ಕರ್ನಾಟಕ

karnataka

ETV Bharat / bharat

ಉತ್ತರಾಖಂಡದಲ್ಲಿ ಮೇಘಸ್ಫೋಟ: ಭಾರಿ ಮಳೆ, ಪ್ರವಾಹಕ್ಕೆ ಮೂವರು ಬಲಿ - ಉತ್ತರಾಖಂಡದಲ್ಲಿ ಮೇಘಸ್ಪೋಟ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಮೇಘ ಸ್ಫೋಟದಿಂದ ಭಾರಿ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

cloudburst in Mando village in Uttarkash
ಮೇಘಸ್ಪೋಟದಿಂದ ಉಂಟಾದ ಅವಾಂತ

By

Published : Jul 19, 2021, 12:29 PM IST

ಉತ್ತರಕಾಶಿ ( ಉತ್ತರಾಖಂಡ ):ಮೇಘಸ್ಫೋಟದಿಂದ ಭಾರಿ, ಮಳೆ ಪ್ರವಾಹ ಉಂಟಾಗಿ ಜಿಲ್ಲೆಯ ಮಾಂಡೋ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ.

ಇಬ್ಬರು ಮಹಿಳೆಯರು ಮತ್ತು ಆರು ವರ್ಷದ ಮಗು ಮೃತಪಟ್ಟಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಮೇಘಸ್ಫೋಟದಿಂದ ಉತ್ತರಕಾಶಿ ಜಿಲ್ಲೆಯ ಮಾಂಡೋ ಮತ್ತು ನಿರಾಕೋಟ್​ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸುಮಾರು 15 ರಿಂದ 20 ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪಡೆ ( ಎಸ್​ಡಿಆರ್​ಎಫ್​ ) ಮತ್ತು ಪೊಲೀಸರು ಆಗಮಿಸಿದ್ದಾರೆ.

ಮೇಘಸ್ಫೋಟದಿಂದ ಉಂಟಾದ ಅವಾಂತರ

ಅವೇಶಗಳಡಿ ಸಿಲುಕಿದ್ದ ಓರ್ವ ಹಿರಿಯ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಭಟ್ವಾಡಿ ಬ್ಲಾಕ್‌ನ ಕಂಕರಡಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ವರದಿಯಾಗಿದೆ. ಭಾನುವಾರ ರಾತ್ರಿ 8.30 ರ ಸುಮಾರಿಗೆ ಭಾರಿ ಮಳೆಯಿಂದ ಮಾಂಡೋ ಗ್ರಾಮದ ಪ್ರವಾಹ ಉಂಟಾಗಿತ್ತು.

ಓದಿ : ಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ.. ನಾಲ್ವರ ಸಜೀವ ದಹನ!

ಮಾಂಡೋ ಗ್ರಾಮಕ್ಕೆ ಎಸ್​ಡಿಆರ್​ಎಫ್​ ತಂಡ, ಭಟ್ವಾಡಿ ಉಪವಿಭಾಗಾಧಿಕಾರಿ, ಸಿಇಒ ಮತ್ತು ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅದೃಷ್ಟವಶಾತ್, ಕೆಲ ಜನರು ನೀರಿನ ಮಟ್ಟ ಹೆಚ್ಚಿಸುತ್ತಿರುವುದನ್ನು ಗಮನಿಸಿ ತಮ್ಮ ಮನೆಗಳಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಹೆಚ್ಚಿ ಅನಾಹುತ ಸಂಭವಿಸುತ್ತಿತ್ತು.

ಮಾಂಡೋ ಗ್ರಾಮದಲ್ಲಿ ಸುಮಾರು 4 ರಿಂದ 5 ಮನೆಗಳು ಕುಸಿದಿದೆ. ಇಲ್ಲಿಯ ದೇವಾನಂದ್ ಭಟ್ ಎಂಬವರ ಕುಟುಂಬದ ಇಬ್ಬರು ಮಹಿಳೆಯರು ಮತ್ತು ಹೆಣ್ಣು ಮಗುವಿನ ಶವಗಳನ್ನು ರಕ್ಷಣಾ ತಂಡ ಪತ್ತೆ ಹಚ್ಚಿದೆ. ಗಾಯಗೊಂಡ ನಾಲ್ವರು ಕಾರ್ಮಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details