ಖರಗ್ಪುರ (ಪ.ಬಂ): ಹವಾಮಾನ ವೈಪರಿತ್ಯ ಹಾಗೂ ನೈಸರ್ಗಿಕ ವಿಕೋಪಗಳು ಇಂದು ವಿಶ್ವಕ್ಕೆ ಬಹುದೊಡ್ಡ ಸವಾಲಾಗಿವೆ. ಇವುಗಳನ್ನು ಸಮರ್ಥವಾಗಿ ಎದುರಿಸಲು ಐಐಟಿ ಸಂಸ್ಥೆಗಳ ಸಂಶೋಧನೆ ಹಾಗೂ ಅಭಿವೃದ್ಧಿ ಪಡಿಸಲು ಹೋರಾಡುತ್ತಿವೆ ಎಂದು ಪ್ರಧಾನಿ ಮೋದಿ ಖರಗ್ಪುರದ ಐಐಟಿಯ 66ನೇ ಘಟಿಕೋತ್ಸವ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಭಾರತವು ತನ್ನ ಸೌರಶಕ್ತಿ ವಲಯದ ಒಕ್ಕೂಟ ವ್ಯವಸ್ಥೆ ಕೈಗೆಟುಕುವ ಪರಿಸರ ಸ್ನೇಹಿ ವಲಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸಿದೆ ಎಂದಿದ್ದಾರೆ. ಹವಾಮಾನ ಬದಲಾವಣೆಯು ಪ್ರಪಂಚದ ಮುಂದೆ ದೊಡ್ಡ ಸವಾಲಾಗಿದೆ. ವಿಪತ್ತು ನಿರ್ವಹಣೆಯ ವಿಷಯದಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ.