ಪುರಿ(ಒಡಿಶಾ) :ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಇಲ್ಲಿನ ಜಗನ್ನಾಥ ದೇವಸ್ಥಾನದಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸಿದರು. ಎರಡು ದಿನಗಳ ಒಡಿಶಾ ಪ್ರವಾಸದಲ್ಲಿರುವ ಸಿಜೆಐ ರಮಣ ಅವರು, ತಮ್ಮ ಕುಟುಂಬ ಸದಸ್ಯರು ಮತ್ತು ಇತರ ನ್ಯಾಯಾಧೀಶರು ಜೊತೆಗೆ ದೇವರ ದರ್ಶನ ಪಡೆದರು.
ಅವರನ್ನು ಸಿಂಗಾದ್ವಾರ ದೇವಸ್ಥಾನದಲ್ಲಿ ಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಸ್ವಾಗತಿಸಿದರು. ಪುರಿ ಜಗನ್ನಾಥ ದೇವಸ್ಥಾನದಲ್ಲಿ ಸುಮಾರು 45 ನಿಮಿಷಗಳವರೆಗೆ ಕಾಲ ಕಳೆದರು.