಳಿ, ನಾನು ಸಿಎಂ ಆಗಿ ಉಳಿಯಬೇಕೇ ಎಂದು ಅವರನ್ನು ಕೇಳುತ್ತೇನೆ. ಒಂದು ವೇಳೆ ಜನರು ನನ್ನನ್ನು ಬೆಂಬಲಿಸದಿದ್ದರೆ, ಪಕ್ಷದ ಹೈಕಮಾಂಡ್​ಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಪುಲ್ವಾಮಾದಲ್ಲಿ ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳಿಂದ ಎನ್​ಕೌಂಟರ್​

ಈ ಕುರಿತಂತೆ ಮಾತನಾಡಿರುವ ಭಾರತೀಯ ಜನತಾ ಪಕ್ಷದ ತ್ರಿಪುರ ಉಸ್ತುವಾರಿ ವಿನೋದ್ ಸೋಂಕರ್, ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಮತ್ತು ನಾನು ಇಬ್ಬರೂ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡಿದ್ದೇವೆ ಎಂದು ತಿಳಿಸಿದರು. ಸಿಎಂ ಆದವರು ತ್ರಿಪುರದ ಜನರಿಗೆ ಸೇವೆ ಸಲ್ಲಿಸಬೇಕು, ಯಾವುದೇ ಸಮಸ್ಯೆಗಳಿದ್ದರೆ ಪಕ್ಷವು ಅದನ್ನು ಪರಿಶೀಲಿಸುತ್ತದೆ ಎಂದು ಹೇಳಿದರು.

ABOUT THE AUTHOR

...view details