ಚಿತ್ರಕೂಟ(ಉತ್ತರಪ್ರದೇಶ): ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯಲ್ಲಿ ಭಾರಿ ದುರಂತವೊಂದು ಸಂಭವಿಸಿದೆ. ಮನೆಯ ಹೊರಗಡೆ ಮಲಗಿದ್ದ ಸುಮಾರು 7 ಜನರ ಮೇಲೆ ಟೊಮೆಟೊ ತುಂಬಿದ್ದ ಪಿಕ್ಅಪ್ ವಾಹನವೊಂದು ಹರಿದಿದೆ. ಈ ವೇಳೆ ಸ್ಥಳದಲ್ಲೇ ಆರು ಜನ ಸಾವನ್ನಪ್ಪಿದ್ದು, ವ್ಯಕ್ತಿಯೊಬ್ಬರು ಬದುಕುಳಿದಿದ್ದಾರೆ. ಝಾನ್ಸಿ-ಮಿರ್ಜಾಪುರ ರಾಷ್ಟ್ರೀಯ ಹೆದ್ದಾರಿಯ ಭಾರತ್ಕುಪ್ ಗ್ರಾಮದಲ್ಲಿ ಈ ದುರಂತ ನಡೆದಿದೆ.
ಇಲ್ಲಿ ಕೆಲ ಗ್ರಾಮಸ್ಥರ ಮನೆಗಳು ಹೆದ್ದಾರಿ ಬದಿಯಲ್ಲೇ ಇವೆ. ಹೀಗಾಗಿ ಗ್ರಾಮಸ್ಥರು ತಮ್ಮ ಮನೆಯ ಮುಂದಿನ ಜಾಗದಲ್ಲಿ ಮಲಗುವ ರೂಢಿಯಿದ್ದು, ಎಂದಿನಂತೆ ನಿನ್ನೆ ರಾತ್ರಿ ಸಹ ಕೆಲ ಗ್ರಾಮಸ್ಥರು ಮನೆಯ ಹೊರಗಿನ ಆವರಣದಲ್ಲಿ ಮಲಗಿದ್ದರು. ಇಂದು ನಸುಕಿನ ಜಾವ ನಿಯಂತ್ರಣ ತಪ್ಪಿ ಟೊಮೆಟೊ ತುಂಬಿದ್ದ ಪಿಕ್ಅಪ್ ವಾಹನ ಮನೆ ಮುಂದೆ ಮಲಗಿದ್ದ ಸುಮಾರು ಏಳು ಜನರ ಮೇಲೆ ಹರಿದಿದೆ.